ಮಂಗಳೂರಿಗೆ ತೆರಳುತ್ತಿದ್ದ ರೈಲು ಹಳಿತಪ್ಪಿದೆ. ಬೆಳ್ಳಂಬೆಳಗ್ಗೆ ಚೆನ್ನೈನಿಂದ ಆಗಮಿಸುತ್ತಿದ್ದ ರೈಲಿನ 2 ಬೋಗಿಗಳು ಹಳಿತಪ್ಪಿದ್ದು, ಇದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.
ಕೇರಳ : ಚೆನ್ನೈ - ಮಂಗಳೂರು ಎಕ್ಸ್ ಪ್ರೆಸ್ ರೈಲಿನ 2 ಬೋಗಿಗಳು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಹಳಿತಪ್ಪಿವೆ. ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ.
ಕೇರಳದ ಶೋರಾನ್ ಪುರ ರೈಲ್ವೆ ನಿಲ್ದಾಣದ ಬಳಿ ಬೆಳಗ್ಗೆ 6.30ರ ಸುಮಾರಿಗೆ ಈ ಅವಘಡವಾಗಿದೆ.
ವಾರದ 7 ದಿನಗಳ ಕಾಲ ಸಂಚರಿಸುವ ಈ ರೈಲು ಸಂಜೆ 5 ಗಂಟೆ ವೇಳೆಗೆ ಚೆನ್ನೈ ನಿಲ್ದಾಣದಿಂದ ಹೊರಟು, ಬೆಳಗ್ಗೆ 9 ಗಂಟೆಗೆ ಮಂಗಳೂರು ತಲುಪಬೇಕಿತ್ತು. ಒಟ್ಟು 16 ಗಂಟೆಗಳ ಪ್ರಯಾಣದ ಬಳಿಕ ರೈಲು ಮಂಗಳೂರು ರೈಲು ನಿಲ್ದಾಣ ತಲುಪುತಿತ್ತು.
ಆದರೆ ಇದೀಗ ಹಳಿತಪ್ಪಿದ ಹಿನ್ನೆಲೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.