ಸಿಂಧನೂರು: ಶೆಡ್‌ ಮೇಲೆ ಉರುಳಿಬಿದ್ದ ಲಾರಿ: ಸ್ಥಳದಲ್ಲೇ ಇಬ್ಬರ ದುರ್ಮರಣ

By Suvarna NewsFirst Published Dec 19, 2019, 10:01 AM IST
Highlights

ಟಿನ್ ಶೆಡ್ ಮೇಲೆ ಉರುಳಿಬಿದ್ದ ಲಾರಿ| ದಂಪತಿ ಸಾವು| ಸಿಂಧನೂರು ತಾಲೂಕಿನ ಬೂತಲದಿನ್ನಿ ಬಳಿ ನಡೆದ ಘಟನೆ| ಶಹಾಪುರದಿಂದ ಸಿಂಧನೂರು ಕಡೆಗೆ ಹೊರಟಿದ್ದ ಭತ್ತ ತುಂಬಿದ್ದ ಲಾರಿ| ಚಾಲಕನ ನಿರ್ಲಕ್ಷ್ಯದಿಂದ ಟಿನ್ ಶೆಡ್ ಮೇಲೆ  ಉರುಳಿಬಿದ್ದ ಲಾರಿ|ಲಾರಿ ಚಾಲಕ ಹಾಗೂ ಕ್ಲೀನರ್‌ ಬಂಧನ|

ರಾಯಚೂರು(ಡಿ.19): ಭತ್ತ ತುಂಬಿದ್ದ ಲಾರಿಯೊಂದು ಟಿನ್ ಶೆಡ್ ಮೇಲೆ ಉರುಳಿಬಿದ್ದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರಿಗೆ ಗಾಯಗಳಾದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಬೂತಲದಿನ್ನಿ ಬಳಿ ಇಂದು(ಗುರುವಾರ) ಬೆಳಗಿನ ಜಾವ ನಡೆದಿದೆ. ಮೃತ ದಂಪತಿಯನ್ನು ರಾಜಣ್ಣ (45) ಜ್ಯೋತಿ(38) ಎಂದು ಗುರುತಿಸಲಾಗಿದೆ. 

ಶಹಾಪುರದಿಂದ ಸಿಂಧನೂರು ಕಡೆಗೆ ಹೊರಟಿದ್ದ ಭತ್ತ ತುಂಬಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಟಿನ್ ಶೆಡ್ ಮೇಲೆ ಲಾರಿ ಉರುಳಿ ಬಿದ್ದಿದೆ. ನಿದ್ರೆಯಲ್ಲಿದ್ದ ಕುಟುಂಬಗಳ ಮೇಲೆ ಎರಗಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ದಂಪತಿ ಗೋಪಿ ,ದೇವಮ್ಮ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂಬಂಧ ಲಾರಿ ಚಾಲಕ ಹಾಗೂ ಕ್ಲೀನರ್‌ನನ್ನು ಬಂಧಿಸಲಾಗಿದೆ. ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. 
 

click me!