NEWS
ನ್ಯಾಯಾಧಿಕರಣ ಮಹದಾಯಿ ತೀರ್ಪು ಪ್ರಕಟಿಸಿದ್ದು ರಾಜ್ಯ ಕೇಳಿದ್ದ 36.5 ಟಿಎಂಸಿ ನೀರಿನಲ್ಲಿ ಕೇವಲ 13.5 ಟಿಎಂಸಿ ಮಾತ್ರ ಹಂಚಲಾಗಿದೆ. ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್'ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.
ನವದೆಹಲಿ[ಆ.14]: ನ್ಯಾ. ಜೆ.ಎಂ ಪಾಂಚಾಳ್ ನೇತೃತ್ವದ ತ್ರಿಸದಸ್ಯ ಪೀಠ ಮಹದಾಯಿ ತೀರ್ಪನ್ನು ಪ್ರಕಟಿಸಿದ್ದು ರಾಜ್ಯಕ್ಕೆ 4 ಟಿಎಂಸಿ ಕುಡಿಯುವ ನೀರನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.
ಮಹದಾಯಿ ಕಣಿವೆಗೆ 1.5 ಟಿಎಂಸಿ ಒಳಗೊಂಡು ರಾಜ್ಯಕ್ಕೆ ಕುಡಿಯಲು 5.5 ಟಿಎಂಸಿ ನೀರು ಲಭ್ಯವಾಗಿದೆ. ಮಲಪ್ರಭೆ ಜಲಾಶಯಕ್ಕೆ 4 ಟಿಎಂಸಿ ಹರಿಸಲು ಒಪ್ಪಿಗೆ ನೀಡಲಾಗಿದೆ. ತ್ರಿಸದಸ್ಯ ಪೀಠ ಮಹದಾಯಿ ಜಲ ವಿದ್ಯುತ್ ಯೋಜನೆಗೆ 8.02 ಟಿಎಂಸಿ ನೀರು ಬಳಸಲು ಒಪ್ಪಿಗೆ ನೀಡಿದೆ.
ಕಳೆದ 5 ವರ್ಷದಲ್ಲಿ 105 ದಿನಗಳ ಕಾಲ ವಿಚಾರಣೆ ನಡೆಸಿತ್ತು. ಕರ್ನಾಟಕದ ಪರ ಅಶೋಕ್ ದೇಸಾಯಿ, ಮೋಹನ್ ಕಾತರಕಿ,ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದು,ರಾಜ್ಯಕ್ಕೆ ಕುಡಿಯಲು 7 ಟಿಎಂಸಿ ನೀರನ್ನು ನ್ಯಾಯಾಧಿಕರಣ ಮುಂದೆ ಕೇಳಿದ್ದರು. ರಾಜ್ಯದ ಮನವಿಯಲ್ಲಿ 7 ಟಿಎಂಸಿ ಹೆಚ್ಚುವರಿ ನೀರಿನ ಬೇಡಿಕೆಯಿತ್ತು. ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ನೀರು ಹಂಚಿಕೆಯಾಗಿದೆ.
ತೀರ್ಪಿನ ಪ್ರಮುಖ ಅಂಶಗಳು
ಕ್ಲಿಕ್ಕಿಸಿ: ನ್ಯಾಯಾಧಿಕರಣ ಆದೇಶದ ಪೂರ್ಣ ಪ್ರತಿ