ಹಾಸನ: ಕಲ್ಲುಕ್ವಾರೆಯಲ್ಲಿ ಸಿಡಿಮದ್ದು ಸ್ಫೋಟಕ್ಕೆ ಮೂವರು ಸಾವು

Published : May 02, 2017, 03:52 AM ISTUpdated : Apr 11, 2018, 12:51 PM IST
ಹಾಸನ: ಕಲ್ಲುಕ್ವಾರೆಯಲ್ಲಿ ಸಿಡಿಮದ್ದು ಸ್ಫೋಟಕ್ಕೆ ಮೂವರು ಸಾವು

ಸಾರಾಂಶ

ಬಂಡೆ ಸಿಡಿಸಲು ನಿನ್ನೆ ಇಲ್ಲಿ ಜಿಲೆಟಿನ್ ಸಿಡಿಮದ್ದು ಅಳವಡಿಸಲಾಗಿತ್ತು. ಗುಡುಗು ಸಿಡಿಲ ರಭಸಕ್ಕೆ ಜಿಲೆಟಿನ್ ಸ್ಫೋಟಗೊಂಡಿರುವ ಶಂಕೆ ಇದೆ.

ಹಾಸನ(ಮೇ 02): ಕಲ್ಲುಕ್ವಾರಿಯಲ್ಲಿ ಸಿಡಿಮದ್ದು ಸ್ಫೋಟಗೊಂಡು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಜಗದೀಶ್(50), ಪುನೀತ್(22), ಮತ್ತು ನಾಗರಾಜು(40) ಎಂದು ಗುರುತಿಸಲಾಗಿದೆ. ಇನ್ನೂ ಕೆಲವಾರು ಮಂದಿಗೆ ಗಾಯಗಳಾಗಿವೆ. ಹಾಸನ ತಾಲೂಕಿನ ಕಟ್ಟಾಯ ಬಳಿ ಕಲ್ಲುಕ್ವಾರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬಂಡೆ ಸಿಡಿಸಲು ನಿನ್ನೆ ಇಲ್ಲಿ ಜಿಲೆಟಿನ್ ಸಿಡಿಮದ್ದು ಅಳವಡಿಸಲಾಗಿತ್ತು. ಗುಡುಗು ಸಿಡಿಲ ರಭಸಕ್ಕೆ ಜಿಲೆಟಿನ್ ಸ್ಫೋಟಗೊಂಡಿರುವ ಶಂಕೆ ಇದೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು; ಬೆಳಗಾವಿ ಸರ್ಕ್ಯೂಟ್ ಹೌಸ್‌ಗೆ ಗಣ್ಯರ ದಂಡು!