ಕತ್ತೆಗಳನ್ನು ಜೈಲಿಗೆ ಕಳಿಸಿದ ಪೊಲೀಸರು: ಅಷ್ಟಕ್ಕೂ ಅವು ಮಾಡಬಾರದ ತಪ್ಪೇನು ಗೊತ್ತೆ ?

Published : Nov 28, 2017, 01:32 PM ISTUpdated : Apr 11, 2018, 12:37 PM IST
ಕತ್ತೆಗಳನ್ನು ಜೈಲಿಗೆ ಕಳಿಸಿದ ಪೊಲೀಸರು: ಅಷ್ಟಕ್ಕೂ ಅವು ಮಾಡಬಾರದ ತಪ್ಪೇನು ಗೊತ್ತೆ ?

ಸಾರಾಂಶ

ಉತ್ತರ ಪ್ರದೇಶದ ಜಲೂನ್ ಜಿಲ್ಲೆಯಲ್ಲಿ 8 ಕತ್ತೆಗಳನ್ನು ಜೈಲಿಗೆ ತಳ್ಳಲಾಗಿದೆ.

ಲಖನೌ(ನ.28): ಮನುಷ್ಯರನ್ನು ತಪ್ಪು ಮಾಡಿದರೆ ಜೈಲಿಗೆ ಹಾಕುವುದು ಮನುಷ್ಯರೆ ಮಾಡಿಕೊಂಡಿರುವ ಕಾನೂನು. ಮನುಷ್ಯ ಕೂಡ ಪ್ರಾಣಿಯಾದರೂ ಈತನಿಗೆ ಆಲೋಚನ ಶಕ್ತಿಯಿದೆ. ಸರಿತಪ್ಪುಗಳ ಅರಿವಿದೆ. ಈ ಕಾರಣದಿಂದ ದಂಡಿಸಲಾಗುತ್ತದೆ.

ಆದರೆ ಉತ್ತರ ಪ್ರದೇಶದ ಜಲೂನ್ ಜಿಲ್ಲೆಯಲ್ಲಿ 8 ಕತ್ತೆಗಳನ್ನು ಜೈಲಿಗೆ ತಳ್ಳಲಾಗಿದೆ. 2 ಲಕ್ಷಕ್ಕೂ ಹೆಚ್ಚು ತೋಟದ ಸಸ್ಯಗಳನ್ನು ಹಾಳು ಮಾಡಿದ ಕಾರಣಕ್ಕಾಗಿ ಹಾಗೂ ಜೈಲು ಸಿಬ್ಬಂದಿಯ ಮಕ್ಕಳಿಗೆ ಗಾಯಗೊಳಿಸಿದ್ದಕ್ಕಾಗಿ ಜೈಲಿಗೆ ತಳ್ಳಲಾಗಿದೆ.

ಈ ಕತ್ತೆಗಳನ್ನು ಹಲವು ಬಾರಿ ತೋಟಕ್ಕೆ ಬಾರದಂತೆ ತಡೆಯೊಡ್ಡಿದರೂ ಅವು ಪದೇಪದೇ ಬಂದು ಹಾಳು ಮಾಡುತ್ತಿದ್ದವು. ಮಾಲೀಕರಿಗೂ ಈ ಬಗ್ಗೆ ಎಚ್ಚರಿಕೆ ನೀಡಿದರೂ ಅವರು ಗಮನಹರಿಸಿರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋದ ಕಾರಣ ಸೆರೆಮನೆಗೆ ಹಾಕಬೇಕಾಯಿತು ಎಂದು ಜೈಲು ಅಧೀಕ್ಷಕ ತಿಳಿಸಿದ್ದಾರೆ.

ಅನಂತರ ಕತ್ತೆಗಳ ಮಾಲೀಕರು ಸ್ಥಳೀಯ ಬಿಜೆಪಿ ನಾಯಕರೊಂದಿಗೆ ತೆರಳಿ ಇನ್ನು ಮುಂದೆ ಈ ರೀತಿಯಾಗದಂತೆ ಭರವಸೆ ನೀಡಿದ ನಂತರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ