ಸೋಲಾರ್ ವಿದ್ಯುತ್ ಸ್ಪರ್ಷಿಸಿ ಕಾಡಾನೆ ಮರಿ ಸಾವು

Suvarna News   | Asianet News
Published : Jul 18, 2021, 03:46 PM IST
ಸೋಲಾರ್ ವಿದ್ಯುತ್ ಸ್ಪರ್ಷಿಸಿ ಕಾಡಾನೆ ಮರಿ ಸಾವು

ಸಾರಾಂಶ

ಸೋಲಾರ್ ವಿದ್ಯುತ್ ತಂತಿ ಸ್ಪರ್ಷಿಸಿ‌ ಆನೆ ಮರಿ‌ಯೊಂದು ಸಾವು ಕೊಡಗು ಜಿಲ್ಲೆ ಸೋಮವಾರ ಪೇಟೆಯಲ್ಲಿ ಘಟನೆ ಶುಂಠಿ ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ವಿದ್ಯುತ್

 ಕೊಡಗು (ಜು.18): ಸೋಲಾರ್ ವಿದ್ಯುತ್ ತಂತಿ ಸ್ಪರ್ಷಿಸಿ‌ ಆನೆ ಮರಿ‌ಯೊಂದು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯಲ್ಲಿಂದು ನಡೆದಿದೆ. 

ಅಂದಾಜು ಎಂಟು ವರ್ಷದ ಗಂಡಾನೆ ಮರಿ ಸೋಮವಾರಪೇಟೆ ತಾಲೂಕಿನ ಅರೆಯೂರು ಮೋರಿಕಲ್ಲು ಗ್ರಾಮದಲ್ಲಿ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ಸ್ಪರ್ಷಿಸಿ‌ ಸಾವನ್ನಪ್ಪಿದೆ. 

ಗುಂಡ್ಲು​ಪೇಟೆ ಬಳಿ ವಿದ್ಯುತ್‌ ಶಾಕ್‌ಗೆ ಬಲಿಯಾದ ಹೆಣ್ಣಾನೆ

ಇಲ್ಲಿನ ಅವಿನಾಶ್ ಎಂಬುವವರು ತಮ್ಮ ಶುಂಠಿ ತೋಟಕ್ಕೆ ಅಳವಡಿಸಲಾಗಿದ್ದ ಸೋಲಾರ್ ಬೇಲಿ ಸ್ಪರ್ಷಿಸಿ‌ ಆನೆ ಮರಿ ಸಾವನ್ನಪ್ಪಿದೆ. ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಕಾಡಾನೆಗಳು ಈ ರೀತಿಯ ದುರಂತದಿಂದ ಸಾವನ್ನಪ್ಪುತ್ತಿವೆ. 

ಮಳೆಗಾಲವಾದ ಹಿನ್ನೆಲೆ ವಿದ್ಯುತ್ ಆಘಾತ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗಿ ಆನೆ ಮರಿ ಸಾವನ್ನಪ್ಪಿದೆ. 

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್