ಹೊಸಪೇಟೆ: ತುಂಗಭದ್ರೆಗೆ ಮಠಾಧೀಶರಿಂದ ಬಾಗಿನ ಅರ್ಪಣೆ

By Kannadaprabha NewsFirst Published Aug 5, 2021, 9:07 AM IST
Highlights

 *  ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಭದ್ರಾ ಜಲಾಶಯ
*  ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಮಠಾಧೀಶರಿಂದ ಬಾಗಿನ
* ಪ್ರತಿ ವರ್ಷವೂ ಜಲಾಶಯ ಭರ್ತಿಯಾಗಲಿ ಎಂದು ಪ್ರಾರ್ಥಿಸಿದ ಶ್ರೀಗಳು
 

ಹೊಸಪೇಟೆ(ಆ.05): ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಮತ್ತು ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ತುಂಗಭದ್ರಾ ಜಲಾಶಯಕ್ಕೆ ಬುಧವಾರ ಅರ್ಪಿಸಿದ್ದಾರೆ.

ಭರ್ತಿಯಾಗಿರುವ ಹಿನ್ನೆಲೆಯಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಬೆಳೆಗಳಿಗೆ ನೀರು ದೊರೆಯಲಿದೆ. ಪ್ರತಿ ವರ್ಷವೂ ಜಲಾಶಯ ಹೀಗೆ ಭರ್ತಿಯಾಗಲಿ ಎಂದು ಶ್ರೀಗಳು ಪ್ರಾರ್ಥಿಸಿದರು.

ತುಂಗಭದ್ರಾ ಡ್ಯಾಮಲ್ಲಿ ಬಣ್ಣದ ರಂಗು : 33 ಕ್ರೆಸ್ಟ್‌ ಗೇಟ್‌ನಿಂದ ನೀರು ಹೊರಕ್ಕೆ

ಶ್ರೀ ಕಲ್ಯಾಣ ಸ್ವಾಮೀಜಿ, ಶ್ರೀವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಶ್ರೀಅಭಿನವ ಹಾಲವೀರಪ್ಪ ಸ್ವಾಮೀಜಿ, ಶ್ರೀ ಮಹೇಶ್ವರ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಶಿವರುದ್ರಮುನಿ ಸ್ವಾಮೀಜಿ, ಶ್ರೀ ಶಿವರುದ್ರ ಸ್ವಾಮೀಜಿ, ಶ್ರೀ ಅಜಾತ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಬಸವಭೂಷಣ ಶರಣರು, ಶ್ರೀ ಪಂಚಾಕ್ಷರಿ ಶಿವಾಚಾರ್ಯರು, ಶ್ರೀ ಜಡೇಶ ಶರಣರು ಮತ್ತು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ್ಮಗೌಡ ಮತ್ತಿತರರಿದ್ದರು.

click me!