ಮೋಸ್ಟ್ ವಾಂಟೆಡ್ ಖಲಿಸ್ತಾನ್‌ ಉಗ್ರ ಹರ್ಮಿಂದರ್‌ ಸಿಂಗ್‌ ಮಿಂಟೂ ಎಸ್ಕೇಪ್: ಪಂಜಾಬ್'ನ ನಬಾ ಜೈಲಿನಲ್ಲಿ ಸಿನಿಮೀಯ ಘಟನೆ

Published : Nov 27, 2016, 07:11 AM ISTUpdated : Apr 11, 2018, 12:54 PM IST
ಮೋಸ್ಟ್ ವಾಂಟೆಡ್ ಖಲಿಸ್ತಾನ್‌ ಉಗ್ರ ಹರ್ಮಿಂದರ್‌ ಸಿಂಗ್‌ ಮಿಂಟೂ ಎಸ್ಕೇಪ್: ಪಂಜಾಬ್'ನ ನಬಾ ಜೈಲಿನಲ್ಲಿ ಸಿನಿಮೀಯ ಘಟನೆ

ಸಾರಾಂಶ

ಖಲಿಸ್ತಾನ್‌ ಲಿಬರೇಶನ್‌ ಉಗ್ರ ಸಂಘಟನೆಗೆ ಸೇರಿದ ಹರ್ಮಿಂದರ್‌ ಸಿಂಗ್‌ ಮಿಂಟೂ ಮತ್ತು ಐವರು ಗ್ಯಾಂಗ್‌ ಸ್ಟರ್‌ಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಮಿಂಟೂವನ್ನು ಉಗ್ರ ಚಟುವಟಿಗಳ ಪ್ರಕರಣಗಳಲ್ಲಿ 2014 ರಲ್ಲಿ ಪಂಜಾಬ್‌ ಪೊಲೀಸರು ಬಂಧಿಸಿದ್ದರು. ಘಟನೆಯ ಬಳಿಕ ಪಂಜಾಬ್‌'ನಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದ್ದು ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ.

ಪಂಜಾಬ್(ನ.27): ಸಿನಿಮೀಯ ಘಟನೆಯೊಂದರಲ್ಲಿ ಪಂಜಾಬ್‌'ನ ನಬಾ ಜೈಲಿಗೆ ಭಾನುವಾರ ಬೆಳಗ್ಗೆ  ಪೊಲೀಸ್‌ ಸಮವಸ್ತ್ರ ಧರಿಸಿಕೊಂಡು ಬಂದ ಐವರು ಶಸ್ತ್ರಧಾರಿ ಆಗಂತುಕರು ಐವರು ಖಲಿಸ್ತಾನ್‌ ಉಗ್ರರರನ್ನು ಜೈಲಿನಿಂದ ಬಂಧಮುಕ್ತಗೊಳಿಸಿ ಕರೆದೊಯ್ದು  ಭದ್ರತಾ ಸಿಬಂದಿಗಳ ನಿದ್ದೆಗೆಡಿಸಿದ್ದಾರೆ.

ಖಲಿಸ್ತಾನ್‌ ಲಿಬರೇಶನ್‌ ಉಗ್ರ ಸಂಘಟನೆಗೆ ಸೇರಿದ ಹರ್ಮಿಂದರ್‌ ಸಿಂಗ್‌ ಮಿಂಟೂ ಮತ್ತು ಐವರು ಗ್ಯಾಂಗ್‌ ಸ್ಟರ್‌ಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಮಿಂಟೂವನ್ನು ಉಗ್ರ ಚಟುವಟಿಗಳ ಪ್ರಕರಣಗಳಲ್ಲಿ 2014 ರಲ್ಲಿ ಪಂಜಾಬ್‌ ಪೊಲೀಸರು ಬಂಧಿಸಿದ್ದರು. ಘಟನೆಯ ಬಳಿಕ ಪಂಜಾಬ್‌'ನಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದ್ದು ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ.

ಟೊಯೋಟಾ ಫಾರ್ಚುನರ್‌,ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡಾಯಿ ವೆರ್ನಾ ಕಾರುಗಳಲ್ಲಿ ಉಗ್ರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾದವರ ಪೈಕಿ ವಿಕಿ ಗೊಂಡಾರ್‌ ಎಂಬಾತ ಕುಖ್ಯಾತ ಗ್ಯಾಂಗ್‌'ಸ್ಟರ್‌ ಹಲವು ಪ್ರಕರಣಗಳಿಗೆ ಸಂಬಂಧಿಸಿ ಸಹಚರರೊಂದಿಗೆ ವಶಕ್ಕೆ ಪಡೆಯಲಾಗಿತ್ತು. ಮಿಂಟೂ ಪಾಕ್‌ ಸೇರಿದಂತೆ ವಿದೇಶಿದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ನಿಧಿ ಸಂಗ್ರಹಿಸುತ್ತಿದ್ದ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದರಾಮಯ್ಯ ಮುಡಾ ಕೇಸ್, ತನಿಖಾಧಿಕಾರಿಗಳು ಸರ್ವಾಧಿಕಾರಿಗಳೇ? ಕೋರ್ಟ್‌ ನಲ್ಲಿ ಸ್ನೇಹಮಯಿ ಕೃಷ್ಣ ಕೆಂಡಾಮಂಡಲ!
ಲೇಡಿ ಬಾಸ್​ ಎಲ್ಲೆಲ್ಲೋ ಮುಟ್ಟುತ್ತಾಳೆ, ಪ್ರಚೋದಿಸ್ತಾಳೆ, ಆಮೇಲೆ... ಉದ್ಯೋಗಿಯಿಂದ ಶಾಕಿಂಗ್​ ವಿಷ್ಯ ರಿವೀಲ್​