
ನವದೆಹಲಿ (ಅ. 02): ಗ್ರಾಹಕರ ದೃಢೀಕರಣಕ್ಕೆ ಆಧಾರ್ ಸಂಖ್ಯೆ ಬಳಸುವುದನ್ನು ನಿಲ್ಲಿಸುವ ಕುರಿತು ಮತ್ತು ಈಗಾಗಲೇ ಮಾಡಿರುವ ಲಿಂಕ್ ಅನ್ನು ಡೀಲಿಂಕ್ ಮಾಡುವ ಕುರಿತು 15 ದಿನಗಳೊಳಗೆ ವರದಿ ನೀಡಿ ಎಂದು ಟೆಲಿಕಾಂ ಕಂಪೆನಿಗಳಿಗೆ, ವಿಶಿಷ್ಟಗುರುತಿನ ಪ್ರಾಧಿಕಾರ ಸೋಮವಾರ ನಿರ್ದೇಶಿಸಿದೆ.
ಏರ್ಟೆಲ್, ರಿಲಯನ್ಸ್ ಜಿಯೊ, ವೊಡಾಫೋನ್, ಐಡಿಯಾ ಸೇರಿದಂತೆ ಎಲ್ಲ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಈಗಾಗಲೇ ಈ ಸಂಬಂಧ ಸುತ್ತೋಲೆ ಜಾರಿಗೊಳಿಸಲಾಗಿದೆ. 12 ಸಂಖ್ಯೆಗಳ ಬಯೋಮೆಟ್ರಿಕ್ ಐಡಿ ಆಧಾರಿತ ಇಕೆವೈಸಿ ಬಳಕೆಗೆ ಖಾಸಗಿ ಕಂಪೆನಿಗಳಿಗೆ ಅನುಮತಿ ನೀಡುವ ಆಧಾರ್ ಕಾಯ್ದೆಯ ಕಲಂ 57 ಅನ್ನು ಸುಪ್ರೀಂ ಕೋರ್ಟ್ ಕಳೆದ ವಾರ ರದ್ದುಗೊಳಿಸಿ ಆದೇಶ ಜಾರಿಗೊಳಿಸಿದೆ.
ಹೀಗಾಗಿ ಇನ್ನು ಮುಂದೆ ಟೆಲಿಕಾಂ ಕಂಪನಿಗಳು ಈ ಹಿಂದಿನ ರೀತಿಯಲ್ಲಿ ಅರ್ಜಿ ನಮೂನೆ ಬಳಸಿ ಮಾಹಿತಿ ಪಡೆಯುವ, ಫೋಟೋ ಪಡೆದುಕೊಳ್ಳುವ, ಗ್ರಾಹಕರಿಗೆ ಕಾಲ್ಸೆಂಟರ್ ಮೂಲಕ ಕರೆ ಮಾಡಿ ಖಚಿತಪಡಿಸಿಕೊಳ್ಳುವ ಹಳೆಯ ಪದ್ಧತಿ ಜಾರಿ ಮಾಡುವುದು ಅನಿವಾರ್ಯ ಎನ್ನಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.