ಪ್ಲೀಸ್ ಅಪ್ಪಾ... ನಾನು ಓದಬೇಕು ಎಂದ ಮಗಳಿಗೆ ಚಾಕು ಇರಿದ ತಂದೆ!

Published : Jun 16, 2019, 04:12 PM IST
ಪ್ಲೀಸ್ ಅಪ್ಪಾ... ನಾನು ಓದಬೇಕು ಎಂದ ಮಗಳಿಗೆ ಚಾಕು ಇರಿದ ತಂದೆ!

ಸಾರಾಂಶ

ಮಗಳಿಗೆ ಓದುವ ಆಸೆ, ಅಪ್ಪನಿಗೆ ಮದುವೆ ಮಾಡಬೇಕೆಂಬ ಹಠ| ಮಗಳ ನಿರ್ಧಾರಕ್ಕೆ ಕೋಪಗೊಂಡ ಅಪ್ಪ ನಾಲೆ ಬಳಿ ಕರೆದೊಯ್ದು ಚಾಕು ಇರಿದರು| 

ಲಕ್ನೋ[ಜೂ.16]: ಉತ್ತರ ಪ್ರದೇಶದ ಶಾಹಜಹಾಂಪುರದಲ್ಲಿ 15 ವರ್ಷದ ಬಾಲಕಿಯೊಬ್ಬಳು ತನ್ನ ತಂದೆ ಹಾಗೂ ಅಣ್ಣ, ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆಂಬ ಆರೋಪ ಮಾಡಿದ್ದಾಳೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಬಾಲಕಿ 'ನನಗೆ ಈಗಲೇ ಮದುವೆಯಾಗಲು ಇಷ್ಟವಿರಲಿಲ್ಲ, ಮುಂದೆ ಓದಬೇಕೆಂದಿದ್ದೆ. ಇದೇ ವಿಚಾರವಾಗಿ ಕೋಪಗೊಂಡ ತಂದೆ ಹಾಗೂ ಅಣ್ಣ ನನ್ನನ್ನು ಕೊಲ್ಲಲು ಯತ್ನಿಸಿದ್ದಾರೆ. ನನ್ನ ತಂದೆ ನನ್ನನ್ನು ನಿರ್ಜನ ಪ್ರದೇಶದಲ್ಲಿದ್ದ ನಾಲೆಯೊಂದರ ಬಳಿ ಕರೆದೊಯ್ದಿದ್ದರು. ಈ ವೇಳೆ ಅಣ್ಣ ಕುಡಾ ಬಂದಿದ್ದ. ನಾಲೆ ಬಳಿ ತಲುಪುತ್ತಿದ್ದಂತೆ ಅಣ್ಣ ನನ್ನ ಕತ್ತಿಗೆ ಬಟ್ಟೆ ಸುತ್ತಿ ಓಡಿ ಹೋಗದಂತೆ ತಡೆದಿದ್ದ. ಅತ್ತ ತಂದೆ ಹಿಂಬದಿಯಿಂದ ಚಾಕುವಿನಿಂದ ಇರಿಯಲಾರಂಭಿಸಿದ್ದರು. ಈ ವೇಳೆ ನಾನು ಅಪ್ಪಾ... ನೋವಾಗುತ್ತಿದೆ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡೆ. ಆದರೂ ಅವರು ನನ್ನ ಮಾತು ಕೇಳಲಿಲ್ಲ’ ಎಂದಿದ್ದಾಳೆ.

ಇಷ್ಟೇ ಅಲ್ಲದೇ ’ಬಳಿಕ ನನ್ನನ್ನು ನಾಲೆಗೆ ದೂಡಿ ಹಾಕಿದ ಅಪ್ಪ ಮತ್ತು ಅಣ್ಣ ಅಲ್ಲಿಂದ ತೆರಳಿದ್ದರು. ಇದಾದ ಕೆಲ ಸಮಯದ ಬಳಿಕ ನಾನು ಸತ್ತಿದ್ದೇನೋ ಬದುಕಿದ್ದೇನೋ ಎಂದು ನೋಡಲು ಮರಳಿ ಬಂದಿದ್ದರು. ಆದರೆ ನಾನು ಅಷ್ಟರಲ್ಲಾಗಲೇ ಈಜಿಕೊಂಡು ಮುಂದೆ ಬಂದಿದ್ದೆ. ಹೀಗಾಗಿ ಅಣ್ಣ ಹಾಗೂ ಅಪ್ಪನ ಕಣ್ಣಿಗೆ ಬೀಳಲಿಲ್ಲ’ ಎಂದಿದ್ದಾಳೆ. 

ಘಟನೆಯನ್ನು ಪುಷ್ಟೀಕರಿಸಿರುವ ಬಾಲಕಿಯ ಬಾವ 'ನಾನು ಈಕೆಯ ಅಕ್ಕನ ಗಂಡ. ಆಕೆ ಕಳೆದ ಎರಡು ತಿಂಗಳಿನಿಂದ ನಮ್ಮೊಂದಿಗೇ ಇದ್ದಾಳೆ. ಆಕೆ ಮುಂದೆ ಓದುವುದು ಅಕೆಯ ಅಪ್ಪ- ಅಮ್ಮನಿಗೆ ಇಷ್ಟವಿಲ್ಲ, ಒತ್ತಾಯಪೂರ್ವಕವಾಗಿ ಮದುವೆ ಮಾಡಲಿಚ್ಛಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಅಪ್ಪ ಅಮ್ಮ ಬಂದು ಆಕೆಯನ್ನು ಕರೆದೊಯ್ದಿದ್ದರು. ಇಂದು ಯಾರೋ ಕರೆ ಮಾಡಿ ಬಾಲಕಿ ನಾಲೆ ಬಳಿ ಸಿಕ್ಕಿರುವುದಾಗಿ ತಿಳಿಸಿದ್ದಾರೆ' ಎಂದಿದ್ದಾರೆ

ಪ್ರಕರಣದ ಕುರಿತಾಗಿ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಬಾಲಕಿ ಈಗಾಗಲೇ ತನ್ನ ಅಪ್ಪ ಹಾಗೂ ಅಣ್ಣನ ವಿರುದ್ಧ ದೂರು ನೀಡಿದ್ದಾಳೆ. ಹೀಗಾಗಿ ತನಿಖೆ ಆರಂಭಿಸಿದ್ದೇವೆ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು