ಸಭಾಪತಿ ಮತ್ತು ಸಭಾಧ್ಯಕ್ಷ ಇಬ್ಬರೂ ಉತ್ತರ ಕರ್ನಾಟಕದವರೇ ಇದ್ದೇವೆ. ಹೀಗಾಗಿ ಈ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಲಾಗುವುದು| ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಹೇಗೆ ನಾಗಪುರದಲ್ಲೂ ಅಧಿವೇಶನ ನಡೆಸಲಾಗುತ್ತಿದೆ ಎನ್ನುವುದನ್ನು ನೋಡಿಕೊಂಡು ಬರುವ ವಿಚಾರವೂ ಇದೆ: ಹೊರಟ್ಟಿ|
ಹುಬ್ಬಳ್ಳಿ(ಮಾ.14): ಮಹಾರಾಷ್ಟ್ರದಲ್ಲಿ ಪ್ರತಿವರ್ಷ ನಾಗಪುರದಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಅದೇ ಮಾದರಿಯಲ್ಲೇ ಬೆಳಗಾವಿಯಲ್ಲಿ ಪ್ರತಿ ವರ್ಷವು ಅಧಿವೇಶನ ನಡೆಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಮತ್ತು ಸಭಾಧ್ಯಕ್ಷ ಇಬ್ಬರೂ ಉತ್ತರ ಕರ್ನಾಟಕದವರೇ ಇದ್ದೇವೆ. ಹೀಗಾಗಿ ಈ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಲಾಗುವುದು. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಹೇಗೆ ನಾಗಪುರದಲ್ಲೂ ಅಧಿವೇಶನ ನಡೆಸಲಾಗುತ್ತಿದೆ ಎನ್ನುವುದನ್ನು ನೋಡಿಕೊಂಡು ಬರುವ ವಿಚಾರವೂ ಇದೆ ಎಂದರು.
ಶಾಸಕ ಸಂಗಮೇಶ್ ನಡವಳಿಕೆಗೆ ಸಭಾಪತಿ ಹೊರಟ್ಟಿ ಬೇಸರ
ಸರ್ಕಾರ ಈಗಾಗಲೇ ಅನೇಕ ಸಮಿತಿಗಳನ್ನು ರಚನೆ ಮಾಡಿದೆ. ಆ ಸಮಿತಿಗಳು ಸರ್ಕಾರಕ್ಕೆ ವರದಿ ನೀಡಿವೆಯಾ? ಅವು ಅನುಷ್ಠಾನಕ್ಕೆ ಬಂದಿದೆಯೇ? ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಹೊರಟ್ಟಿ ಪ್ರತಿಕ್ರಿಯಿಸಿದರು.