ಪಕ್ಕದ್ಮನೆಯವ ಕಾಪ್ಟರ್ನಿಂದ ಪುಷ್ಪಾರ್ಚನೆ ಮಾಡಿದ, ನನಗೂ ಹೆಲಿಕಾಪ್ಟರ್'ನಿಂದ ಹೂಮಳೆಗೆ ಅಸ್ತು ಎನ್ನಿ!

Published : Feb 04, 2017, 03:01 AM ISTUpdated : Apr 11, 2018, 01:06 PM IST
ಪಕ್ಕದ್ಮನೆಯವ ಕಾಪ್ಟರ್ನಿಂದ ಪುಷ್ಪಾರ್ಚನೆ ಮಾಡಿದ, ನನಗೂ ಹೆಲಿಕಾಪ್ಟರ್'ನಿಂದ ಹೂಮಳೆಗೆ ಅಸ್ತು ಎನ್ನಿ!

ಸಾರಾಂಶ

ಬೆಂಗಳೂರಿನ ಜನತೆಗೆ ಹೊಸ ಕ್ರೇಜ್ ಹುಟ್ಟುಕೊಂಡಿದೆ. ಅದೇ ಹೆಲಿಕಾಪ್ಟರ್ ಪುಷ್ಪಾರ್ಚನೆ ಹುಚ್ಚು. ಇದು ಯಾವ ಮಟ್ಟಿಗೆ ಬಂದಿದೆ ಅಂತಂದರೆ. ಗೃಹಪ್ರವೇಶಕ್ಕೂ ಆಕಾಶದಿಂದಲೇ ಹೂಮಳೆ ಸುರಿಸಬೇಕು ಎನ್ನುವ ಮಟ್ಟಿಗೆ. ಇಂತಹ ಪ್ರಕರಣ ಕೋರ್ಟ್​​ ಮೆಟ್ಟಿಲೇರಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ

ಬೆಂಗಳೂರು(ಜ.04): ಬೆಂಗಳೂರಿನ ಜನತೆಗೆ ಹೊಸ ಕ್ರೇಜ್ ಹುಟ್ಟುಕೊಂಡಿದೆ. ಅದೇ ಹೆಲಿಕಾಪ್ಟರ್ ಪುಷ್ಪಾರ್ಚನೆ ಹುಚ್ಚು. ಇದು ಯಾವ ಮಟ್ಟಿಗೆ ಬಂದಿದೆ ಅಂತಂದರೆ. ಗೃಹಪ್ರವೇಶಕ್ಕೂ ಆಕಾಶದಿಂದಲೇ ಹೂಮಳೆ ಸುರಿಸಬೇಕು ಎನ್ನುವ ಮಟ್ಟಿಗೆ. ಇಂತಹ ಪ್ರಕರಣ ಕೋರ್ಟ್​​ ಮೆಟ್ಟಿಲೇರಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ

ಮುನಿರಾಜು ಎನ್ನುವವರು ಬೆಂಗಳೂರು ಪೂರ್ವ ತಾಲೂಕಿನ ವರ್ತೂರಿಗೆ ಸಮೀಪದ ಮುಳ್ಳೂರು ಗ್ರಾಮದಲ್ಲಿ ಭವ್ಯ ಬಂಗಲೆಯೊಂದನ್ನು ಕಟ್ಟಿಸಿದ್ದು, ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ. ಇದೇ ತಿಂಗಳ 9ರಂದು ಗೃಹಪ್ರವೇಶವನ್ನ ನಿಗದಿ ಮಾಡಿ ಆಹ್ವಾನ ಪತ್ರಿಕೆಗಳನ್ನೂ ಮುದ್ರಿಸಲಾಗಿತ್ತು. ಇದರಲ್ಲಿ ಹೆಲಿಕಾಫ್ಟರ್'​​ನಿಂದ ಮನೆ ಮೇಲೆ ಅಮೃತ ಘಳಿಗೆಯಲ್ಲಿ ಪುಷ್ಪಾರ್ಚನೆ ನಡೆಯುತ್ತದೆ ಎಂದೂ ಮುದ್ರಿಸಿ ವಿತರಿಸಲಾಗಿತ್ತು. ಆದರೆ, ಈ ವಿಚಾರ ವರ್ತೂರು ಠಾಣೆಯಲ್ಲಿ ಕಾಪ್ಟರ್ ಬಳಕೆಗೆ ಅನುಮತಿ ನಿರಾಕರಿಸಲಾಗಿದೆ. ಇದು ಮನೆ ಮಾಲೀಕನನ್ನು ಕೆರಳಿಸಿದ್ದು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ..

ಈ ಹಿಂದೆ ಮುನಿರಾಜು ಪಕ್ಕದ ಮನೆಯ ಗೃಹಪ್ರವೇಶಕ್ಕೂ ಹೆಲಿಕಾಪ್ಟರ್​'ನಿಂದ ಹೂಮಳೆ ಸುರಿಸಿದ್ದರು. 6 ತಿಂಗಳ ಹಿಂದೆ ಅಭಿಷೇಕ್ ಗೌಡ ಕೂಡ ಕಾಪ್ಟರ್'​ನಿಂದ ಪುಷ್ಪಾರ್ಚನೆ ಮಾಡಿಸಿದ್ದರು.ಹೀಗಾಗಿ ನಮಗೂ ಅವಕಾಶ ಕೊಡಿ ಅನ್ನೋದು ಮಾಲೀಕ ಮುನಿರಾಜು ಹಠ.

ಪಕ್ಕದ ಮನೆಯವರ ರೀತಿ ನನಗೂ ಆಕಾಶದಿಂದ ಹೂಮಳೆ ಸುರಿಸಲು ಅವಕಾಶ ಕೊಡಿ ಎನ್ನುವುದು ಮುನಿರಾಜು ಅವರ ಪ್ರತಿಷ್ಠೆಯ ವಿಚಾರ. ಅಲ್ಲದೇ, ವೈಯಕ್ತಿಕ. ಇಂತಹ ವಿಚಿತ್ರ ನಡೆಯಿಂದ ಕೋರ್ಟ್​ ನಿಲುವು ಏನೆಂಬುದು ಸೋಮವಾರದ ವಿಚಾರಣೆಯಲ್ಲಿ ಸ್ಪಷ್ಟವಾಗಲಿದೆ..

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಹೂದಿಗಳ 'ಬೆಳಕಿನ ಹಬ್ಬ'ದಂದೇ ಭಯೋತ್ಪಾದಕ ದಾಳಿ! ಹನುಕ್ಕಾ ಫೆಸ್ಟಿವಲ್ ಮಹತ್ವ, ಇತಿಹಾಸ ತಿಳಿಯಿರಿ
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!