ಟಿಕೆಟ್ ವಿಚಾರ: ದೇವೇಗೌಡರ ಕುಟುಂಬದಲ್ಲಿ ಗುದ್ದಾಟ

Published : Dec 22, 2017, 11:25 AM ISTUpdated : Apr 11, 2018, 12:53 PM IST
ಟಿಕೆಟ್ ವಿಚಾರ: ದೇವೇಗೌಡರ ಕುಟುಂಬದಲ್ಲಿ ಗುದ್ದಾಟ

ಸಾರಾಂಶ

ಟಿಕೆಟ್​ ವಿಚಾರದಲ್ಲಿ  ದೇವೇಗೌಡರ ಕುಟುಂಬದೊಳಗೆ  ಮುಸುಕಿನ ಗುದ್ದಾಟ ಶುರುವಾಗಿದೆ.  ಟಿಕೆಟ್​ ವಿಚಾರವಾಗಿ ಎಚ್​ಡಿ ದೇವೇಗೌಡ ಮತ್ತು ಎಚ್​ಡಿ ಕುಮಾರಸ್ವಾಮಿ ನಡುವೆ ವೈಮನಸ್ಸು ಉಂಟಾಗಿದೆ .

ಬೆಂಗಳೂರು (ಡಿ.22): ಟಿಕೆಟ್​ ವಿಚಾರದಲ್ಲಿ  ದೇವೇಗೌಡರ ಕುಟುಂಬದೊಳಗೆ  ಮುಸುಕಿನ ಗುದ್ದಾಟ ಶುರುವಾಗಿದೆ.  ಟಿಕೆಟ್​ ವಿಚಾರವಾಗಿ ಎಚ್​ಡಿ ದೇವೇಗೌಡ ಮತ್ತು ಎಚ್​ಡಿ ಕುಮಾರಸ್ವಾಮಿ ನಡುವೆ ವೈಮನಸ್ಸು   ಉಂಟಾಗಿದೆ .  ಯಾವುದೇ ಕಾರಣಕ್ಕೂ ಕುಟುಂಬದಲ್ಲಿ ಇಬ್ಬರೇ ಸ್ಪರ್ಧೆ ಮಾಡಲಿ ಎಂದು  ಕುಮಾರಸ್ವಾಮಿ ಹೇಳುತ್ತಿದ್ದರೆ,  ಅರ್ಹತೆ ಇದ್ದರೆ ಮತ್ತಿಬ್ಬರಿಗೆ ಟಿಕೆಟ್​ ಕೊಟ್ಟರೆ ತಪ್ಪೇನು ಎನ್ನುತ್ತಿದ್ದಾರಂತೆ  ದೇವೇಗೌಡರು.

ಅನಿತಾ ಕುಮಾರಸ್ವಾಮಿ, ಪ್ರಜ್ವಲ್​ ರೇವಣ್ಣ ಅವರಿಗೆ ಟಿಕೆಟ್​ ಬೇಡ ಎಂದು ಕುಮಾರಸ್ವಾಮಿ  ಹೇಳುತ್ತಿದ್ದಾರಂತೆ,  ಕುಟುಂಬದಿಂದ ನಾಲ್ವರು ಸ್ಪರ್ಧಿಸಿದರೆ ಕುಟುಂಬ ರಾಜಕಾರಣ ಆರೋಪಕ್ಕೆ ಗುರಿಯಾಗಬೇಕಾಗತ್ತದೆ . ಕಾಂಗ್ರೆಸ್​, ಬಿಜೆಪಿಗೆ ಇದು ದೊಡ್ಡ ಅಸ್ತ್ರವಾಗತ್ತೆ ಎಂದು  ಕುಮಾರಸ್ವಾಮಿ  ಹೇಳುತ್ತಿದ್ದಾರಂತೆ.

ಪ್ರಜ್ವಲ್​ಗೆ  ಪಕ್ಷದಲ್ಲಿ ಜವಾಬ್ದಾರಿ ವಹಿಸಲಾಗಿದೆ, ಅನಿತಾ ರಾಮನಗರ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳಬೇಕು. ಪ್ರಜ್ವಲ್​, ಅನಿತಾ ಇಬ್ಬರೂ ಪಕ್ಷಕ್ಕಾಗಿ ದುಡಿದಿದ್ದಾರೆ.  ಟಿಕೆಟ್​ ಕೊಟ್ಟರೆ ತಪ್ಪೇನು ಅನ್ನೋದು ದೇವೇಗೌಡರ ವಾದ. ಇದೇ ಕಾರಣಕ್ಕೆ ಕುಮಾರಸ್ವಾಮಿ, ದೇವೇಗೌಡ ನಡುವೆ ಸಣ್ಣ ವೈಮನಸ್ಸು ಶುರುವಾಗಿದೆ.  ಇದೇ ಕಾರಣಕ್ಕೆ ಪ್ರಥಮ ಪಟ್ಟಿ ಬಿಡುಗಡೆಯೂ ವಿಳಂಬವಾಗುತ್ತಿದೆಯಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!