
ಮಧ್ಯಪ್ರದೇಶದ ಬೇತುಲ್'ನ ಗ್ರಾಮವೊಂದರ ಪಂಚಾಯತ್, ಅಲ್ಲಿನ ಕುಟುಂಬವೊಂದು ಬಯಲಲ್ಲಿ ಮಲ ವಿಸರ್ಜನೆ ಮಾಡಿದುದಕ್ಕೆ 75,000 ರು.ದಂಡ ವಿಧಿಸಿದೆ.ರಂಭಾಖೇಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಯಲಲ್ಲಿ ಮಲ ವಿಸರ್ಜನೆ ಮಾಡದಂತೆ ಕುಟುಂಬಕ್ಕೆ ಒಂದು ತಿಂಗಳ ಹಿಂದೆ ಸೂಚಿಸಲಾಗಿತ್ತು. ಆದರೆ ಕುಟುಂಬ ಅದನ್ನು ಕೇಳಿಸಿಕೊಂಡಿಲ್ಲ. ಹೀಗಾಗಿ 10 ಮಂದಿ ಸದಸ್ಯರ ಆ ಕುಟುಂಬಕ್ಕೆ 75 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ ಎಂದು ಪಂಚಾಯತ್'ನ ಉದ್ಯೋಗ ಸಹಾಯಕ ಕನ್ವರ್ಲಾಲ್ ಹೇಳಿದ್ದಾರೆ.
ಮಧ್ಯಪ್ರದೇಶ ಪಂಚಾಯತ್ ನಿಯಮಗಳನುಸಾರ, ತಲಾ ಒಬ್ಬರಿಗೆ ದಿನಕ್ಕೆ 250 ರುಪಾಯಿಯಂತೆ, 10 ಜನರಿಗೆ ಒಂದು ತಿಂಗಳಿಗೆ ಇಷ್ಟು ಮೊತ್ತದ ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.