
ನವದೆಹಲಿ (ಜ.01): ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಇಸ್ತಾಂಬುಲ್'ನ ನೈಟ್'ಕ್ಲಬ್'ವೊಂದರ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಪೈಕಿ ಇಬ್ಬರು ಭಾರತೀಯರಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಮೃತಪಟ್ಟವರನ್ನು ಮಾಜಿ ರಾಜ್ಯಸಭೆ ಸಂಸದರ ಪುತ್ರ ಆಬಿಸ್ ರಿಝ್ವಿ ಹಾಗೂ ಗುಜರಾತಿನ ಖುಷಿ ಶಾ ಎಂದುತಿಳಿದು ಬಂದಿದೆ.
ಇಸ್ತಾಂಬುಲ್'ನ ಓರ್ಟಾಕೋಯ್'ನಲ್ಲಿರುವ ರೀನಾ ನೈಟ್ ಕ್ಲಬ್'ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 35 ಮಂದಿ ಮೃತಪಟ್ಟಿದ್ದರೆ, 40 ಮಂದಿ ಗಾಯಗೊಂಡಿದ್ದಾರೆ.
ಸುಮಾರು 600 ಮಂದಿಯಿದ್ದ ನೈಟ್'ಕ್ಲಬ್ ಮೇಲೆ ಸಾಂಟಾ ಕ್ಲಾಸ್'ನ ವೇಷ ಧರಿಸಿ ಬಂದೂಕು ಬಚ್ಚಿಟ್ಟುಕೊಂಡು ಬಂದಿದ್ದ ಶಂಕಿತ ಉಗ್ರ ಮೊದಲಿಗೆ ನೈಟ್'ಕ್ಲಬ್'ನ ಹೊರಗಿದ್ದ ಪೊಲೀಸ್ ಪೇದೆ ಮತ್ತು ಓರ್ವ ನಾಗರಿಕನನ್ನು ಹತ್ಯೆಗೈದಿದ್ದಾನೆ. ಬಳಿಕ ಹೊಸ ವರ್ಷದ ಆಚರಣೆಯ ಖುಷಿಯಲ್ಲಿದ್ದ ಜನರ ಮೇಲೆ ಯದ್ವಾತದ್ವ ಗುಂಡಿನ ದಾಳಿ ನಡೆಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.