ಕೇಳೋರಿಲ್ಲ ಅಡಕೆ ಬೆಳೆಗಾರರ ಗೋಳು, ನೇಣಿಗೆ ಶರಣಾದ ಶಿರಸಿ ರೈತ

Published : Sep 18, 2018, 09:38 PM ISTUpdated : Sep 19, 2018, 09:29 AM IST
ಕೇಳೋರಿಲ್ಲ ಅಡಕೆ ಬೆಳೆಗಾರರ ಗೋಳು, ನೇಣಿಗೆ ಶರಣಾದ ಶಿರಸಿ ರೈತ

ಸಾರಾಂಶ

ಒಂದೆಡೆ ಸರಕಾರ ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಿದೆ ಎಂದು ಹೇಳುತ್ತಿದೆ. ಆದರೆ ಇನ್ನೊಂದು ಕಡೆ ರೈತರ ಆತ್ಮಹತ್ಯೆ ಮಾತ್ರ ನಿಂತಿಲ್ಲ. ಸಾಲದಿಂದ ನೊಂದು ಅಡಿಕೆ ಬೆಳಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿರಸಿ[ಸೆ.18]  ಜೀವನಾಧಾರ ಬೆಳೆ ಅಡಕೆಗೆ ಕೊಳೆರೋಗ ಬಾಧಿಸಿದ್ದರಿಂದ ಸಹಕಾರಿ ಸಂಘಗಳಲ್ಲಿ ಪಡೆದ ಸಾಲ ಮರುಪಾವತಿಗೆ ದಾರಿ ಕಾಣದೆ ಬೆಳೆಗಾರರೊಬ್ಬರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.  ತಾಲೂಕಿನ ತಡಗುಣಿ ಬಳಿ ದಾಯಿಮನೆ ಗ್ರಾಮದ ನಿವಾಸಿ ಚಂದ್ರಶೇಖರ ನಾರಾಯಣ ಭಟ್ಟ (55) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಡಕೆ ತೋಟದಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಹಾರುಗಾರ ಸೇವಾ ಸಹಕಾರಿ ಸಂಘ ನೆಗ್ಗುದಲ್ಲಿ 2.77 ಲಕ್ಷ ರೂ. ಸಾಲ ಪಡೆದಿದ್ದರು. ಕೊಳೆರೋಗ
ದಿಂದ ಅಡಕೆಗೆ ಹಾನಿಯಾದ್ದರಿಂದ ಜೀವನ ನಿರ್ವಹಣೆ ಕಷ್ಟವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

PREV
click me!

Recommended Stories

ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!
Photos: 6 ವರ್ಷಗಳ ಬಳಿಕ ಮುಂಡಗೋಡಿಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ!