
ಮಾಗಡಿ (ಸೆ.18): ಬಿಲ್’ಗೆ ಸಹಿ ಹಾಕುವ ವಿಚಾರದಲ್ಲಿ ಇಂಜಿನಿಯರ್ ಒಬ್ಬರ ಕೈ ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದೂರು ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.
ಕುಣಿಗಲ್ ಮೂಲದ ಗುತ್ತಿಗೆದಾರರಾದ ಸಿರಿಯನಪಾಳ್ಯದ ಚನ್ನಕೇಶವ, ತೆರೆದಕುಪ್ಪೆಯ ಮಂಜುನಾಥ , ಚಿಕ್ಕಹೊನ್ನೇಗೌಡನಪಾಳ್ಯದ ಲಕ್ಷ್ಮಣ , ಬಾಗೇನಹಳ್ಳಿಯ ಪುನೀತ, ಮತ್ತು ಕೆರೆಇಂಡೇಪಾಳ್ಯದ ಚಾಮಣ್ಣ ಬಂಧಿತರು.
ಉದ್ಯೋಗ ಖಾತ್ರಿ ಯೋಜನೆಯ ಬಿಲ್ ಮಂಜೂರು ಮಾಡುವ ವಿಚಾರದಲ್ಲಿ ಆರೋಪಿಗಳು ಮಾಗಡಿಯ ಕಲ್ಯಾ ಗೇಟ್ ನಿವಾಸಿಯಾಗಿರುವ ನರೇಗಾ ತಾಂತ್ರಿಕ ಸಹಾಯಕ ಅಧಿಕಾರಿ ಶ್ರೀನಿವಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಕುಣಿಗಲ್ ನ ಹುತ್ತರಿದುರ್ಗದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್, ಹೆಚ್ಚಿನ ಬಿಲ್ ಹಾಕಿದ್ದಕ್ಕೆ ಅದನ್ನು ಮಂಜೂರು ಮಾಡಲು ನಿರಾಕರಿಸಿದ್ದರು.
ಶ್ರೀನಿವಾಸ್ ಕೆಲಸ ಮುಗಿಸಿ ರಾತ್ರಿ ಮನೆಗೆ ವಾಪಸ್ಸು ಹೋಗುತ್ತಿರುವ ವೇಳೆ ಆರೋಪಿಗಳು ಮಾಗಡಿ ತಾಲ್ಲೂಕಿನ ತಾಳೆಕೆರೆ ಹ್ಯಾಂಡ್ ಪೋಸ್ಟ್ ಬಳಿ ಹಲ್ಲೆ ನಡೆಸಿ ಕೈ ಕಡಿದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.