ದೂತ ಸಮೀರ್ ಯೂಟ್ಯೂಬ್‌ ಆದಾಯವೆಷ್ಟು? 45 ನಿಮಿಷದ ವಿಚಾರಣೆಯಲ್ಲಿ ಏನೆಲ್ಲಾ ಕೇಳಲಾಯ್ತು?

Published : Aug 30, 2025, 03:37 PM IST
Youtuber Sameer MD

ಸಾರಾಂಶ

ವಿವಾದಾತ್ಮಕ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ, ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್ ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಒಪ್ಪಿಸಿದರು. ಪೊಲೀಸರು ಸಮೀರ್‌ನ ಯೂಟ್ಯೂಬ್ ಆದಾಯದ ಮೂಲ, AI ವೀಡಿಯೊದ ಉದ್ದೇಶ ಕೇಳಿದರು.

ಬೆಳ್ತಂಗಡಿ: ವಿವಾದಾತ್ಮಕ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಇಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದರು. ನಿನ್ನೆ ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದ ಸಮೀರ್, ತನ್ನ ವಕೀಲರ ಮೂಲಕ ಮೆಮೊ ಸಲ್ಲಿಸಿದ್ದರೂ, ಪೊಲೀಸರು ಇಂದು ಸ್ವತಃ ಹಾಜರಾಗಲೇ ಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದರು. ಅದರಂತೆ ಸಮೀರ್ ಬೆಳ್ತಂಗಡಿ ಠಾಣೆಗೆ ಬಂದು, ಹಲವು ದಾಖಲೆಗಳನ್ನು ತನಿಖಾ ಅಧಿಕಾರಿಗಳಿಗೆ ಒಪ್ಪಿಸಿದರು. ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್, ಮೂಲ ವೀಡಿಯೊ ದಾಖಲೆಗಳು ಹಾಗೂ ತಾಂತ್ರಿಕ ಮಾಹಿತಿಗಳು ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಪೊಲೀಸರು ಸಂಗ್ರಹಿಸಿದರು.

ಹಣಕಾಸು ವಿಚಾರಣೆಗೂ ಒತ್ತು

  • ಪೊಲೀಸರು ಸಮೀರ್‌ನ ಯೂಟ್ಯೂಬ್ ಆದಾಯದ ಮೂಲಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಕೇಳಿದ್ದರು. ಇದರಲ್ಲಿ:
  • ಯೂಟ್ಯೂಬ್ ಮೊನೆಟೈಸೇಶನ್ (AdSense) ಮೂಲಕ ಬಂದ ಆದಾಯ
  • ಆ ಹಣವನ್ನು ಯಾವ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂಬ ವಿವರ
  • ಯಾವುದೇ third-party sponsorships ಅಥವಾ paid promotions ಇದ್ದವೆಯೇ ಎಂಬ ಮಾಹಿತಿ
  • "Dootha" ಚಾನಲ್ ಅನ್ನು ಸಮೀರ್ ಒಬ್ಬನೇ ನಡೆಸುತ್ತಿದ್ದಾನೆಯೇ ಅಥವಾ ಇನ್ನೂ ಯಾರಾದರೂ ಪಾಲುದಾರರಾಗಿದ್ದಾರೆಯೇ ಎಂಬ ಸ್ಪಷ್ಟನೆ
  • ಚಾನಲ್‌ಗೆ ಲಿಂಕ್ ಆಗಿರುವ AdSense ಖಾತೆ ಯಾರ ಹೆಸರಿನಲ್ಲಿ ಇದೆ ಎಂಬ ದಾಖಲೆ
  • ಪ್ರತಿ ತಿಂಗಳು ಸರಾಸರಿ ಆದಾಯ ಎಷ್ಟು ಬರುತ್ತದೆ ಎಂಬ ವಿವರ
  • 2025ರ ಜುಲೈನಲ್ಲಿ ಆ ವೀಡಿಯೊ ಅಪ್‌ಲೋಡ್ ಆದ ನಂತರ ಆದಾಯದಲ್ಲಿ ಏರಿಕೆ ಕಂಡಿದೆಯೇ ಎಂಬ ಮಾಹಿತಿ
  • ಎಲ್ಲಾ ವಿವರಗಳನ್ನು ಪೊಲೀಸರು ಕೇಳಿ ಪರಿಶೀಲನೆ ನಡೆಸಿದರು.

AI ವೀಡಿಯೊ ಕುರಿತು ವಿಶೇಷ ಪರಿಶೀಲನೆ

ಈ ಪ್ರಕರಣದಲ್ಲಿ ಪ್ರಮುಖ ಅಂಶವೆಂದರೆ, ಸಮೀರ್ ಅಪ್‌ಲೋಡ್ ಮಾಡಿದ AI ಮೂಲಕ ಸೃಷ್ಟಿಸಿರುವ ವೀಡಿಯೊ. ವೀಡಿಯೊ ಮಾಡಿದ ಉದ್ದೇಶ ನಿಜವಾಗಿಯೂ ‘ಹಣಕಾಸು ಲಾಭಕ್ಕಾಗಿ’ ಆಗಿದೆಯೇ?, ಅಥವಾ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲು ತಪ್ಪು ಹಾಗೂ ಸುಳ್ಳು ವಿಷಯಗಳನ್ನು ಉದ್ದೇಶಪೂರ್ವಕವಾಗಿ ಹಂಚಿದ್ದಾನೆಯೇ? ಎಂಬುದನ್ನು ದೃಢೀಕರಿಸಲು ಪೊಲೀಸರು ದಾಖಲೆಗಳನ್ನು ಸಂಗ್ರಹಿಸಿದರು.

ಸುಮಾರು 45 ನಿಮಿಷಗಳ ವಿಚಾರಣೆ ನಡೆದಿದ್ದು, ಅಗತ್ಯ ದಾಖಲಾತಿಗಳಲ್ಲಿ ಕೆಲವು ಸಲ್ಲಿಸಿದ ಬಳಿಕ ಸಮೀರ್ ಠಾಣೆಯಿಂದ ಹೊರಟರು. AI ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್