ಹುಬ್ಬಳ್ಳಿ: ಚಾಲಕನಿಗೆ ಮೂರ್ಛೆರೋಗ, ಸರಣಿ ಅಪಘಾತ

Kannadaprabha News   | Asianet News
Published : Jun 19, 2021, 01:46 PM IST
ಹುಬ್ಬಳ್ಳಿ: ಚಾಲಕನಿಗೆ ಮೂರ್ಛೆರೋಗ, ಸರಣಿ ಅಪಘಾತ

ಸಾರಾಂಶ

* ಹುಬ್ಬಳ್ಳಿ ನಗರದ ಗೋಕುಲ ರಸ್ತೆಯಲ್ಲಿ ನಡೆದ ಘಟನೆ  * ಚಾಲನೆ ಮಾಡುವಾಗಲೇ ಡ್ರೈವರ್‌ಗೆ ಬಂದ ಮೂರ್ಛೆ ರೋಗ  * ಐದಾರು ಜನರಿಗೆ ಸಣ್ಣಪುಟ್ಟ ಗಾಯ 

ಹುಬ್ಬಳ್ಳಿ(ಜೂ.19): ​ಚಾಲಕನಿಗೆ ಪೀಡ್ಸ್‌ ಬಂದ ಕಾರಣ ವಾಹನ ನಿಯಂತ್ರಣ ತಪ್ಪಿ 8ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಇಲ್ಲಿನ ಗೋಕುಲ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. 

ಪಾಲಿಕೆಯ ಕಸ ಸಂಗ್ರಹಿಸುವ ವಾಹನದ ಚಾಲಕ ಸುರೇಶ ಮಲ್ಲಾಡ (42) ಚಾಲನೆ ಮಾಡುವಾಗಲೇ ಮೂರ್ಛೆ ರೋಗ ಬಂದಿದೆ. ಇದರಿಂದ ವಾಹನ ನಿಯಂತ್ರಣ ತಪ್ಪಿದೆ. ಮುಂದೆ ಬರುತ್ತಿದ್ದ ಏಳೆಂಟು ವಾಹನಗಳಿಗೆ ಕಸದ ಟಿಪ್ಪರ್‌ ಡಿಕ್ಕಿ ಹೊಡೆದಿದೆ. 

ರಸ್ತೆ ದಾಟೋ ವೇಳೆ ಹುಷಾರ್‌: ಈ ವಿಡಿಯೋ ನೋಡಿದ್ರೆ ಎದೆ ಝಲ್‌ ಅನ್ನುತ್ತೆ..!

ಟಿಪ್ಪರ್‌ ಡಿಕ್ಕಿ ಹೊಡೆದ ಪರಿಣಾಮ ಐದಾರು ಜನರಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
 

PREV
click me!

Recommended Stories

ಕೈ ಪಾಳಯದಲ್ಲೀಗ ಉಪಸಮರ ಲಾಭ, ನಷ್ಟದ ಲೆಕ್ಕಾಚಾರ ಶುರು - ಸಿದ್ದುಗೆ ಬಾಗಲಕೋಟೆ, ಡಿಕೆಶಿಗೆ ದಾವಣಗೆರೆ ಮಹತ್ವದ್ದು ಯಾಕೆ ಗೊತ್ತಾ?
ದಾವಣಗೆರೆ, ಬಾಗಲಕೋಟೆ ಕ್ಷೇತ್ರಗಳು ಯಾರ ಮಡಿಲಿಗೆ? - ಕಾಂಗ್ರೆಸ್‌, ಬಿಜೆಪಿ ನಡುವೆ ನೇರ ಹಣಾಹಣಿ, ಬೆಳಗ್ಗೆ 8ರಿಂದ ಎಣಿಕೆ, 12ರ ವೇಳೆಗೆ ರಿಸಲ್ಟ್‌