ಧಾರವಾಡ: ರೂಟ್ ಸ್ಟಾಕ್ ಯೋಜನೆಯ ಲಕ್ಷಾಂತರ ರೂ. ಹಣ ಲೂಟಿ, ತನಿಖೆಗೆ ಆರ್‌ಟಿಐ ಕಾರ್ಯಕರ್ತ ಆಗ್ರಹ

By Suvarna NewsFirst Published Jun 7, 2024, 2:18 PM IST
Highlights

ಧಾರವಾಡ ವಿಭಾಗದ ಅರಣ್ಯ ಇಲಾಖೆಯ "ರೂಟ್ ಸ್ಟಾಕ್' ಯೋಜನೆ 83,90,867 ರೂ ಅನುದಾನವನ್ನ ದುರ್ಬಳಕೆ ಮಾಡಿ ಕಾಮಗಾರಿ ಮುಗಿಸದೆ ಲಕ್ಷಾಂತರ ರೂಪಾಯಿಯನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಲೂಟಿ ಮಾಡಿದ್ದಾರೆ ಅನ್ನೋ ದಾಖಲಾತಿಗಳೊಂದಿಗೆ ಈ ಕುರಿತು ಲೋಕಾಯುಕ್ತ ಮತ್ತು ಅರಣ್ಯ ಇಲಾಖೆಯ ಸಚಿವರಿಗೂ ದೂರು ಕೊಟ್ಟು ತಪ್ಪಿತಸ್ಥ ಅಧಿಕಾರಿಗಳ‌ ಮೇಲೆ ಕ್ರಮಕ್ಕೆ ಆರ್ ಟಿ ಐ ಕಾರ್ಯಕರ್ತ ಸುರೇಂದ್ರ ಉಗಾರೆ ಆಗ್ರಹಿಸಿದರು.

ವರದಿ : ಪರಮೇಶ್ ಅಂಗಡಿ

ಧಾರವಾಡ (ಜೂ.7) : ಧಾರವಾಡ ವಿಭಾಗದ ಅರಣ್ಯ ಇಲಾಖೆಯ "ರೂಟ್ ಸ್ಟಾಕ್' ಯೋಜನೆ 83,90,867 ರೂ ಅನುದಾನವನ್ನ ದುರ್ಬಳಕೆ ಮಾಡಿ ಕಾಮಗಾರಿ ಮುಗಿಸದೆ ಲಕ್ಷಾಂತರ ರೂಪಾಯಿಯನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಲೂಟಿ ಮಾಡಿದ್ದಾರೆ ಅನ್ನೋ ದಾಖಲಾತಿಗಳೊಂದಿಗೆ ಈ ಕುರಿತು ಲೋಕಾಯುಕ್ತ ಮತ್ತು ಅರಣ್ಯ ಇಲಾಖೆಯ ಸಚಿವರಿಗೂ ದೂರು ಕೊಟ್ಟು ತಪ್ಪಿತಸ್ಥ ಅಧಿಕಾರಿಗಳ‌ ಮೇಲೆ ಕ್ರಮಕ್ಕೆ ಆರ್ ಟಿ ಐ ಕಾರ್ಯಕರ್ತ ಸುರೇಂದ್ರ ಉಗಾರೆ ಆಗ್ರಹಿಸಿದರು.

Latest Videos

ಧಾರವಾಡದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಲಕ್ಷ ಲಕ್ಷ ಲೂಟಿ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪವನ್ನ ಮಾಡಿದರು. ಸದ್ಯ ವಕೀಲರು ಸುರೇಂದ್ರ ಉಗಾರೆ ಅವರ ದೂರನ್ನ ಆಲಿಸಿದ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಬೆಂಗಳೂರು ಇವರು ಎಲ್ಲ ಮುಖ್ಯ ಸಂರಕ್ಷಾಧಿಕಾರಿಗಳಿಗೆ ಆದೇಶವನ್ನ ಮಾಡಿದ್ದಾರೆ. ಸದ್ಯ ಅರಣ್ಯ ಇಲಾಖೆಯ ಸಚಿವರ ಕಚೇರಿಗೆ ದೂರು ಬಂದಿರುವುದನ್ನ ಗಮನಿಸಿ ರೂಟ್ ಸ್ಟಾಕ್ ಯೋಜನೆಯಲ್ಲಿ ಅನುದಾನ ದುರ್ಬಳಕೆ ಆಗಿರುವ ಬಗ್ಗೆ ದೂರು ಬಂದಿರುವುದರಿಂದ ಈ ಪ್ರಕರಣಕ್ಕೆ ಸಂಭಂದಿಸಿದಂತೆ ಎರಡು ವಾರಗಳಲ್ಲಿ ಸಮಗ್ರ ವರದಿ ನೀಡಲು 24 ಘಂಟೆಯೊಳಗಾಗಿ ಪ್ರಾಥಮಿಕವಾದ ವರದಿಯನ್ನ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಧಾರವಾಡ: ಬಾಲ ಕಾರ್ಮಿಕರು ಪತ್ತೆಯಾದ್ರೆ, ಮಾಲೀಕರೊಂದಿಗೆ ಪಾಲಕರ ವಿರುದ್ಧವು ಎಫ್ಐಆರ್, ಡಿಸಿ ದಿವ್ಯ ಪ್ರಭು

ಸದರಿ ಪ್ರಕರಣದ ಮಾಹಿತಿಯನ್ನು ಸರಕಾರಕ್ಕೆ‌ ಸಲ್ಲಿಸಬೇಕಾಗಿರುವುದರಿಂದ ರೂಟ್ ಸ್ಟಾಕ್ ಯೋಜನೆಯಡಿ 2020_21 ಮತ್ತು 2021_22 ಕೈಗೊಂಡ ಮುಳ್ಳುತಂತಿ ಬೇಲಿ ನಿರ್ಮಾಣ ಕಾಮಗಾರಿಗಳ ವಿವರಗಳನ್ನ ಈ ಪತ್ರಗಳೋಂದಿಗೆ ನಮೂನೆಯಲ್ಲಿ ವರ್ಷವಾರು ಮಾಹಿತಿಯನ್ನು ಬರ್ತಿ ಮಾಡಿ ಇದರೊಂದಿಗೆ ಆಯಾ ವರ್ಷದಲ್ಲಿ ಮಂಜೂರಾದ ಕ್ರಿಯಾ ಯೋಜನೆ,ಅಂದಾಜು ಪಟ್ಟಿಗಳು,ನಡುತೋಪ ಜರ್ನಲ್‌ ಗಳ ನಕಲಿ ಪ್ರತಿ,ಮುಳ್ಳು ತಂತಿಬೇಲಿ ನಿರ್ಮಾಣ ಮಾಡಲಾದ ಪ್ರದೇಶದ ನಕಾಶೆ ಇತರೆ ದಾಖಲಾತಿಗಳನ್ನು ವಿಭಾಗಗಳಿಂದ ಪಡೆದು ಕೃಡಿಕರಿಸಿ ವೃತ್ತವಾರು ವರದಿಯನ್ನು  ಒಂದು ವಾರದೊಳಗೆ ನೀಡಲೂ ಇಲಾಖೆ ಸೂಚಿಸಿದೆ.

ಈ ಯೋಜನೆಯಡಿ ನೆಡುತೋಪುಗಳನ್ನು ನಿರ್ಮಾಣವನ್ನು ಕೆನೋಪಿ ಸ್ಟ್ರೆಥ್ 10% ಕ್ಕಿಂತ ಕಡಿಮೆ ಅಥವಾ, 20-25%, 35-40% ಇರಬೇಕು, ಆದರೆ ಇವರು ಆಯ್ಕೆ ಮಾಡಿದ್ದು,90%ಕ್ಕಿಂತ ಹೆಚ್ಚಿನ ಡೆನಸಿಟಿ ಇರುವ ಏರಿಯಾ (ಥಿಕ್ ಫಾರೆಸ್ಟ್) ದಟ್ಟವಾದ ಅರಣ್ಯದಲ್ಲಿ ನೆಡುತೋಪು ನಿರ್ಮಾಣ ಮಾಡಿದ್ದಾರೆ ಈ ನೆಡುತೋಪನ್ನು ಮಾಡುವ ಸುತ್ತಲೂ 5860 ಮೀಟರ್ ಮುಳ್ಳು ತಂತಿ ಬೇಲಿ ಅಳವಡಿಸಬೇಕಾಗಿತ್ತು.ಆದರೆ ಇವರು ಅಳವಡಿಸಿದ್ದು ಕೇವಲ ಅರ್ಧಕ್ಕೆ ಮಾತ್ರ. ಇದಕ್ಕೆ ಒಟ್ಟು 2603 ಸೆಮೆಂಟ್ ಕಂಬ ಬಳಸಿ ಮುಳ್ಳು ತಂತಿ ಬೇಲಿ ನಿರ್ಮಾಣ ಮಾಡಬೇಕಾಗಿತ್ತು. ಸಿಮೆಂಟ್ ಕಂಬವನ್ನು ಕಂಬ ಪ್ರತಿ‌ಮೂರು ಮೀಟರ್ ಗೆ ಒಂದು ಇರಬೇಕು. ಪ್ರತಿ ಆರು ಕಂಬಕ್ಕೆ ಎರಡು ಸಪೋರ್ಟ್ ಕಂಬ ಹಾಕಬೇಕಿತ್ತು. ಇವರು ಮಾಡಿದ್ದು ಹತ್ತು ಕಂಬಕ್ಕೆ ಎರಡು ಸಪೋರ್ಟ್ ಕಂಬ ಅಳವಡಿಸಿದ್ದಾರೆ ಇದಕ್ಕೆ ಸರಕಾರದ ಕಡತಗಳೇ ಸಾಕ್ಷಿ ಹೇಳುತ್ತಿವೆ ಎಂದು ಹೇಳಿದರು

ಈ ಯೋಜನೆ 22-23, 23-24 ಯೋಜನೆ ಅವಧಿ 150 ಹೆಕ್ಟರ್ ಪ್ರದೇಶದಲ್ಲಿ 50 ಹೆಕ್ಟೇರ್ ಪ್ರದೇಶ ಆಯ್ಕೆ‌ ಮಾಡಿ ಅದರಲ್ಲಿ  ಗುಂಡಿ‌ ತಗೆದು 6000 ಸಸಿಗಳನ್ನು ನೆಡಲು ಯೋಜನೆ ಇತ್ತು ಆದರೆ ಇವರು 3000 ಸಸಿಗಳನ್ನು ನೆಟ್ಟಿದ್ದಾರೆ ಇನ್ನೂಳಿದ 3000 ಗುಂಡಿಗಳನ್ನು ತಗೆಯದೇ‌ ಉಳಿದ ಸಾವಿರಾರು ‌ಸಸಿಗಳನ್ನು ನಾಶ ಮಾಡಿದ್ದಾರೆ.ಈ ನೆಡುತೋಪು ಮಾಡುವ ಸುತ್ತಲೂ 3-ಮೀ ಅಗಲದ ಫೈರ್ ಫೆನ್ಸಿಂಗ್ - ಪಾತ್ ನಿರ್ಮಾಣ (FORAMATION OF NEW EXTRACTION PATH) ಮಾಡಬೇಕಿತ್ತು ಇದರ ಅನುದಾನ ರೂ 237627 ಗಳನ್ನು ಕೆಲಸ ಮಾಡಿಸದೇ ಹಣ ತಗೆದಿರುತ್ತಾರೆ ಅಲ್ಲದೆ  ಡಿ.ಸಿ.ಎಫ್ ಸ್ಥಳ ಪರಿಶೀಲನೆ ಮಾಡದೇ ಯೋಜನೆ ಅನುದಾನದ ಬಿಲ್ ಮಂಜೂರು ಮಾಡಲಾಗಿದೆ ಇದರ ಉದ್ದೇಶ ದುಡ್ಡು ಹೊಡೆಯುವುದಾಗಿ ಸ್ಥಳ ಪರಿಶೀಲನೆ ನಡೆಸಿದರೆ ಸತ್ಯಾಂಶ ಹೊರಬರುತ್ತದೆ ಇದರಲ್ಲಿ  ಡಿ.ಆರ್.ಎಫ್.ಓ, ಆರ್.ಎಪ್.ಓ,  ಎಸಿಎಫ್, ಡಿ.ಸಿ.ಎಫ್ ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇಲ್ಲಿ 432 ನೀರು ಇಂಗು ಗುಂಡಿ ನಿರ್ಮಾಣ ಮಾಡಬೇಕಿತ್ತು ಇವರು ನಿರ್ಮಾಣ ಮಾಡಿದ್ದು ಕೇವಲ 200 ಇಂಗು ಗುಂಡಿ ಮಾತ್ರ ತಗೆದಿರುವುದು ಕಂಡು ಬರುತ್ತಿದೆ ನೆಡುತೋಪುಗಳನ್ನು ಬೆಳೆಸಲು ಮಣ್ಣು ಮತ್ತು ಪೋಷಕಾಂಶ ಪರೀಕ್ಷೆ ಮಾಡಬೇಕಿತ್ತು ಆದರೆ ಇದು ಮಾಡಿರುವುದಿಲ್ಲ ನೆಡುತೋಪುಗಳ ನಿರ್ಮಾಣ ಕಾಮಗಾರಿಗೆ ವರ್ಕ್ ಅಗ್ರಿಮೆಂಟ್ ಇಲ್ಲ ವರ್ಕ್ ಆರ್ಡರ್ ಕೂಡ ಇಲ್ಲ ತುಂಡು ಗುತ್ತಿಗೆ ಕಾಮಗಾರಿ ಮಾಡುವಾಗ ಕೂಡ ತಮಗೆ ಬೇಕಾದ ಗುತ್ತಿಗೆದಾರರಿಗೆ ಕೆಲಸ ಕೊಟ್ಟು, ಅವರಿಂದ ಕೆಲಸ ಮಾಡಿಸದೇ ದುಡ್ಡು ಹೊಡೆದಿದ್ದಾರೆ. ಗುತ್ತಿಗೆದಾರರ ಹೆಸರಿನಲ್ಲಿ ಇವರೆ ಬಿಲ್ ತೆಗೆದಿದ್ದಾರೆ ಎಂಬ ಅನುಮಾನ‌ ನಮಗೆ ಕಾಡುತ್ತಿದೆ ಎಂದರು.

ಅಳತೆ ಪುಸ್ತಕದಲ್ಲಿ ಎಂದರೆ FNB (Field Note Book) ನಲ್ಲಿ ಗುತ್ತಿಗೆದಾರ ಸಹಿ ಮಾಡದೆ, DRFO ಸಹಿ ಇಲ್ಲದೇ,  ಹಣ ಬಿಡುಗಡೆ ಮಾಡಲಾಗಿದೆ ಈ ಕಾಮಗಾರಿಗಳನ್ನು  ಶೇ 100 ರಷ್ಟು ಪರಿಶೀಲಿಸಿ ದೃಡೀಕರಿಸಬೇಕಾದ ಅಧಿಕಾರಿ ಎಸಿಎಪ್ ಶ್ರೀಮತಿ ಪರಿಮಳ‌ ಹುಲಗಣ್ಣವರ ಇವರು ಕೆಲಸ ಆಗಿದೆ ಎಂದು ಸುಳ್ಳು ದೃಢೀಕರಿಸಿ ಹಗರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ನಂತರ ಕಾಮಗಾರಿ ಮುಗಿದ ಮೇಲೆ ಇದನ್ನು ಡಿ.ಸಿ.ಎಪ್‌ ಆದಂತಹ ಸೋನಲ್‌ ಇವರು 10% ಚೆಕ್ ಮೆಜರ್ ಮೆಂಟ್‌ ಮಾಡಿ ಬಿಲ್ ಅನುಮೋದನೆ ಮಾಡಬೇಕಿರುತ್ತದೆ ಆದರೆ ಇದ್ಯಾವುದನ್ನೂ ಮಾಡದೇ ಈ ಕಾಮಗಾರಿಗಳ ಬಿಲ್  ಆಗಿರುತ್ತದೆ ಕಾಮಗಾರಿಯು ಮಾರ್ಚ್-2023  ನಲ್ಲಿ ಮುಗಿದಿರುವುದಾಗಿ ಚೆಕ್ ಮೆಜರ್ಮೆಂಟ್ ಎಸಿಎಫ್ ಶ್ರೀಮತಿ ಪರಿಮಳ ಹುಳಗನ್ನವರ್ ಮಾಡಿರುತ್ತಾರೆ ಆದರೆ 2023 ರ ಎಪ್ರಿಲ್-ಮೇನಲ್ಲಿ ಕಾಮಗಾರಿ ಅಪೂರ್ಣ ಆಗಿರುವುದು ಫೋಟೋ ಮುಖಾಂತರ ಕಂಡು ಬರುತ್ತದೆ ಎಂಬುದು ಅಚ್ಚರಿ ಆತಂಕದ ಸಂಗತಿಯಾಗಿದೆ.

 

 ಎನ್‌ಡಿಎಗೆ ಕಡಿಮೆ ಸ್ಥಾನ ಹಿನ್ನಲೆ, ಹೃದಯಾಘಾತದಿಂದ ವ್ಯಕ್ತಿ ಸಾವು

ಈ ರೀತಿಯಾಗಿ ಸರ್ಕಾರದ ಕಾಮಗಾರಿಗಳನ್ನು ಸರಿಯಾಗಿ ಮಾಡದೇ ಸುಳ್ಳು  ಬಿಲ್ ಮಂಜೂರು ಮಾಡಿದ ಧಾರವಾಡ ವಿಭಾಗದ ಅರಣ್ಯ ಇಲಾಖೆಯ ಡಿ.ಎಫ್.ಓ  ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ‌ ಸೋನಲ್  ವೃಷ್ಣಿ ಶ್ರೀಮತಿ ಪರಿಮಳ ಹುಲಗಣ್ಣವರ ಎ.ಸಿ.ಎಫ್ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಪ್ರದೀಪ ಪವಾರ ವಲಯ ಅರಣ್ಯ ಅಧಿಕಾರಿ,ರಾಮಲಿಂಗಪ್ಪ ಉಪ್ಪಾರ ವಲಯ ಅರಣ್ಯ ಅಧಿಕಾರಿ, ಪರಶುರಾಮ ಮಣಕೂರ ಉಪವಲಯ ಅರಣ್ಯಾಧಿಕಾರಿ  ವಿರುದ್ಧ  ತನಿಖೆ ನಡೆಸಿ ಕ್ರಮ ಕೈಗೊಳ್ಳಲು ದೂರು ಸಲ್ಲಿಸಿದ್ದಾರೆ.

ಹೀಗಾಗಿ ಈ ಪ್ರಕರಣವನ್ನು ಅರಣ್ಯ ಇಲಾಖೆಯ ವತಿಯಿಂದ ಮಾಡಿಸದೇ ಲೋಕಾಯುಕ್ತ ತನಿಖೆಗೆ ನೀಡಬೇಕು ಎಂದು ಈಗಾಗಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು ಧಾರವಾಡ ವಲಯದ ಒಂದು ಕಾಮಗಾರಿಯಲ್ಲಿ 83,90,867 ರೂಪಾಯಿಗಳು ಅವ್ಯವಹಾರ ಹಾಗೂ ಭ್ರಷ್ಟಾಚಾರ ಆಗಿರುವ ಬಗ್ಗೆ ದಾಖಲೆ ಸಮೇತ ಗೌರವಾನ್ವಿತ ಲೋಕಾಯುಕ್ತಕ್ಕೆ, ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಅರಣ್ಯ ಇಲಾಖೆಯ ಮುಖ್ಯಸ್ಥರಾದ ಬೃಜಿಶಕುಮಾರ್ ದೀಕ್ಷಿತ್ IFS ಪಿಸಿಸಿಎಪ್ ,  APCCF ಅವರಿಗೆ ಗಮನಕ್ಕೆ‌ ತಂದು ದೂರು ಕೊಡಲಾಗಿತ್ತು ಸದ್ಯ ಈ ದೊಂದು ದೋರಿನನ್ವಯ ಇಡಿ ರಾಜ್ಯಾದ್ಯಂತ ರೂಟ್ ಸ್ಟಾಕ್ ಕಾಮಗಾರಿಯ ಬಗ್ಗೆ ಅರಣ್ಯ ಇಲಾಖೆಯ ಸಚಿವರು ದಾಖಲೆಗಳನ್ನ ನೀಡುವಂತೆ ಆದೇಶ ಮಾಡಿದ್ದಾರೆ..ಸದ್ಯ ವಕೀಲ ಸುರೇಂದ್ರ ಉಗಾರೆ ಮಾಡಿರುವ ದೂರನ್ನ‌ಅರಣ್ಯ ಸಚಿವರು ಮಾಡಿದ್ದಾರೆ...ಇದು ವಕೀಲ ಉಗಾರ ಅವರ ಗೆಲುವಿಗೆ ಮೊದಲ‌ ಹೆಜ್ಜೆಯಾಗಿದೆ

click me!