Sameer vs Kirik Keerthi: ದರ್ಗಾದಲ್ಲಿ ನಡೆದ 250ಕ್ಕೂ ಹೆಚ್ಚು ರೇ*ಪ್​ ಬಗ್ಗೆ ಬಾಯ್ಬಿಟ್ಟ ಸಮೀರ್​: ವಿಡಿಯೋದಲ್ಲಿ ಹೇಳಿದ್ದೇನು?

Published : Jul 25, 2025, 10:23 PM IST
Sameer and Kirik Keerthi

ಸಾರಾಂಶ

ದರ್ಗಾದಲ್ಲಿ ಈ ಹಿಂದೆ 250ಕ್ಕೂ ಅಧಿಕ ಹೆಣ್ಣುಮಕ್ಕಳ ಮೇಲೆ ರೇ*ಪ್​ ನಡೆದಿರುವುದು ನಿಜ ಎನ್ನುವ ಸತ್ಯವನ್ನು ಒಪ್ಪಿಕೊಂಡಿರುವ ಯುಟ್ಯೂಬರ್​ ಎಂ.ಡಿ.ಸಮೀರ್​ ಈ ಬಗ್ಗೆ ವಿಡಿಯೋದಲ್ಲಿ ಹೇಳಿದ್ದೇನು? 

ಸದ್ಯ ಧರ್ಮಸ್ಥಳದ ಸೌಜನ್ಯ ಕೇಸ್​ ಇಡೀ ದೇಶಾದ್ಯಂತ ಭಾರಿ ಹಲ್​ಚಲ್​ ಸೃಷ್ಟಿಸುತ್ತಿದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದ್ದು ಯುಟ್ಯೂಬರ್​ ಸಮೀರ್ ಎಂ.ಡಿ. ಇದಾದ ಬಳಿಕ ಈ ಕೇಸ್​ ಮತ್ತೆ ಚಿಗುರಿದ್ದು, ಮುಗ್ಧೆ ಸೌಜನ್ಯಳಿಗೆ ನ್ಯಾಯ ಒದಗಿಸಬೇಕು ಎನ್ನುವ ಕೂಗು ಜೋರಾಗಿದೆ. ಇದರ ವಿಷಯ ಯಾವಾಗ ಇಷ್ಟೊಂದು ಹವಾ ಸೃಷ್ಟಿಸಿತೋ, ಆಗ ಸಮೀರ್​ ಅವರು ಕೃತಕ ಬುದ್ಧಿಮತ್ತೆ ಉಪಯೋಗಿಸಿ, ಧರ್ಮಸ್ಥಳದಲ್ಲಿ ಸಿಕ್ಕಿದೆ ಎನ್ನಲಾದ ಹೆಣಗಳ ರಾಶಿಗಳ ಕುರಿತು ಯುವಕನೊಬ್ಬನಿಂದ ವಿಡಿಯೋ ಮಾಡಿ ಪೇಚಿಗೆ ಸಿಲುಕಿದರು. ಈ ವಿಡಿಯೋ ಎಐ ಎನ್ನುವುದು ಅರಿಯದೇ, ಅರಿತರೂ ಅದು ನಿಜ ಎಂದೇ ಎಲ್ಲರೂ ನಂಬಲಿ ಎನ್ನುವ ಕಾರಣಕ್ಕೆ ಒಂದಿಷ್ಟು ಮಂದಿ ಇದರ ಬಗ್ಗೆ ಪ್ರಚಾರ ಮಾಡಿದರು. ಆದರೆ ಇದು ಸುಳ್ಳು ವಿಡಿಯೋ ಎನ್ನುವುದು ತಿಳಿದು ಕೇಸು ದಾಖಲಾಗುತ್ತಲೇ, ತಮ್ಮ ಯುಟ್ಯೂಬ್​ನಿಂದ ಸಮೀರ್​ ಅವರು ಈ ವಿಡಿಯೋ ಡಿಲೀಟ್​ ಮಾಡಿದರು.

ಇದಾಗುತ್ತಿದ್ದಂತೆಯೇ ಕಿರಿಕ್​ ಕೀರ್ತಿ ಅವರು, ಹಿಂದೂ ಧರ್ಮವನ್ನು ಮುಂದಿಟ್ಟುಕೊಂಡು ಸಮೀರ್​ ಇಲ್ಲಸಲ್ಲದ ಸುಳ್ಳುಗಳನ್ನುಸೃಷ್ಟಿ ಮಾಡುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿದರು. ದರ್ಗಾದಲ್ಲಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಸಮೀರ್​ ಬಾಯ್ಬಿಡುತ್ತಿಲ್ಲ ಎಂದರು. ಇವರ ಮಾತಿಗೆ ಕೀರ್ತಿ ಫ್ಯಾನ್ಸ್​ ಸೇರಿದಂತೆ ಸಮೀರ್​ ವಿರೋಧಿಗಳು ಭಾರಿ ಪ್ರಚಾರ ಮಾಡಿದರು. ದರ್ಗಾದಲ್ಲಿ ನಡೆಯುತ್ತಿರುವ ಹಾಗೂ ಆ ಸಮುದಾಯದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆಗಳ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟ್ರೆಂಡ್​ ಶುರುವಾಯಿತು. ಈ ಬಗ್ಗೆ ಸಮೀರ್​ ಯಾಕೆ ದನಿ ಎತ್ತುತ್ತಿಲ್ಲ ಎನ್ನುವ ಪ್ರಶ್ನೆಗಳ ಸುರಿಮಳೆಯೇ ಆಯಿತು.

ಆದ್ದರಿಂದ ಇದೀಗ ಸಮೀರ್​ ಅವರು, ತಾವು ಯಾವುದೇ ಧರ್ಮದ ವಿರುದ್ಧವಿಲ್ಲ ಎನ್ನುತ್ತಲೇ ಕೀರ್ತಿ ಅವರಿಗೆ ಪರೋಕ್ಷವಾಗಿ ಟಾಂಗ್​ ಕೊಡುತ್ತಲೇ ದರ್ಗಾದಲ್ಲಿ ನಡೆದಿರುವ 250ಕ್ಕೂ ಅಧಿಕ ಅತ್ಯಾ*ಚಾರಗಳ ಬಗ್ಗೆ ಬಾಯ್ಬಿಟ್ಟು, ಅದರ ವಿಡಿಯೋ ಮಾಡಿದ್ದಾರೆ. ಅವರು ಹೇಳಿದ್ದೇನೆಂದರೆ, 2023 ಸೆಪ್ಟೆಂಬರ್​ 23ರಂದು ನನ್ನ ಹುಟ್ಟುಹಬ್ಬದ ದಿನ ಅಜ್ಮೇರಾದಲ್ಲಿರುವ ಖಾಜಾ ಗರೀಬ್​ ನವಾಜ್​ ದರ್ಗಾಕ್ಕೆ ಹೋಗಿದ್ದೆ. ಈ ಹಿಂದೆ ಇದೇ ಒಂದು ಮ್ಯಾನೇಜ್​ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಜನರು ದರ್ಗಾ ನೋಡಲು ಬರುತ್ತಿದ್ದಂತಹ ಒಂಟಿ ಹೆಂಗಸರು ಮತ್ತು ಲೋಕಲ್​ ಹುಡುಗಿಯರನ್ನು ರೇ*ಪ್​ ಮಾಡಿರುವ 250ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಸುಮಾರು ವರ್ಷಗಳಿಂದ ಮ್ಯಾನೇಜ್​ಮೆಂಟ್​ನಲ್ಲಿ ಕೆಲ್ಸ ಮಾಡುತ್ತಿದ್ದವರೇ ಈ ಕೆಲಸ ಮಾಡಿದ್ದಾರೆ. ಅವರೆಲ್ಲಾ ಸಿಕ್ಕಿಬಿದ್ದು ಅವರಿಗೆ ಕಾನೂನು ರೀತಿ ಶಿಕ್ಷೆನೂ ಆಗಿದೆ. ಅಲ್ಲಿ ಇಂಥ ಕೆಲ್ಸ ಮಾಡಿದವರು ದರ್ಗಾದಲ್ಲಿ ಇದ್ದ ವ್ಯಕ್ತಿಗಳೇ ವಿನಾ ದೇವರಲ್ಲ. ದೇವರಿಗೂ, ಈ ಪ್ರಕರಣಕ್ಕೂ ಸಂಬಂಧ ಇಲ್ಲ. ಆದರೆ ಇದನ್ನು ತಿಳಿಯದೇ ತಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂದಿದ್ದಾರೆ.

ಈ ವಿಡಿಯೋ ಈಗ ಪರ-ವಿರೋಧಗಳಿಂದಾಗಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸಮೀರ್​ ಅಭಿಮಾನಿಗಳು ಅವರನ್ನು ಹಾಡಿ ಹೊಗಳುತ್ತಿದ್ದರೆ, ದರ್ಗಾದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ನಿನ್ನ ಬಾಯಿಯಿಂದ ಬರಿಸಲು ಕಿರಿಕ್​ ಕೀರ್ತಿಯೇ ಬರಬೇಕಾಯ್ತಲ್ಲಪ್ಪ, ಕೊನೆಗೂ ಸತ್ಯ ಒಪ್ಪಿಕೊಳ್ಳದೇ ಬೇರೆ ವಿಧಿಯಿರಲಿಲ್ಲ ನಿನಗೆ ಎನ್ನುತ್ತಿದ್ದಾರೆ. ಈ ವಿಡಿಯೋದಲ್ಲಿ ಸಮೀರ್​ ಅವರು ಪಂಚೆ ಉಟ್ಟು ನಾನು ಧರ್ಮಸ್ಥಳಕ್ಕೆ ಹೋಗಿದ್ದೆ, ನಾನೂ ಮಂಜುನಾಥನ ಭಕ್ತ ಎಂದಿದ್ದು, ಇದನ್ನು ನಿಮ್ಮವರು ಸಹಿಸುತ್ತಾರೆಯೇ ಎಂದೂ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಈಗ ಮತ್ತೆ ಸಕತ್​ ಸುದ್ದಿ ಮಾಡುತ್ತಿದ್ದು, ತಮಗೆ ಬೇಕಾದ ರೀತಿಯಲ್ಲಿ ಜನರು ಅರ್ಥ ಕಲ್ಪಿಸಿಕೊಳ್ಳುತ್ತಿದ್ದಾರೆ.

 

 

 

PREV
Read more Articles on
click me!

Recommended Stories

ಗಮನಿಸಿ, ಇಂಟರ್ ಲಾಕಿಂಗ್ ಕಾಮಗಾರಿ ಹಿನ್ನೆಲೆ ಹಲವು ರೈಲು ಸಂಚಾರ ರದ್ದು, ಯಾವೆಲ್ಲ ಮಾರ್ಗದಲ್ಲಿ ಸಂಚಾರ ರದ್ದು?
ಲಿಂಗ ಸಮಾನತೆಗೆ ಸಾಕ್ಷಿಯಾದ ಬೀರೂರು: ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಅಕ್ಕ-ತಂಗಿ!