
ಮುಂಬೈ : ಮಹಾರಾಷ್ಟ್ರದ ತುಳಸರಿ ಪ್ರದೇಶದಲ್ಲಿ ಇಬ್ಬರು ಸಹೋದರಿಯರು ತಮ್ಮ ತಂದೆ ಮೃತಪಟ್ಟಾಗಲೇ ಹೋಗಿ ಪರೀಕ್ಷೆ ಬರೆದು ಬಂದಿದ್ದಾರೆ. ತಂದೆ ಮೃತಪಟ್ಟು ಅಂತ್ಯಸಂಸ್ಕಾರ ನಡೆಸಿದ ಒಂದೇ ಗಂಟೆಯಲ್ಲಿ ಹೋಗಿ ಸಹೋದರಿಯರಿಬ್ಬರೂ ಪರೀಕ್ಷೆಗೆ ಹಾಜರಾಗಿದ್ದಾರೆ.
ವಿನೋದ್ ಚೌಧರಿ ಎಂಬ ರೈತ ಮೃತಪಟ್ಟಿದ್ದರು. ಅವರ ಪುತ್ರಿಯರಾದ ಪೂಜಾ ಹಾಗೂ ದೀಪಿಕಾ ಈ ದುಃಖದ ನಡುವೆಯೇ ಪರೀಕ್ಷೆಗೆ ಹಾಜರಾಗಿದ್ದಾರೆ. ವಿದ್ಯಾರ್ಥಿನಿಯರಿಬ್ಬರೂ ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ಶಿಕ್ಷಕರು ಗ್ರಾಮಸ್ಥರೂ ಕೂಡ ಮನೆಗೆ ಆಗಮಿಸಿ ಅವರಿಗೆ ಸಾಂತ್ವನ ಹೇಳಿದ್ದು, ದುಃಖದ ನಡುವೆಯೇ ಪರೀಕ್ಷೆ ಬರೆದ ಇಬ್ಬರು ಸಹೋದರಿಯರ ಆತ್ಮಸ್ಥೈರ್ಯವನ್ನು ಕೊಂಡಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.