ಉಡುಪಿ ಸ್ವರ್ಣನದಿಯಲ್ಲಿ ಸಿಕ್ಕಿದ್ದು ಫ್ಲಿಪ್ ಕಾರ್ಟ್ ವಿಗ್ರಹವೇ?

Published : Sep 01, 2020, 10:22 PM IST
ಉಡುಪಿ ಸ್ವರ್ಣನದಿಯಲ್ಲಿ ಸಿಕ್ಕಿದ್ದು ಫ್ಲಿಪ್ ಕಾರ್ಟ್ ವಿಗ್ರಹವೇ?

ಸಾರಾಂಶ

ಉಡುಪಿಯ ಸ್ವರ್ಣನದಿಯಲ್ಲಿ ಪತ್ತೆಯಾದ್ದು ಪ್ಲಿಪ್ ಕಾರ್ಟ್ ವಿಗ್ರಹವೇ/ ಸ್ಥಳಿಯರಿಗೆ ದೊರೆತ ವಿಗ್ರಹಕ್ಕೆ ಬಗೆ ಬಗೆ ಕತೆ/ ಇದೇ ಮಾದರಿ ವಿಗ್ರಹ ಫ್ಲಿಪ್ ಕಾರ್ಟ್ ನಲ್ಲಿಯೂ ಇದೆ

ಹಿರಿಯಡ್ಕ, ಉಡುಪಿ(ಸೆ. 01)    ಇಲ್ಲಿನ ಬೆಳ್ಳಂಪಳ್ಳಿಯಲ್ಲಿ ಸ್ವರ್ಣನದಿಯ ಸೇತುವೆಯ ಕೆಳಗೆ ರಾತ್ರಿ ಮೀನು ಹಿಡಿಯುವವರಿಗೆ ಆಕರ್ಷಕ ಕೃಷ್ಣನ ವಿಗ್ರಹವೊಂದು ಪತ್ತೆಯಾಗಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ.

ಸೋಮವಾರ ರಾತ್ರಿ ಸುಮಾರು 8 ಗಂಟೆಗೆ ಗಾಳ ಹಾಕಿ ಮೀನು ಹಿಡಿಯುತಿದ್ದ ಸ್ಥಳೀಯ ಯುವಕರಿಗೆ ಟಾರ್ಚ್ ಲೈಟಿಗೆ ನೀರೊಳಗೆ ಹೊಳೆಯುವ ವಸ್ತುವೊಂದು ಕಾಣಿಸಿತು. ಗಾಳ ಹಾಕುತಿದ್ದ ಯುವಕರು ಅದನ್ನು ಮೇಲೆತ್ತಿದಾಗ ಅದೊಂದು ಕೊಳಲು ಊದುವ ಕೃಷ್ಣನ ವಿಗ್ರಹವಾಗಿತ್ತು.

ತುಳುನಾಡಿನ ದೈವಾರಾಧಕರಿಗೆ ಸಂಕಷ್ಟ

ಸುಮಾರು 2 ಅಡಿ ಎತ್ತರ, 8 ಕೆಜಿ ತೂಕದ ಈ ಲೋಹ ವಿಗ್ರಹದ ಬಗ್ಗೆ ಯುವಕರು ಸ್ಥಳೀಯ ಬೆಳ್ಳಂಪಳ್ಳಿ ಭೂತರಾಜ ದೈವಾಲಯದ ಅಧ್ಯಕ್ಷ  ಪ್ರವೀಣ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದರು. ಅವರು ಈ ವಿಗ್ರಹವನ್ನು ಹಿರಿಯಡ್ಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ವಿಗ್ರಹ ನದಿಯಲ್ಲಿ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಂತೂ ಈ ವಿಗ್ರಹದ ಪ್ರಾಚೀನತೆ, ದೈವಿಕತೆಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಆದರೇ ಫ್ಲಿಪ್ ಕಾರ್ಟ್ ನಲ್ಲಿ ಈ ಫ್ಯಾನ್ಸಿ ವಿಗ್ರಹಗಳು 12,995 ರು.ಗೆ ಮಾರಾಟಕ್ಕಿದೆ. ಬಹುಶಃ ಯಾರದ್ದೋ ಮನೆಯಲ್ಲಿದ್ದ ಈ ವಿಗ್ರಹ ವಾಸ್ತುವಿಗೆ ಹೆದರಿಗೆ ನೀರಿಗೆಸೆದಿರಬಹುದು ಎಂಬ ಮಾತುಗಳು ಕೇಳಿ ಬಂದಿವೆ. 

PREV
click me!

Recommended Stories

ಪೊಲೀಸ್ ಸಿಬ್ಬಂದಿಗೆ ಬಂದೂಕು ಹೊರಿಸಿ ರಣಬಿಸಿಲಲ್ಲಿ ನಿಲ್ಲಿಸಿದ್ದ PSI ನೇತ್ರಾವತಿಗೆ, ಕೇವಲ ಎತ್ತಂಗಡಿ ಶಿಕ್ಷೆ!
ಚಿಕ್ಕಮಗಳೂರಲ್ಲಿ ಮತ್ತೊಬ್ಬ ಕೇರಳ ಬಾಲಕಿ ನಾಪತ್ತೆಯಾಗಿ 2ನೇ ದಿನ: ಸಚಿವ ಈಶ್ವರ ಖಂಡ್ರೆ ಖಡಕ್ ಆದೇಶ! ಏನಿದೆ ಇದರಲ್ಲಿ?