ಗಂಗಾವತಿ: ಎನ್‌ಟಿಎಸ್‌ಇ ಪರೀಕ್ಷೆ ವೇಳೆ ಕರ್ತವ್ಯನಿರತ ಶಿಕ್ಷಕ ಸಾವು

Kannadaprabha News   | Asianet News
Published : Jan 26, 2021, 09:05 AM IST
ಗಂಗಾವತಿ: ಎನ್‌ಟಿಎಸ್‌ಇ ಪರೀಕ್ಷೆ ವೇಳೆ ಕರ್ತವ್ಯನಿರತ ಶಿಕ್ಷಕ ಸಾವು

ಸಾರಾಂಶ

ಹೃದಯಾಘಾತದಿಂದ ಶಿಕ್ಷಕ ಸಾವು| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ| ಗೊಟ್ಟಿಪಾಟಿ ವೆಂಕಟರತ್ನಂ ಪ್ರೌಢ ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಮೃತಪಟ್ಟ ಗವಿಸಿದ್ದಯ್ಯಸ್ವಾಮಿ| 

ಗಂಗಾವತಿ(ಜ.26): ಎನ್‌ಟಿಎಸ್‌ಇ ಮತ್ತು ಎನ್‌ಎಂಎಂಎಸ್‌ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಕರ್ತವ್ಯದಲ್ಲಿ ತೊಡಗಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಗಂಗಾ​ವತಿ ನಗರದಲ್ಲಿ ಸೋಮ​ವಾರ ನಡೆದಿದೆ.

ನಗರದ ಗೊಟ್ಟಿಪಾಟಿ ವೆಂಕಟರತ್ನಂ ಪ್ರೌಢ ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಮುಖ್ಯ ಅಧೀಕ್ಷಕರಾಗಿದ್ದ ಹಣವಾಳ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗವಿಸಿದ್ದಯ್ಯಸ್ವಾಮಿ (55) ಮೃತಪಟ್ಟಿದ್ದಾರೆ. 

ಗಂಗಾವತಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌: ಐದು ಅಂಗಡಿ ಭಸ್ಮ, ಲಕ್ಷಾಂತರ ರೂ. ಹಾನಿ

ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧುಗ​ಳಿ​ದ್ದಾ​ರೆ. ಯಲಬುರ್ಗಾ ತಾಲೂಕಿನ ವೀರಾಪುರ ಗ್ರಾಮದ ಗವಿಸಿದ್ದಯ್ಯಸ್ವಾಮಿ ಕಳೆದ ಮೂರು ವರ್ಷಗಳಿಂದ ತಾಲೂಕಿನ ಹಣವಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
 

PREV
click me!

Recommended Stories

ಕನ್ನಡ ಧ್ವಜಕ್ಕೆ ಅಪಮಾನಿಸಿದ್ದ ಸಿಲಂಬರಸನ್ ಅರೆಸ್ಟ್: ಕೊನೆಗೂ ಮಂಡಿಯೂರಿ ಕ್ಷಮೆ ಕೇಳಿದ ಕಿಡಿಗೇಡಿ!
ಮರಳು ದಂಧೆ ವಿರುದ್ಧ ಸಮರ ಸಾರಿದ ದೇವದುರ್ಗ ಶಾಸಕಿ ಮನೆಗೆ ಬಂದು ಧಮ್ಕಿ, ಕಾರಿನ ಮೇಲೆ ಟಿಪ್ಪರ್‌ ಹರಿಸಿ ಹತ್ಯೆಗೆ ಯತ್ನ!