ಶಾಪಿಂಗ್ ಮಾಲ್‌ನಲ್ಲೇ ಸೀಮೆಎಣ್ಣೆ ಸುರಿದುಕೊಂಡು ಯುವತಿ ಆತ್ಮಹತ್ಯೆ: ಕಾರಣ?

Published : Dec 25, 2019, 08:33 AM ISTUpdated : Dec 25, 2019, 11:30 AM IST
ಶಾಪಿಂಗ್ ಮಾಲ್‌ನಲ್ಲೇ ಸೀಮೆಎಣ್ಣೆ ಸುರಿದುಕೊಂಡು ಯುವತಿ ಆತ್ಮಹತ್ಯೆ: ಕಾರಣ?

ಸಾರಾಂಶ

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ| ಸಿಟಿ ಸೆಂಟರ್ ಮಾಲ್‌ನಲ್ಲಿ ನಡೆದ ಘಟನೆ| ಸಿಟಿ ಸೆಂಟರ್ ಮಾಲ್‌ನಲ್ಲಿರುವ ವಿಜಯಲಕ್ಷ್ಮಿ ಸಾರಿ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ| ಶಾಪ್‌ನ ಶೌಚಾಲಯದಲ್ಲಿಯೇ ಸೀಮೆಎಣ್ಣೆ  ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ|

ಕಲಬುರಗಿ[ಡಿ.25]: ಯುವತಿಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸೂಪರ್ ಮಾರ್ಕೆಟ್ ರಸ್ತೆಯಲ್ಲಿರುವ ಸಿಟಿ ಸೆಂಟರ್  ಮಾಲ್‌ನಲ್ಲಿ ಮಂಗಳವಾರ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವತಿಯನ್ನ ನಾಗರತ್ನ ಹಿರೇಮಠ್ (20) ಎಂದು ಗುರುತಿಸಲಾಗಿದೆ. 

ಸಂಗಮೇಶ್ವರ ಕಾಲೋನಿ ನಿವಾಸಿ ನಾಗರತ್ನ ಹಿರೇಮಠ್ ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿರುವ ವಿಜಯಲಕ್ಷ್ಮಿ ಸಾರಿ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಮೃತ ನಾಗರತ್ನ ಶಾಪ್‌ನ ಶೌಚಾಲಯದಲ್ಲಿಯೇ ಸೀಮೆಎಣ್ಣೆ  ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೃತ ನಾಗರತ್ನ ಹಿರೇಮಠ್ ಬಾಟಲಿಯಲ್ಲಿ ಸೀಮೆ ಎಣ್ಣೆ ತುಂಬಿಕೊಂಡು ವ್ಯಾನಿಟಿ ಬ್ಯಾಗ್ ನಲ್ಲಿ ತಂದಿದ್ದಳು ಎಂದು ತಿಳಿದು ಬಂದಿದೆ. ಆದರೆ, ನಾಗರತ್ನ ಹಿರೇಮಠ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

PREV
click me!

Recommended Stories

ಕೋಲಾರ: ಪಕ್ಕದ ಸೀಟಲ್ಲಿ ಕುಳಿತ ಮಹಿಳೆಯ ಮೈಕೈ ಮುಟ್ಟಿ ಅಸಭ್ಯ ವರ್ತನೆ: ಕಾಮುಕ ಅಂಕಲ್‌ಗೆ ಹಿಗ್ಗಾಮುಗ್ಗಾ ಗೂಸಾ! ವಿಡಿಯೋ ವೈರಲ್
ಮಂಗಳೂರು: ಮಧ್ಯರಾತ್ರಿ ಕಾರಲ್ಲಿ ಅಪ್ರಾಪ್ತಳನ್ನ ಕರೆದೊಯ್ದವನಿಗೆ ಕಾರು ಅಡ್ಡಗಟ್ಟಿ ಗುಂಪು ಹಲ್ಲೆ; ಎಫ್‌ಐಆರ್, ಐವರು ವಶಕ್ಕೆ!