ದಿಗ್ಗಿ ವಿರುದ್ಧ ಅಡ್ವಾಣಿ ಪುತ್ರಿ ಕಣಕ್ಕೆ...?

Published : Apr 06, 2019, 01:04 PM IST
ದಿಗ್ಗಿ ವಿರುದ್ಧ ಅಡ್ವಾಣಿ ಪುತ್ರಿ ಕಣಕ್ಕೆ...?

ಸಾರಾಂಶ

ಗಾಂಧೀನಗರ ಕ್ಷೇತ್ರದಿಂದ ಸ್ಪರ್ಧಿಸಲು ಅಡ್ವಾಣಿ ನಿರಾಕರಿಸಿದ ಬೆನ್ನಲ್ಲೇ ಅವರ ಪುತ್ರಿ ಪ್ರತಿಭಾಗೆ ಟಿಕೆಟ್‌ ನೀಡುವ ಆಫರ್‌ ಅನ್ನು ಪಕ್ಷ ನೀಡಿತ್ತು. ಆದರೆ ಸ್ವತಃ ಅಡ್ವಾಣಿ ಅದನ್ನು ತಿರಸ್ಕರಿಸಿದ್ದರು ಎನ್ನಲಾಗಿತ್ತು. ಇದೀಗ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಭೋಪಾಲ್‌(ಏ.06): 1989ರಿಂದಲೂ ಬಿಜೆಪಿಯ ಭದ್ರ ಕೋಟೆ ಎಂದೇ ಬಿಂಬಿತವಾಗಿರುವ ಭೋಪಾಲ್‌ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಅಖಾಡಕ್ಕೆ ಧುಮುಕಿರುವ ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಎಲ್‌.ಕೆ. ಅಡ್ವಾಣಿ ಅವರ ಪುತ್ರಿ ಪ್ರತಿಭಾ ಅಡ್ವಾಣಿ ಅವರನ್ನು ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ ಇದೆ. 

ಅಡ್ವಾಣಿ, ಜೋಶಿಗೆ ಟಿಕೆಟ್ ತಪ್ಪಲು ಕಾರಣವೇನು? ಬಹಿರಂಗಪಡಿಸಿದ ಶಾ!

ಗಾಂಧೀನಗರ ಕ್ಷೇತ್ರದಿಂದ ಸ್ಪರ್ಧಿಸಲು ಅಡ್ವಾಣಿ ನಿರಾಕರಿಸಿದ ಬೆನ್ನಲ್ಲೇ ಅವರ ಪುತ್ರಿ ಪ್ರತಿಭಾಗೆ ಟಿಕೆಟ್‌ ನೀಡುವ ಆಫರ್‌ ಅನ್ನು ಪಕ್ಷ ನೀಡಿತ್ತು. ಆದರೆ ಸ್ವತಃ ಅಡ್ವಾಣಿ ಅದನ್ನು ತಿರಸ್ಕರಿಸಿದ್ದರು ಎನ್ನಲಾಗಿತ್ತು. 

ಅದರ ಬೆನ್ನಲ್ಲೇ ಇದೀಗ ಪ್ರತಿಭಾ ಅವರನ್ನು ಮಧ್ಯಪ್ರದೇಶದ ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ದಿಗ್ವಿಜಯ್‌ ವಿರುದ್ಧ ಕಣಕ್ಕೆ ಇಳಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿದೆ.

PREV
click me!

Recommended Stories

ರಾಹುಲ್‌ ಸೋಲಿಸಲು 2014ರಲ್ಲೇ ಸ್ಮೃತಿ ಸಿದ್ಧತೆ!
ಮೋದಿ ಸಂಪುಟದಲ್ಲಿ ರಾಜ್ಯದ ಯಾರಿಗೆ ಮಂತ್ರಿಗಿರಿ?