
ನವದೆಹಲಿ (ಮಾ.31): ಕಂಪನಿಯೊಂದರ ಅಕ್ರಮ ಬಂಧನದಲ್ಲಿದ್ದ 29 ಮಂದಿ ಕಾರ್ಮಿಕರನ್ನು ಬಿಡುಗಡೆಮಾಡಿ ವಾಪಾಸು ಭಾರತಕ್ಕೆ ಬರುವ ವ್ಯವಸ್ಥೆ ಮಾಡಲಾಗಿದೆ ಎಂದು ವಿದೇಶಾಂಗ ಖಾತೆ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಉದ್ಯೋಗಕ್ಕೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದ ತೆಲಾಂಗಣ ರಾಜ್ಯದ 29 ಕಾರ್ಮಿಕರನ್ನು ಕಂಪನಿಯೊಂದು ಅಕ್ರಮವಾಗಿ ಸೆರೆಯಲ್ಲಿಟ್ಟಿತ್ತು. ಈ ಕುರಿತು ತೆಲಾಂಗಣ ಸಚಿವ ಕೆ.ಟಿ.ರಾಮರಾವ್ ಸುಷ್ಮಾಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು.
ನಾವು ಎಲ್ಲಾ 29 ಕಾರ್ಮಿಕರನ್ನು ರಕ್ಷಿಸಿದ್ದೇವೆ. ದೇಶಕ್ಕೆ ವಾಪಾಸು ಬರುವ ಖರ್ಚನ್ನೂ ಕೂಡಾ ನಾವು ಭರಿಸಲಿದ್ದೇವೆ ಎಂದು ಸುಷ್ಮಾ ಟ್ವೀಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.