ಮತ್ತೇ ಹಿಂದುತ್ವದ ಮಂತ್ರ ಜಪಿಸಿದ ರಾಹುಲ್ ಗಾಂಧಿ

Published : Oct 30, 2018, 07:43 PM IST
ಮತ್ತೇ ಹಿಂದುತ್ವದ  ಮಂತ್ರ ಜಪಿಸಿದ ರಾಹುಲ್ ಗಾಂಧಿ

ಸಾರಾಂಶ

ನನಗೆ ಬಿಜೆಪಿಯವರಿಗಿಂತ ಚೆನ್ನಾಗಿ ಹಿಂದುತ್ವ ತಿಳಿದುಕೊಂಡಿದ್ದಾನೆ. ಆದರೆ ಕೆಲವರಿಗೆ ಇದು ಅರ್ಥವಾಗುವುದಿಲ್ಲ. ಪ್ರತಿಯೊಬ್ಬರು ಹೊಂದಿರಬಹುದಾದ ಅತ್ಯಂತ ಪ್ರಮುಖವಾದ ಗುಣವೆಂದರೆ ನಮ್ರತೆ. ಹಾಗೆಂದರೆ ಯಾರಾದರೂ ಮಾತನಾಡುತ್ತಿರುವಾಗ ನಾನು ಅದನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದರ್ಥ - ರಾಹುಲ್ ಗಾಂಧಿ

ನವದೆಹಲಿ[ಅ.30]: ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಿಂದುತ್ವದ ಮಂತ್ರ ಜಪಿಸಲು ಶುರು ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ನಾಲ್ಕನೇ ಬಾರಿ ಶತಾಯಗತಾಯ ಅಧಿಕಾರಕ್ಕೆ ಬರುವುದನ್ನು ತಡೆಯಬೇಕೆಂದು ಉದ್ದೇಶಿಸಿರುವ ಕಾಂಗ್ರೆಸ್ ಅಧ್ಯಕ್ಷ ಸಂಪ್ರದಾಯವಾದಿ ಹಿಂದೂ ಮತಗಳನ್ನು ಸೆಳೆಯಲು ಈಗಾಗಲೇ ಟೆಂಪಲ್ ರನ್ ಆರಂಭಿಸಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನನಗೆ ಬಿಜೆಪಿಯವರಿಗಿಂತ ಚೆನ್ನಾಗಿ ಹಿಂದುತ್ವ ತಿಳಿದುಕೊಂಡಿದ್ದಾನೆ. ಆದರೆ ಕೆಲವರಿಗೆ ಇದು ಅರ್ಥವಾಗುವುದಿಲ್ಲ. ಪ್ರತಿಯೊಬ್ಬರು ಹೊಂದಿರಬಹುದಾದ ಅತ್ಯಂತ ಪ್ರಮುಖವಾದ ಗುಣವೆಂದರೆ ನಮ್ರತೆ. ಹಾಗೆಂದರೆ ಯಾರಾದರೂ ಮಾತನಾಡುತ್ತಿರುವಾಗ ನಾನು ಅದನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದರ್ಥ. ಯಾರಾದರೂ ಕೋಪ ಮಾಡಿಕೊಂಡರೆ ನಾನು ಅವರನ್ನು ಹುಚ್ಚ ಎಂದು ಎಂದು ಸಂಭೋದಿಸುವುದಿಲ್ಲ. ಆತ ಏಕೆ  ಕೋಪಿಸುಕೊಳ್ಳುತ್ತಿದ್ದೇನೆ ಎಂದು ಮನನ ಮಾಡಿಕೊಳ್ಳುತ್ತೇನೆ. ಆದರೆ ಬಿಜೆಪಿ ಮಂದಿ ಹಿಂದೂ ಧರ್ಮದ ಬಗ್ಗೆ ಏನೇನು ತಿಳಿದುಕೊಂಡಿಲ್ಲ. ನಾನು ಅವರಿಗಿಂತ ಹೆಚ್ಚಾಗಿ ಹಿಂದೂ ಧರ್ಮದ ಬಗ್ಗೆ ಗೊತ್ತಿದೆ ಎಂದು ಧರ್ಮದ ಅಸ್ತ್ರವನ್ನು ಪ್ರಯೋಗಿಸಿದರು.

ಸಂಸತ್ತಿನ ಕಲಾಪವನ್ನು ಪ್ರಸ್ತಾಪಿಸಿದ  ರಾಹುಲ್ ಗಾಂಧಿ, ಬಿಜೆಪಿ, ಆರ್ ಎಸ್ ಎಸ್  ಮತ್ತು ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಏನೆಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದರು. ಇದರ ಅರ್ಥ ಭಾರತೀಯನಾಗಿರು, ಹಿಂದೂ ಅಥವಾ ಶಿವ ಭಕ್ತನಾಗಿರುವುದೇ ಎಂದು ಪ್ರಶ್ನಿಸಿದರು. ಇನ್ನು ಕೆಲವೇ ವಾರಗಳಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಘಡ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಪ್ರಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಧರ್ಮದ ವಿಷಯವನ್ನೇ ಹೆಚ್ಚು ಪ್ರಸ್ತಾಪ ಮಾಡುತ್ತಿವೆ.        
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದನದಲ್ಲಿ ಸಿದ್ದು vs ಬೆಲ್ಲದ್‌ ಒಳಮೀಸಲು ಹೆಚ್ಚಳ ಜಟಾಪಟಿ! ಯತ್ನಾಳ್‌ಗೆ ಸಿಎಂ ಸಂವಿಧಾನ ಪಾಠ
ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!