ಪೊಲೀಸರನ್ನೇ ಉರುಳಾಡಿಸಿ ಹೊಡೆದ ಭೂಪ..!

Published : Oct 11, 2018, 08:15 AM ISTUpdated : Oct 11, 2018, 04:27 PM IST
ಪೊಲೀಸರನ್ನೇ ಉರುಳಾಡಿಸಿ ಹೊಡೆದ ಭೂಪ..!

ಸಾರಾಂಶ

ವ್ಯಕ್ತಿಯೋರ್ವ ಕರ್ತವ್ಯ ನಿರತ ಸಂಚಾರ ಪೊಲೀಸರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ದಾವ​ಣ​ಗೆರೆ, ಅ.11: ಹೆಲ್ಮೆಟ್‌ ಧರಿಸದ ಕಾರಣ ಬೈಕ್‌ ತಡೆ ಹಿಡಿದರೆಂದು ಕುಪಿತಗೊಂಡ ವ್ಯಕ್ತಿಯೋರ್ವ ಕರ್ತವ್ಯ ನಿರತ ಸಂಚಾರ ಪೊಲೀಸರ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಬುಧವಾರ ನಡೆದಿದೆ. 

ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್‌ ಆಗಿದೆ. ಕಾನ್ಸ್‌ಟೇಬಲ್‌ ನಾರಾ​ಯಣರಾಜ ಅರಸ್‌ ಹಾಗೂ ಎಎ​ಸ್‌ಐ ಅಂಜಿ​ನಪ್ಪ ಹಲ್ಲೆಗೊಳಗಾದವರು. ಪಟ್ಟಣದ ಸಿದ್ದ​ರಾ​ಮೇ​ಶ್ವರ ಬಡಾ​ವಣೆ ವಾಸಿ ಕೆ.ಎ​ಚ್‌.​ರು​ದ್ರ​ಪ್ಪ ಹಲ್ಲೆ ನಡೆಸಿದ ಆರೋಪಿ. 

ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಬೈಕ್‌ ಸವಾರರನ್ನು ತಡೆದು ಸಂಚಾರ ಪೊಲೀಸರು ನಗರದ ಹದಡಿ ರಸ್ತೆ​ಯಲ್ಲಿ ತಡೆದು ದಂಡ ವಿಧಿಸುತ್ತಿದ್ದರು. 

ಇದೇ ವೇಳೆ ಹೆಲ್ಮೆಟ್‌ ಧರಿಸದೇ ಬಂದ ರುದ್ರಪ್ಪನನ್ನು ಕಾನ್ಸ್‌ಟೇಬಲ್‌ ನಾರಾಯಣರಾಜ ತಡೆದಿದ್ದಾರೆ. ಈ ವೇಳೆ ಕುಪಿತಗೊಂಡ ರುದ್ರಪ್ಪ, ಏಕಾಏಕಿ ಪೇದೆ ಮೇಲೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾನೆ. 

ಅಲ್ಲದೇ ಇದನ್ನು ತಡೆಯಲು ಬಂದ ಎಸೈ ಅಂಜಿನಪ್ಪ ಅವರನು ರಸ್ತೆಯಲ್ಲಿ ಉರುಳಾಡಿಸಿ ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಪೊಲೀಸರ ನೆರವಿಗೆ ಆಗಮಿಸಿದ್ದು, ಅವರನ್ನು ರಕ್ಷಿಸಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈತರ ಯೂರಿಯಾ ಕದ್ದು ತಮಿಳ್ನಾಡಿಗೆ ಸಾಗಣೆ ದಂಧೆ ಪತ್ತೆ
ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ