ಸೇನಾ ಕ್ಯಾಂಪ್’ನೊಳಗೆ ನುಗ್ಗಲು ಯತ್ನಿಸಿದ 4 ಉಗ್ರರ ಹತ್ಯೆ

Published : Jun 05, 2017, 01:33 PM ISTUpdated : Apr 11, 2018, 01:13 PM IST
ಸೇನಾ ಕ್ಯಾಂಪ್’ನೊಳಗೆ ನುಗ್ಗಲು ಯತ್ನಿಸಿದ 4 ಉಗ್ರರ ಹತ್ಯೆ

ಸಾರಾಂಶ

ಬಂಡಿಪೋರ ಜಿಲ್ಲೆಯ ಸಂಬಲ್​ನಲ್ಲಿ 4 ಉಗ್ರರು ಸಿಆರ್ ಪಿಎಫ್ ಶಿಬಿರವನ್ನು ಮುಂಜಾನೆ 4.10ರ ಹೊತ್ತಿಗೆ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿಆರ್’ಪಿಎಫ್ ಯೋಧರು ಗುಂಡಿನ ದಾಳಿ ಆರಂಭಿಸಿದ್ದಾರೆ. ಈ ದಾಳಿಯಲ್ಲಿ ನಾಲ್ಕು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ  ಉಗ್ರರ ಹಟ್ಟಹಾಸ ಮತ್ತೆ ಉಲ್ಪಣಗೊಂಡಿದೆ. ಭಾರತೀಯ ಸೇನೆ ಇಂದು ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.

ಬಂಡಿಪೋರ ಜಿಲ್ಲೆಯ ಸಂಬಲ್​ನಲ್ಲಿ 4 ಉಗ್ರರು ಸಿಆರ್ ಪಿಎಫ್ ಶಿಬಿರವನ್ನು ಮುಂಜಾನೆ 4.10ರ ಹೊತ್ತಿಗೆ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿಆರ್’ಪಿಎಫ್ ಯೋಧರು ಗುಂಡಿನ ದಾಳಿ ಆರಂಭಿಸಿದ್ದಾರೆ. ಈ ದಾಳಿಯಲ್ಲಿ ನಾಲ್ಕು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಹತ ಉಗ್ರರ ಬಳಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯೋಧರ ಕ್ರಮವನ್ನು ಸೇನೆಯ ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ. ಉಗ್ರರನ್ನು ಒಳನುಸುಳಲು ಬಿಟ್ಟಿಲ್ಲ ಮಾತ್ರವಲ್ಲದೇ ಅವರನ್ನು ಹೊಡೆದುರುಳಿಸಿರುವುದು ಸಿಆರ್’ಪಿಎಫ್ ಮಹಾನಿರ್ದೇಶಕ ಆರ್.ಆರ್.ಭಟ್ನಾಗರ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ