ಸೇನಾ ಕ್ಯಾಂಪ್’ನೊಳಗೆ ನುಗ್ಗಲು ಯತ್ನಿಸಿದ 4 ಉಗ್ರರ ಹತ್ಯೆ

By Suvarna Web DeskFirst Published Jun 5, 2017, 1:33 PM IST
Highlights

ಬಂಡಿಪೋರ ಜಿಲ್ಲೆಯ ಸಂಬಲ್​ನಲ್ಲಿ 4 ಉಗ್ರರು ಸಿಆರ್ ಪಿಎಫ್ ಶಿಬಿರವನ್ನು ಮುಂಜಾನೆ 4.10ರ ಹೊತ್ತಿಗೆ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿಆರ್’ಪಿಎಫ್ ಯೋಧರು ಗುಂಡಿನ ದಾಳಿ ಆರಂಭಿಸಿದ್ದಾರೆ. ಈ ದಾಳಿಯಲ್ಲಿ ನಾಲ್ಕು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ  ಉಗ್ರರ ಹಟ್ಟಹಾಸ ಮತ್ತೆ ಉಲ್ಪಣಗೊಂಡಿದೆ. ಭಾರತೀಯ ಸೇನೆ ಇಂದು ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.

ಬಂಡಿಪೋರ ಜಿಲ್ಲೆಯ ಸಂಬಲ್​ನಲ್ಲಿ 4 ಉಗ್ರರು ಸಿಆರ್ ಪಿಎಫ್ ಶಿಬಿರವನ್ನು ಮುಂಜಾನೆ 4.10ರ ಹೊತ್ತಿಗೆ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿಆರ್’ಪಿಎಫ್ ಯೋಧರು ಗುಂಡಿನ ದಾಳಿ ಆರಂಭಿಸಿದ್ದಾರೆ. ಈ ದಾಳಿಯಲ್ಲಿ ನಾಲ್ಕು ಉಗ್ರರನ್ನು ಹೊಡೆದುರುಳಿಸಿದ್ದಾರೆ.

Latest Videos

ಹತ ಉಗ್ರರ ಬಳಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯೋಧರ ಕ್ರಮವನ್ನು ಸೇನೆಯ ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ. ಉಗ್ರರನ್ನು ಒಳನುಸುಳಲು ಬಿಟ್ಟಿಲ್ಲ ಮಾತ್ರವಲ್ಲದೇ ಅವರನ್ನು ಹೊಡೆದುರುಳಿಸಿರುವುದು ಸಿಆರ್’ಪಿಎಫ್ ಮಹಾನಿರ್ದೇಶಕ ಆರ್.ಆರ್.ಭಟ್ನಾಗರ್ ಹೇಳಿದ್ದಾರೆ.

click me!