ಕರಾವಳಿ ಜಿಲ್ಲೆಗೆ ನಾಳೆಯೂ ರೆಡ್ ಅಲರ್ಟ್: 4 ತಾಲೂಕುಗಳ ಶಾಲೆಗಳಿಗೆ ರಜೆ !

Published : Jul 03, 2025, 07:51 PM IST
school holiday

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜುಲೈ 4 ರಂದು ಶಿರಸಿ, ಸಿದ್ಧಾಪುರ, ಯಲ್ಲಾಪುರ ಮತ್ತು ಜೊಯಿಡಾ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕದ್ರಾ ಡ್ಯಾಂನಿಂದ 33,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಕದ್ರಾ-ಕೊಡಸಳ್ಳಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಕಾರವಾರ, ಉತ್ತರ ಕನ್ನಡ (ಜು.03): ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಆತಂಕ ಮುಂದುವರೆದಿದ್ದು, ನಾಳೆಯೂ (ಜುಲೈ 4) ಜಿಲ್ಲೆಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಕದ್ರಾ ಜಲಾಶಯ ಭಾಗದಲ್ಲಿ ಸಂಭವಿಸಿದ ಗುಡ್ಡ ಕುಸಿತ, ಹಾಗೂ ಡ್ಯಾಂನಿಂದ ಹೊರಹರಿವು ಇತ್ಯಾದಿ ಕಾರಣಗಳಿಂದ ಹಲವೆಡೆ ಅವಾಂತರದ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಳೆ ರೆಡ್ ಅಲರ್ಟ್ ಹಿನ್ನೆಲೆ ಶಾಲೆಗಳಿಗೆ ರಜೆ:  ಜಿಲ್ಲಾಧಿಕಾರಿ ಡಾ. ಲಕ್ಷ್ಮೀಪ್ರಿಯಾ ಅವರು ಹೊರಡಿಸಿರುವ ಆದೇಶದಂತೆ, ನಾಲ್ಕು ತಾಲ್ಲೂಕುಗಳಲ್ಲಿ ನಾಳೆ (ಜುಲೈ 4) ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ರಜೆ ಇರುವ ತಾಲ್ಲೂಕುಗಳು:

  • ಶಿರಸಿ
  • ಸಿದ್ಧಾಪುರ
  • ಯಲ್ಲಾಪುರ
  • ಜೊಯಿಡಾ

ಮುಂದಿನ ದಿನಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದ್ದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕದ್ರಾ-ಕೊಡಸಳ್ಳಿ ರಸ್ತೆಯಲ್ಲಿ ಗುಡ್ಡ ಕುಸಿತ-ವಾಹನ ಸಂಚಾರ ನಿಷೇಧ

ಕಾರವಾರ ತಾಲ್ಲೂಕಿನ ಬಾಳೆಮನೆ ಬಳಿ ಕದ್ರಾ-ಕೊಡಸಳ್ಳಿ ರಸ್ತೆಯಲ್ಲಿ ಭಾರೀ ಮಳೆ ಭೂ ಕುಸಿತವಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಪಾಯವಾಗುವ ಮುನ್ಸೂಚನೆಯಿಂದ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಈ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ.

ಕದ್ರಾ ಡ್ಯಾಂನಿಂದ 33,000 ಕ್ಯೂಸೆಕ್ ನೀರಿನ ಬಿಡುಗಡೆ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಕದ್ರಾ ಜಲಾಶಯದಿಂದ ನೀರಿನ ಹೊರ ಹರಿವು ಹೆಚ್ಚಿಸಲಾಗಿದೆ. ಜಲಾಶಯದ 4 ಗೇಟುಗಳು ತೆರೆಯಲಾಗಿದ್ದು, 12,000 ಕ್ಯೂಸೆಕ್ ನೀರನ್ನು ಹೊರಹರಿವು ಬಿಡುಗಡೆ ಮಾಡಲಾಗುತ್ತಿದೆ. ಜೊತೆಗೆ ವಿದ್ಯುತ್ ಉತ್ಪಾದನೆಗೆ ಬಳಸಲಾಗುವ ನೀರಿನ ಪ್ರಮಾಣ 21,000 ಕ್ಯೂಸೆಕ್ ಆಗಿದೆ. ಒಟ್ಟಾರೆ 33,000 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಜಲಾಶಯದ ಗರಿಷ್ಠ ಸಾಮರ್ಥ್ಯ: 34.50 ಟಿಎಂಸಿ, ಪ್ರಸ್ತುತ ಮಟ್ಟ: 30 ಟಿಎಂಸಿ ತಲುಪಿದೆ. ಜಲಾಶಯದ ವ್ಯಾಪ್ತಿಯಲ್ಲಿ ಭೂ-ಕುಸಿತ ಭೀತಿಯಿರುವ ಪ್ರದೇಶಗಳ ನಿವಾಸಿಗಳಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸರಕಾರಿ ಇಲಾಖೆಗಳಿಂದ ಎಚ್ಚರಿಕೆ:

ಜಿಲ್ಲೆಯಲ್ಲಿ ನದಿಗಳ ಪಕ್ಕದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಅಗ್ನಿಶಾಮಕ, NDRF ಹಾಗೂ ತುರ್ತು ಸೇವೆಗಳ ತಂಡ ತಯಾರಲ್ಲಿವೆ. ಸಾರ್ವಜನಿಕರು ಅನಾವಶ್ಯಕವಾಗಿ ಹೊರಗೆ ಹೋಗದಂತೆ ಮನವಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂಬುದಾಗಿ ಜಿಲ್ಲಾಡಳಿತವು ಕರೆ ನೀಡಿದೆ.

ಸಾರಾಂಶ:

  • ಶಾಲಾ ರಜೆ: ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೊಯಿಡಾ – ಜು.4 ರಂದು
  • ರಸ್ತೆ ಸ್ಥಿತಿ: ಕದ್ರಾ-ಕೊಡಸಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ
  • ಕದ್ರಾ ಡ್ಯಾಂ ಮಾಹಿತಿ: 33,000 ಕ್ಯೂಸೆಕ್ ನೀರು ಬಿಡುಗಡೆ, ಸಾರ್ವಜನಿಕ ಎಚ್ಚರಿಕೆ
  • ಅಧಿಕಾರಿ: ಡಾ. ಲಕ್ಷ್ಮೀಪ್ರಿಯಾ, ಜಿಲ್ಲಾಧಿಕಾರಿ, ಉತ್ತರ ಕನ್ನಡ

PREV
Read more Articles on
click me!

Recommended Stories

ಸೂಕ್ಷ್ಮ ಇರುವುದಕ್ಕೇ ನಾನು ಇನ್ನೂ ಉಳಿದಿದ್ದೇನೆ, ಸುಮ್‌ಸುಮ್ಮನೆ ಮಾತಾಡಲ್ಲ: ಪರಮೇಶ್ವರ್
Speaker UT Khader: ದಶಕಗಳಲ್ಲೇ ಅಪರೂಪದ ಘಟನೆ, ಸ್ಪೀಕರ್‌ ಖಾದರ್‌ ಎದ್ದು ಹೋದರು! ಲಿಖಿತ ಉತ್ತರ ಕೊಡದ್ದಕ್ಕೆ ಅಸಮಾಧಾನ