ಪೊಲೀಸರನ್ನೇ ಉರುಳಾಡಿಸಿ ಹೊಡೆದ ಭೂಪ..!

By Web DeskFirst Published Oct 11, 2018, 8:15 AM IST
Highlights

ವ್ಯಕ್ತಿಯೋರ್ವ ಕರ್ತವ್ಯ ನಿರತ ಸಂಚಾರ ಪೊಲೀಸರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ದಾವ​ಣ​ಗೆರೆ, ಅ.11: ಹೆಲ್ಮೆಟ್‌ ಧರಿಸದ ಕಾರಣ ಬೈಕ್‌ ತಡೆ ಹಿಡಿದರೆಂದು ಕುಪಿತಗೊಂಡ ವ್ಯಕ್ತಿಯೋರ್ವ ಕರ್ತವ್ಯ ನಿರತ ಸಂಚಾರ ಪೊಲೀಸರ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಬುಧವಾರ ನಡೆದಿದೆ. 

ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್‌ ಆಗಿದೆ. ಕಾನ್ಸ್‌ಟೇಬಲ್‌ ನಾರಾ​ಯಣರಾಜ ಅರಸ್‌ ಹಾಗೂ ಎಎ​ಸ್‌ಐ ಅಂಜಿ​ನಪ್ಪ ಹಲ್ಲೆಗೊಳಗಾದವರು. ಪಟ್ಟಣದ ಸಿದ್ದ​ರಾ​ಮೇ​ಶ್ವರ ಬಡಾ​ವಣೆ ವಾಸಿ ಕೆ.ಎ​ಚ್‌.​ರು​ದ್ರ​ಪ್ಪ ಹಲ್ಲೆ ನಡೆಸಿದ ಆರೋಪಿ. 

ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಬೈಕ್‌ ಸವಾರರನ್ನು ತಡೆದು ಸಂಚಾರ ಪೊಲೀಸರು ನಗರದ ಹದಡಿ ರಸ್ತೆ​ಯಲ್ಲಿ ತಡೆದು ದಂಡ ವಿಧಿಸುತ್ತಿದ್ದರು. 

ಇದೇ ವೇಳೆ ಹೆಲ್ಮೆಟ್‌ ಧರಿಸದೇ ಬಂದ ರುದ್ರಪ್ಪನನ್ನು ಕಾನ್ಸ್‌ಟೇಬಲ್‌ ನಾರಾಯಣರಾಜ ತಡೆದಿದ್ದಾರೆ. ಈ ವೇಳೆ ಕುಪಿತಗೊಂಡ ರುದ್ರಪ್ಪ, ಏಕಾಏಕಿ ಪೇದೆ ಮೇಲೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾನೆ. 

ಅಲ್ಲದೇ ಇದನ್ನು ತಡೆಯಲು ಬಂದ ಎಸೈ ಅಂಜಿನಪ್ಪ ಅವರನು ರಸ್ತೆಯಲ್ಲಿ ಉರುಳಾಡಿಸಿ ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಪೊಲೀಸರ ನೆರವಿಗೆ ಆಗಮಿಸಿದ್ದು, ಅವರನ್ನು ರಕ್ಷಿಸಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

click me!