
ಮೈಸೂರು[ಆ. 15] ರವೀಂದ್ರನಾಥ್ ಠಾಕೋರ್ ಅವರಿಂದ ವಿರಚಿತವಾದ ಜನ ಗಣ ಮನ ನಮ್ಮ ರಾಷ್ಟ್ರಗೀತೆ. ನಮ್ಮದೆ ಮೈಸೂರಿನ 88 ವರ್ಷದ ’ಯುವತಿ’ ಹಾಡಿರುವ ರಾಷ್ಟ್ರಗೀತೆಯನ್ನು ಕೇಳಲೇಬೇಕು. ಎಂಥವರು ಒಂದು ಕ್ಷಣ ಗೌರವ ನೀಡಲೇಬೇಕು.. ಇದು ನಮ್ಮ ಕರ್ತವ್ಯ ಕೂಡಾ.
ರಾಷ್ಟ್ರಗೀತೆಯ 5 ಚರಣಗಳನ್ನು ಈ ಅಜ್ಜಿ ಸಂಪೂರ್ಣವಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ. ಪ್ರತಿ ಸ್ವಾತಂತ್ರ್ಯದಿನದಂದು ಈ ಮಹಾತಾಯಿ ಸರಸ್ವತಿ ಬಡೆಕ್ಕಿಲ ಹಾಡುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ತಾವು ಮಾತ್ರವಲ್ಲದೆ ತಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಪೂರ್ತಿ ಗೀತೆಯನ್ನು ಹೇಳಿಕೊಟ್ಟು ಹಾಡಿಸುತ್ತಿದ್ದಾರೆ.
ಸ್ವತಂತ್ರ ಭಾರತದ 7 ದಶಕಗಳಲ್ಲಿ 7 ಕ್ರೀಡಾ ಸಾಧನೆಯ ಹಿನ್ನೋಟ!
ನಾವು ಇಂದು ರಾಷ್ಟ್ರಗೀತೆಗೆ ಆಯ್ಕೆ ಮಾಡಿಕೊಂಡಿರುವುದು ಗೀತೆಯ ಒಂದು ಚರಣ ಮಾತ್ರ.ಅಜ್ಜಿಯಯನದೊಂದಿಗೆ ರಾಷ್ಟ್ರಗೀತೆಯನ್ನು ಸಂಪೂರ್ಣವಾಗಿ ಕೇಳಿಕೊಂಡು ಬನ್ನಿ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.