
ಹಾವೇರಿ: ದೇಶದಲ್ಲಿ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿರೋ ಕಾರಣಕ್ಕಾಗಿ ಈ ಪಿಡುಗನ್ನು ಹತ್ತಿಕ್ಕಲು 15 ವರ್ಷದ ಪೋರನೊಬ್ಬ ನೂರಾರು ಕೀಲೋ ಮೀಟರ್ ನಿಂದ ಸೈಕಲ್ ಮೇಲೆ ಸಂಚರಿಸಿ ಜಾಗೃತಿ ಮೂಡಿಸುತ್ತಿದ್ದಾನೆ. ಹೌದು, ಬೆಂಗಳೂರಿನ ಮಹರ್ಷಿ ಸಂಕೇತ್ ಲೈಂಗಿಕ ದೌರ್ಜನ್ಯ ತಡೆಯ ಬಗ್ಗೆ ಜಾಗೃತಿ ಮೂಡಿಸಲು ಸ್ಫಿಕ್ ಔಟ್ ಎಂಬ ಧ್ಯೇಯದೊಂದಿಗೆ ಬೆಂಗಳೂರಿನಿಂದ ಮುಂಬಯಿ ವರೆಗೂ ಸೈಕಲ್ ಸವಾರಿ ಮಾಡ್ತಿದಾನೆ.
"
ಶನಿವಾರ ಹಾವೇರಿಗೆ ಈತನ ಸೈಕಲ್ ಸವಾರಿ ಆಗಮಿಸಿತ್ತು. ಈ ವೇಳೆ ಇಲ್ಲಿನ ಮಹಿಳಾ ಸಮಾಜದ ನಾಗರತ್ನ ಧಾರವಾಡಕರ್ ಸೇರಿದಂತೆ ಶಿಶು ಅಭಿವೃದ್ದಿ ಇಲಾಖೆ, ಮಕ್ಕಳ ಹಕ್ಕುಗಳ ವೇದಿಕೆಯ ಸದಸ್ಯರು ಬರಮಾಡಿಕೊಂಡರು.
ಅಂದಹಾಗೆ ಈ ಪೋರನ ಈ ಮಹತ್ಕಾರ್ಯಕ್ಕೆ ಬಾಲಿವುಡ್ ನ ಖ್ಯಾತ ಕಲಾ ನಿರ್ದೇಶಕ ಸುಖಾಂತ್ ಪಾಣಿಗ್ರಹಿ ಸಾಥ್ ನೀಡಿದ್ದು ವಿಶೇಷ. ಈ ವೇಳೆ ಮಾತನಾಡಿದ ಮಹರ್ಷಿ ಸಂಕೇತ್ ಲೈಂಗಿಕ ದೌರ್ಜನ್ಯ ತಡೆಯಲು ಎಲ್ಲರೂ ಕೈಜೋಡಿಸಬೇಕಿದೆ ಅಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.