Harapanahalli: ಭಾರಿ ಮಳೆ, ಗಾಳಿಗೆ ಕುಸಿದು ಬಿದ್ದ ಟೋಲ್‌ ಗೇಟ್‌: ಹೆದ್ದಾರಿ ಬಂದ್‌

Published : Apr 06, 2022, 04:15 AM ISTUpdated : Apr 06, 2022, 07:29 AM IST
Harapanahalli: ಭಾರಿ ಮಳೆ, ಗಾಳಿಗೆ ಕುಸಿದು ಬಿದ್ದ ಟೋಲ್‌ ಗೇಟ್‌: ಹೆದ್ದಾರಿ ಬಂದ್‌

ಸಾರಾಂಶ

*  ಹರಪನಹಳ್ಳಿ, ಹೂವಿನ ಹಡಗಲಿ -ಮುಂಡರಗಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ *  ಯಾವುದೇ ಅಪಾಯ ಸಂಭವಿಸದೆ ಪಾರಾದ ಟೋಲ್‌ ಸಿಬ್ಬಂದಿ *  ಅವೈಜ್ಞಾನಿಕ ಟೋಲ್‌ ನಿರ್ಮಾಣವೇ ಇಂತಹ ಘಟನೆಗೆ ಕಾರಣ 

ಹರಪನಹಳ್ಳಿ(ಏ.06): ಮಳೆ(Rain) ಹಾಗೂ ಭಾರಿ ಗಾಳಿ ಬೀಸಿದ್ದರಿಂದ ಪಟ್ಟಣ ಹೊರವಲಯದಲ್ಲಿರುವ ಟೋಲ್‌ ಗೇಟ್‌ ಚಾವಣಿ ಕುಸಿದು ಬಿದ್ದಿದ್ದರಿಂದ ರಾಜ್ಯ ಹೆದ್ದಾರಿ(State Highway) ಬಂದ್‌ ಆದ ಘಟನೆ ಮಂಗಳವಾರ ಸಂಜೆ ಜರುಗಿದೆ. ಹರಪನಹಳ್ಳಿ, ಹೂವಿನ ಹಡಗಲಿ -ಮುಂಡರಗಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿರುವ ಟೋಲ್‌(Toll Gate) ಸಂಗ್ರಹಣೆಯ ಚಾವಣಿ ಭಾರೀ ಗಾಳಿಗೆ ಇದ್ದಕ್ಕಿದ್ದ ಹಾಗೆ ಭಾರಿ ಶಬ್ದದೊಂದಿಗೆ ರಸ್ತೆಗೆ ಕುಸಿದಿದೆ.

ಈ ಸಂದರ್ಭದಲ್ಲಿ ಟೋಲ್‌ ಸಿಬ್ಬಂದಿ ಕೌಂಟರ್‌ನಲ್ಲಿ ಇದ್ದು, ಯಾವುದೇ ಅಪಾಯ ಸಂಭವಿಸದೆ ಪಾರಾಗಿದ್ದಾರೆ. ಅಲ್ಲಿಯೇ ಇದ್ದ ವಿದ್ಯುತ್‌ ಕಂಬ ಮುರಿದು ಬಿದ್ದಿದೆ, ಜೆಸ್ಕಾಂ(GESCOM) ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ರಸ್ತೆ ಬಂದ್‌ ಆಗಿದ್ದರಿಂದ ಹಡಗಲಿ ಕಡೆಯಿಂದ ಬರುವ ಹಾಗೂ ಹರಪನಹಳ್ಳಿ ಕಡೆಯಿಂದ ಗದಗ, ಹಡಗಲಿ ಕಡೆ ಹೋಗುವ ವಾಹನ ಸವಾರರು ಪರದಾಡುವಂತಾಗಿತ್ತು.

ಚಿಕ್ಕಮಗಳೂರಲ್ಲಿ ಮಳೆ: ವರುಣನ ಆರ್ಭಟಕ್ಕೆ ಹಲವೆಡೆ ಭಾರೀ ಅನಾಹುತ

ಸ್ಥಳಕ್ಕೆ ಪಿಎಸ್‌ಐ ಪ್ರಕಾಶ ಮತ್ತು ಸಿಬ್ಬಂದಿ ಆಗಮಿಸಿ ಪಕ್ಕದ ಜಮೀನಿನಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಅವೈಜ್ಞಾನಿಕ ಟೋಲ್‌ ನಿರ್ಮಾಣವೇ ಇಂತಹ ಘಟನೆಗೆ ಕಾರಣ ಎಂದು ವಾಹನ ಸವಾರರು ದೂರಿದರು.

ಎಂಟು ಜಿಲ್ಲೆ​ಗ​ಳಲ್ಲಿ ಮಳೆ, ಮೂವರು ಬಲಿ

ಬೆಂಗಳೂರು:  ಬೆಳ​ಗಾ​ವಿ(Belagavi) ಸೇರಿ ರಾಜ್ಯದ ಎಂಟು ಜಿಲ್ಲೆ​ಗ​ಳಲ್ಲಿ ಸೋಮ​ವಾರ ರಾತ್ರಿ​ಯಿಂದೀ​ಚೆಗೆ ಕೆಲ​ಕಾಲ ಉತ್ತಮ ಮಳೆ​ಯಾ​ಗಿದ್ದು, ಮಳೆ ಸಂಬಂಧಿ ಅನಾಹುತಕ್ಕೆ ಪ್ರತ್ಯೇಕ ಪ್ರಕ​ರ​ಣ​ಗ​ಳಲ್ಲಿ ಮೂವರು ಬಲಿ​ಯಾ​ಗಿ​ದ್ದಾ​ರೆ(Death).

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಜಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಬಸವರಾಜ ನಾಗಪ್ಪ ಕಾರನ್ನವರ (27), ವಿಜಯಪುರ ನಗರದಲ್ಲಿ ಆಟೋ ಮೇಲೆ ಮರಬಿದ್ದು ಯಲ್ಲಮ್ಮಾ ಕೊಂಡಗೂಳಿ (45) ಹಾಗೂ ಹಾವೇರಿ ತಾಲೂಕಿನ ಗುತ್ತಲದಲ್ಲಿ ಮನೆ ಚಾವಣಿ ಕುಸಿದು ಬಿದ್ದು ಮುಮ್ತಾಜ್‌ ಸಿರಾಜ್‌ ಬಾಲೆಕಾಯಿ (42) ಎಂಬುವವರು ಮೃತಪಟ್ಟಿದ್ದಾರೆ.

Uttara Kannada: ಯಲ್ಲಾಪುರದಲ್ಲಿ ಭಾರೀ ಗಾಳಿ-ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಕಳೆದ ಕೆಲವು ದಿನ​ಗ​ಳಿಂದ ಬಿಸಿ​ಲ​ಬೇ​ಗೆ​ಯಿಂದ ಕಂಗೆ​ಟ್ಟಿದ್ದ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ವಿಜಯನಗರ, ಶಿವಮೊಗ್ಗ, ಕಲ​ಬು​ರ​ಗಿ​ಯಲ್ಲಿ(Kalaburagi) ಸುಮಾರು ಅರ್ಧ, ಒಂದು ಗಂಟೆ​ಗಳ ಕಾಲ ಭಾರೀ ಗಾಳಿ​ಯೊಂದಿಗೆ ಮಳೆ ಸುರಿ​ದಿದೆ. ದಿಢೀರ್‌ ಮಳೆ​ಯಿಂದಾಗಿ ಕೆಲ​ಕಾಲ ಜನ​ಜೀ​ವನ ಅಸ್ತ​ವ್ಯ​ಸ್ತ​ಗೊಂಡಿ​ದೆ. ಕಲ​ಬು​ರಗಿ, ಬೆಳ​ಗಾವಿ ಸೇರಿ​ದಂತೆ ಕೆಲ ಜಿಲ್ಲೆ​ಗ​ಳಲ್ಲಿ ಮಳೆ-ಗಾಳಿಗೆ 20ಕ್ಕೂ ಹೆಚ್ಚು ಮನೆ​ಗ​ಳಿಗೆ ಹಾನಿ​ಯಾ​ಗಿ​ದೆ.

ಭಾರೀ ಹಾನಿ: 

ಕಲ​ಬು​ರ​ಗಿ​ಯ ಅಫ​ಜ​ಲ್ಪುರ, ಚಿಂಚೋಳಿ, ಶಹಾ​ಬಾದ್‌, ಜೇವ​ರ್ಗಿ​ಯಲ್ಲಿ ಸೋಮ​ವಾರ ರಾತ್ರಿ ಕೆಲ​ಕಾಲ ಸುರಿದ ಬಿರುಗಾಳಿ ಸಹಿತ ಮಳೆ​ಯಾಗಿ​ದೆ. ಅಫಜಲ್ಪುರ ತಾಲೂಕಿನ ಕೆಕ್ಕರಸಾವಳಗಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ​ಯಾ​ಗಿ​ದ್ದು, ಧವಸ ಧಾನ್ಯಗಳು, ಬಟ್ಟೆ, ಮನೆಯ ಸಾಮಗ್ರಿಗಳು ನಾಶವಾಗಿವೆ. ಮನೆ​ಯೊಂದರ ಮೇಲೆ ವಿದ್ಯುತ್‌ ಕಂಬ ಮುರಿದು ಬಿದ್ದಿದ್ದು, ಅದೃಷ್ಟವಶಾತ್‌ ಮನೆ​ಯ​ಲ್ಲಿದ್ದ ಎಲ್ಲರೂ ಪ್ರಾಣಾ​ಪಾ​ಯ​ದಿಂದ ಪಾರಾ​ಗಿ​ದ್ದಾರೆ.

ಇನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಭಾರೀ ಗಾಳಿಗೆ ನಾಲ್ಕಕ್ಕೂ ಹೆಚ್ಚಿನ ಮನೆಗಳ ತಗಡಿನ ಚಾವಣಿ ಹಾರಿಹೋಗಿದ್ದು, ಈ ವೇಳೆ 12 ವರ್ಷದ ಬಾಲಕ ವಿಠ್ಠಲ್‌ ಗಾಯಗೊಂಡಿದ್ದಾನೆ. ಹಾವೇರಿ ಜಿಲ್ಲೆಯ ಹಲವೆಡೆ ಮಳೆ ಗಾಳಿಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಗುತ್ತಲ ಹಾವೇರಿ ರಸ್ತೆಯಲ್ಲಿ ಮರ ಬಿದ್ದು ಮೂರು ವಾಹನ ಜಖಂಗೊಂಡಿವೆæ. ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ತಾಲೂಕಿನ ಕೆಲವೆಡೆಯೂ ಭಾನು​ವಾರ ಸಾಧಾ​ರಣ ಮಳೆ​ಯಾದ ವರ​ದಿ​ಯಾ​ಗಿ​ದೆ.
 

PREV
Read more Articles on
click me!

Recommended Stories

ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ