IPS ವರ್ಗಾವಣೆ, ಈ ಜಿಲ್ಲೆಗಳಿಗೆ ಹೊಸ ಎಸ್‌ಪಿಗಳು

By Suvarna NewsFirst Published Jul 14, 2021, 8:21 PM IST
Highlights

* ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ
*  ವರ್ತಿಕಾ ಕಟಿಯಾರ್ - ಉತ್ತರ ಕನ್ನಡ ಎಸ್ ಪಿ, ಜಿ ಸಂಗೀತಾ - ಚಾಮರಾಜನಗರ ಎಸ್ ಪಿ,
* ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಚ್ ಡಿ ಆನಂದ್ ಕುಮಾರ್

ಬೆಂಗಳೂರು (ಜು. 14) ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ  ಮಾಡಿದೆ. ವರ್ತಿಕಾ ಕಟಿಯಾರ್ - ಉತ್ತರ ಕನ್ನಡ ಎಸ್ ಪಿ, ಜಿ ಸಂಗೀತಾ - ಚಾಮರಾಜನಗರ ಎಸ್ ಪಿ, ಮತ್ತು ಎಚ್ ಡಿ ಆನಂದ್ ಕುಮಾರ್  ವಿಜಯಪುರ ಎಸ್ ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಪತಿ ವಿರುದ್ಧ ದೂರು ಕೊಟ್ಟ ವರ್ತಿಕಾ

ವರ್ತಿಕಾ ಕಟಿಯಾರ್ ರಾಜ್ಯ ಅಪರಾಧ ದಳದ ಸುಪರಿಟೆಂಟೆಂಟ್ ಆಗಿದ್ದರು. ಸಂಗೀತಾ ಸಿವಿಲ್ ರೈಟ್ಸ್ ವಿಭಾಗದಲ್ಲಿದ್ದರು.  ಆನಂದ್ ಕುಮಾರ್ ಆಂತರಿಕ ಭದ್ರತಾ ದಳದಲ್ಲಿ ಇದ್ದರು. ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ತಿಕ್ಕಾಟ ಶುರುವಾಗಿದ್ದ ಸಂದರ್ಭ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿತ್ತು. 

ರಾಜ್ಯ ಸರ್ಕಾರ ವರ್ಗಾವಣೆ ಆದೇಶ ನೀಡಿದ್ದು ಅಧಿಕಾರಿಗಳು ಆಯಾ ಜಿಲ್ಲೆ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ.  ಕೊರೋನಾ ಸವಾಲು ಸಹಜವಾಗಿ ಇದ್ದೇ ಇರುತ್ತದೆ. 

 

click me!