
ಮುಂಬೈ: ಎಟಿಎಂ ಯಂತ್ರಗಳಲ್ಲಿ ಸರ್ಕಾರ ಸೂಚಿಸಿರುವ ನಿಯಂತ್ರಿತ ಬದಲಾವಣಾ ನಿಯಮಗಳನ್ನು ಪಾಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 2019ರ ಮಾರ್ಚ್ ವೇಳೆಗೆ ದೇಶದ 2.38 ಲಕ್ಷ ಎಟಿಎಂಗಳ ಪೈಕಿ ಅರ್ಧದಷ್ಟುಎಟಿಎಂ ಯಂತ್ರಗಳನ್ನು ಸ್ಥಗಿತಗೊಳ್ಳಬಹುದು ಎಂದು ಎಟಿಎಂ ಕೈಗಾರಿಕೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
2019ರ ಮಾಚ್ರ್ ವೇಳೆಗೆ ಗ್ರಾಮೀಣ ಭಾಗಗಳ 1.13 ಲಕ್ಷ ಎಟಿಎಂಗಳನ್ನು ಸೇವಾ ಪೂರೈಕೆದಾರರು ಮುಚ್ಚಬೇಕಾಗಿ ಬರಬಹುದು. ಇವುಗಳಲ್ಲಿ ಹೆಚ್ಚಿನವು ಗ್ರಾಮೀಣ ಭಾಗದ ಎಟಿಎಂಗಳಾಗಿರಲಿವೆ. ಇದರಿಂದಾಗಿ ಸಾವಿರಾರು ಉದ್ಯೋಗ ನಷ್ಟಹಾಗೂ ಸರ್ಕಾರದ ಸಬ್ಸಿಡಿಗಳನ್ನು ಪಡೆಯುತ್ತಿರುವ ಫಲಾನುಭವಿಗಳು ಗ್ರಾಮೀಣ ಭಾಗದವರಾಗಿರುವುದರಿಂದ ಹಣಕಾಸು ಒಳಗೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಎಟಿಎಂ ಸ್ಥಗಿತ ಏಕೆ?
ಇತ್ತೀಚಿನ ನಿಯಂತ್ರಿತ ಬದಲಾವಣೆ ನಿಯಮಾವಳಿಯ ಪ್ರಕಾರ, ಎಟಿಎಂಗಳ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ ಅಪ್ಡೇಟ್ ಮಾಡಬೇಕಿದೆ. ಜೊತೆಗೆ ಹಣ ನಿರ್ವಹಣೆ ಗುಣಮಟ್ಟಹಾಗೂ ಕ್ಯಾಸೆಟ್ ಸ್ವೈಪ್ ವಿಧಾನವನ್ನು ಅಳವಡಿಸಬೇಕಿದೆ. ಹೊಸ ಮಾದರಿ ಹಣ ವಿತರಣೆ ಹಾಗೂ ಕ್ಯಾಸೆಟ್ ಸ್ವೈಪ್ ವ್ಯವಸ್ಥೆ ಅಳವಡಿಸಲು 3000 ಕೋಟಿ ರು. ವೆಚ್ಚವಾಗಲಿದೆ. ಒಂದು ವೇಳೆ ಬ್ಯಾಂಕ್ಗಳು ಹೆಚ್ಚುವರಿ ವೆಚ್ಚವನ್ನು ಭರಿಸದೇ ಇದ್ದರೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ. ಒಂದು ವೇಳೆ ಬ್ಯಾಂಕುಗಳು ಪರಿಹಾರ ನೀಡಲು ಒಪ್ಪದೇ ಇದ್ದರೆ ಎಟಿಎಂಗಳನ್ನು ಮುಚ್ಚಬೇಕಾಗಿ ಬರಬಹುದು ಎಂದು ಕೈಗಾರಿಕಾ ಒಕ್ಕೂಟ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ