ನಾಯಿ ಮರಿಗಳನ್ನು ಮಾರಿ ಕೊರೋನಾ ಪರಿಹಾರ ನಿಧಿಗೆ ಹಣ..!

Kannadaprabha News   | Asianet News
Published : Apr 09, 2020, 11:24 AM IST
ನಾಯಿ ಮರಿಗಳನ್ನು ಮಾರಿ ಕೊರೋನಾ ಪರಿಹಾರ ನಿಧಿಗೆ ಹಣ..!

ಸಾರಾಂಶ

ತಮ್ಮ ಮನೆಯಲ್ಲಿದ್ದ ಜರ್ಮನ್‌ ಶಫರ್ಡ್‌ ತಳಿಯ ಮೂರು ಶ್ವಾನದ ಮರಿಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ 25 ಸಾವಿರ ರುಪಾಯಿ ಹಣವನ್ನು ನಿವೃತ್ತ ಪೊಲೀಸ್‌ ಕಾವೇರಪ್ಪ ಅವರು ಮುಖ್ಯಮಂತ್ರಿ ಅವರ ಕೋವಿಡ್‌ -19 ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

ಮಡಿಕೇರಿ(ಏ.09): ತಮ್ಮ ಮನೆಯಲ್ಲಿದ್ದ ಜರ್ಮನ್‌ ಶಫರ್ಡ್‌ ತಳಿಯ ಮೂರು ಶ್ವಾನದ ಮರಿಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ 25 ಸಾವಿರ ರುಪಾಯಿ ಹಣವನ್ನು ನಿವೃತ್ತ ಪೊಲೀಸ್‌ ಕಾವೇರಪ್ಪ ಅವರು ಮುಖ್ಯಮಂತ್ರಿ ಅವರ ಕೋವಿಡ್‌ -19 ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

ಮಡಿಕೇರಿಯ ಕಾವೇರಪ್ಪ ಅವರು 20 ವರ್ಷಗಳ ಕಾಲ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಮನೆಯಲ್ಲಿರುವ ಜರ್ಮನ್‌ ಶಫರ್ಡ್‌ ಶ್ವಾನ ಕೆಲವು ದಿನಗಳ ಹಿಂದೆ 13 ಮರಿಗಳನ್ನು ಹಾಕಿತ್ತು. ಅದರಲ್ಲಿ 5 ಮರಿ ಮೃತಪಟ್ಟಿದ್ದವು.

ಲಾಕ್‌ಡೌನ್‌ ಎಫೆಕ್ಟ್: ಸೆಲೂನ್‌ ಶಾಪ್‌ ಬಂದ್‌, ಮನೆ ಬಾಗಿಲಿಗೆ ಕ್ಷೌರಿಕರು!

ಉಳಿದ 8 ಶ್ವಾನದ ಮರಿಯಲ್ಲಿ 7 ಮರಿಗಳನ್ನು ಮಾರಾಟ ಮಾಡಿದ್ದಾರೆ. ಒಂದು ಮರಿಗೆ 9 ಸಾವಿರ ರುಪಾಯಿಯಂತೆ ಮಾರಾಟ ಮಾಡಿದ್ದು, 3 ಮರಿಗೆ ಬಂದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಬುಧವಾರ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಮೊತ್ತವನ್ನು ಹಸ್ತಾಂತರ ಮಾಡಿದರು.

PREV
click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ