
ಕೋಲಾರ (ಡಿ. 21): ನಕಲಿ ಚಿನ್ನದ ಬಿಸ್ಕತ್ ಡಬ್ಲಿಂಗ್ ಪ್ರಕರಣದಲ್ಲಿ ಪೊಲೀಸರ ಪಾತ್ರ ಮೇಲ್ನೋಟಕ್ಕೆ ಸಾಬೀತಾಗಿದ್ದು ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಮುಳಬಾಗಿಲು ಸಿಪಿಐ ಎನ್.ಎನ್.ರಾಮರೆಡ್ಡಿ, ಪಿಎಸ್ಐ ಆರ್.ದಯಾನಂದ, ಎಎಸ್ಐ ವೆಂಕಟಾಚಲಪತಿ, ಪೇದೆ ಗುರುಪ್ರಸಾದ್ ಅಮಾನತುಗೊಂಡಿರುವವರು.
ನವೆಂಬರ್ 26 ರಂದು ಡಬ್ಲಿಂಗ್ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಮೂವರನ್ನ ಅರೆಸ್ಟ್ ಮಾಡಿ, ಭಾಗಿಯಾಗಿದ್ದ ಪೊಲೀಸ್ ಪೇದೆಯನ್ನ ರಕ್ಷಣೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು. ಇದರಲ್ಲಿ ಪೇದೆ ಗುರುಪ್ರಸಾದ್ ಭಾಗಿಯಾಗಿರುವುದು ಸಾಬೀತಾಗಿತ್ತು.
ಕೋಲಾರ ಡಿಸಿಬಿ ಎಎಸ್ಐ ವೆಂಕಟಾಚಲಪತಿ ತಂಡ ತನಿಖೆ 6 ಮಂದಿಯನ್ನ ಅರೆಸ್ಟ್ ಮಾಡಿ, ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ವರದಿ ಕೊಟ್ಟಿದ್ದರು. ಕೋಲಾರ ಎಸ್ಪಿ ಡಾ.ದಿವ್ಯ ಮಂಗಳವಾರ ತಡರಾತ್ರಿ ಅಮಾನತು ಆದೇಶ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.