ತುಂಗಾ ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ಉಳಿಸಿ ಸಾಹಸ ಮೆರೆದ ಶಿವಮೊಗ್ಗ ಬಾಲಕ

By Suvarna Web DeskFirst Published Sep 24, 2017, 6:02 PM IST
Highlights

ನೀರಿನಲ್ಲಿ ಮುಳುಗುತ್ತಿದ್ದ ಬಾಲಕನ್ನ ಮತ್ತೊಬ್ಬ ಬಾಲಕ ರಕ್ಷಿಸುವುದರ ಮೂಲಕ ಸಾಹಸ ಮೆರೆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಬೆಂಗಳೂರು (ಸೆ.24): ನೀರಿನಲ್ಲಿ ಮುಳುಗುತ್ತಿದ್ದ ಬಾಲಕನ್ನ ಮತ್ತೊಬ್ಬ ಬಾಲಕ ರಕ್ಷಿಸುವುದರ ಮೂಲಕ ಸಾಹಸ ಮೆರೆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ನಿನ್ನೆ  ಸಂಜೆ ಶಿವಮೊಗ್ಗ ಹೊರವಲಯದ ತ್ರಿಮೂರ್ತಿ ನಗರದ ಪಕ್ಕದಲ್ಲಿ ಹರಿಯುವ ತುಂಗಾ ನಾಲೆಯಲ್ಲಿ ಇಬ್ಬರು ಬಾಲಕರು ಈಜಲು ತೆರಳಿದ್ದರು.  ಬಾಲಕರು ಥರ್ಮಾಕೂಲ್ ಶೀಟ್‍ ಸಹಾಯದಿಂದ ಈಜಾಡುತ್ತಿದ್ದರು. ಇದ್ದಕ್ಕಿದ್ದಂತೆ ಶೀಟ್ ಮಗುಚಿ ಇಬ್ಬರೂ ನೀರಿನಲ್ಲಿ ಒದ್ದಾಡತೊಡಗಿದರು. ಈ ವೇಳೆ ದೂರದಲ್ಲಿದ್ದ ಕೃಷ್ಣನಾಯ್ಕ ಎಂಬ ಬಾಲಕ ಇವರ ಒದ್ದಾಟ ನೋಡಿ ನಾಲೆಯ ಹತ್ತಿರ ಬಂದವನೇ ನೀರಿಗೆ ಹಾರಿಬಿಟ್ಟಿದ್ದ. ಜೀವದ ಹಂಗು ತೊರೆದು ನೀರಿಗೆ ಹಾರಿ ದರ್ಶನ್ ಎಂಬ ಬಾಲಕನ್ನ ರಕ್ಷಿಸಿದ್ದಾನೆ. ಘಟನೆಯಲ್ಲಿ  ಮತ್ತೊಬ್ಬ ಬಾಲಕ ಅನೀಶ್ ಮೃತಪಟ್ಟಿದ್ದಾನೆ. ಸಾಹಸ ಮೆರೆದ ಕೃಷ್ಣನಾಯಕ್ ಸಮಯಪ್ರಜ್ಞೆಗೆ ಶಿವಮೊಗ್ಗ ಜನತೆಯ ಶ್ಲಾಘನೆ ವ್ಯಕ್ತವಾಗಿದೆ.

 

 

 

click me!