ಹೊಸ ತಿರುವು ಪಡೆದುಕೊಂಡ 19ರ ಯುವತಿ ಕೊಲೆ ಕೇಸ್ : ರವಿ ಚನ್ನಣ್ಣನವರ್ ಎಂಟ್ರಿ

Kannadaprabha News   | Asianet News
Published : Oct 14, 2020, 02:39 PM ISTUpdated : Oct 14, 2020, 03:33 PM IST
ಹೊಸ ತಿರುವು ಪಡೆದುಕೊಂಡ 19ರ ಯುವತಿ ಕೊಲೆ ಕೇಸ್ : ರವಿ ಚನ್ನಣ್ಣನವರ್ ಎಂಟ್ರಿ

ಸಾರಾಂಶ

ರಾಮನಗರದಲ್ಲಿ ನಡೆದ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೀಗ ಈ ಪ್ರಕರಣಕ್ಕೆ ರವಿ ಚನ್ನಣ್ಣನವರ್ ಎಂಟ್ರಿಯಾಗಿದೆ. 

ಕುದೂರು (ಅ.14):  ಬೆಟ್ಟಹಳ್ಳಿ ಗ್ರಾಮದ ಯುವ​ತಿ ಹೇಮಲತಾ ಕೊಲೆಯ ಪ್ರಕರಣದ ತನಿಖೆ ಜವಾ​ಬ್ದಾ​ರಿ​ಯನ್ನು ​ಸರ್ಕಾರ ಬೆಂಗ​ಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್‌ ಅಧೀ​ಕ್ಷಕ ರವಿ ಡಿ. ಚ​ನ್ನ​ಣ್ಣ​ನ​ವರ್‌ ಅವ​ರಿಗೆ ವಹಿ​ಸಿ​ದೆ.

ಯುವತಿ ಹೇಮ​ಲತಾ ಕೊಲೆ ಪ್ರಕ​ರಣ ವಿವಿಧ ರೀತಿಯ ತಿರುವುಗಳನ್ನು ಪಡೆಯುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಜತೆಗೆ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾರಿ ಗಿರೀಶ್‌ ಅವ​ರಿಗೆ ಕೊರೋನಾ ಸೋಂಕು ತಗು​ಲಿದೆ. ಈ ಹಿನ್ನೆ​ಲೆ​ಯಲ್ಲಿ ಕೊಲೆ ರಹಸ್ಯ ಬೇಧಿ​ಸುವ ಕೆಲ​ಸ​ ರವಿ ಡಿ.ಚ​ನ್ನ​ಣ್ಣ​ನ​ವರ್‌ ಹೆಗ​ಲಿಗೆ ಬಂದಿ​ದೆ.

ಕಳೆದ ಅ. 8ರಂದು ಬೆಟ್ಟಹಳ್ಳಿ ಗ್ರಾಮದ 19 ವರ್ಷದ ಹೇಮಲತಾ ಕಾಣೆಯಾಗಿದ್ದಳು. ನಿರಂತರ ಹುಡುಕಾಟದ ನಂತರ ಮಾವಿನ ತೋಟದಲ್ಲಿ ಶವವಾಗಿ ಪತ್ತೆಯಾದಳು. ಪೊಲೀ​ಸರು ಪುನೀತ್‌ ಎಂಬ ಯುವಕನನ್ನು ವಿಚಾರಣೆಗೆ ಕರೆದೊಯ್ದಿದ್ದರು. ಇದರ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಯುವ​ತಿ​ಯದು ಕೊಲೆ, ಅತ್ಯಾಚಾರ, ಮರ್ಯಾದೆ ಹತ್ಯೆ ಹೀಗೆ ವಿವಿಧ ರೀತಿಯ ವದಂತಿ​ಗಳು ಹರಿ​ದಾ​ಡು​ತ್ತಿವೆ.

ಲಾಂಗು, ಮಚ್ಚು ಝಳಪಿಸಿದ್ರೆ ಪಿಸ್ತೂಲು ಸದ್ದು: ರವಿ ಚನ್ನಣ್ಣನವರ್‌ ಖಡಕ್‌ ಎಚ್ಚರಿಕೆ ...

ಮಾಗಡಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಹೇಮಲತಾ ಕೊಲೆ ಪ್ರಕ​ರಣ ಕುರಿತಾಗಿ ಮಾಹಿತಿ ಸಂಗ್ರಹಿಸಿದ ರವಿ ಡಿ.ಚ​ನ್ನ​ಣ್ಣ​ನ​ವರ್‌ ಅವ​ರು , ರಾಮನಗರ ಎಎಸ್ಪಿ ರಾಮರಾಜ್, ಡಿವೈಎಸ್ಪಿ ಓಂಪ್ರಕಾಶ್‌, ಮಾಗಡಿ ವೃತ್ತ ನಿರೀ​ಕ್ಷಕ ಬಿ.ಎಸ್‌.ಮಂಜುನಾಥ್‌, ಮಾಗಡಿ ಸಬ್‌ ಇನ್ಸ್‌ಪೆಕ್ಟರ್‌ ವೆಂಕ​ಟೇಶ್‌, ಕುದೂರು ಸಬ್‌ ಇನ್ಸ್‌ಪೆಕ್ಟರ್‌ ಟಿ.ಎಚ್‌ .ಮಂಜು​ನಾಥ್‌ ಅವ​ರಿಗೆ ತನಿಖೆ ಕುರಿತು ಮಾರ್ಗ​ದ​ರ್ಶನ ಮಾಡಿ​ದರು.

ಈ ಪ್ರಕ​ರಣ ಕುರಿತು ಮಾತನಾಡಿದ ರವಿ.ಡಿ. ಚನ್ನಣ್ಣನವರ್‌, ಇದೊಂದು ಗಂಭೀರ ಪ್ರಕರಣ. ತಮಗನಿಸಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಕೊಲೆಯ ಕಾರಣಗಳನ್ನು ತಮಗೆ ತಿಳಿದ ರೀತಿಯಲ್ಲಿ ಸುದ್ದಿ ಹರಡಿಸಬಾರದು. ಇದರಿಂದ ತನಿಖೆಗೆ ಹಿನ್ನ​ಡೆ​ಯಾಗಿ ಸತ್ಯದ ಬೆಳಕು ಜಗತ್ತಿಗೆ ಕಾಣಲು ತಡವಾಗುತ್ತದೆ. ಇಷ್ಟನ್ನೂ ಮೀರಿ ಅಪಪ್ರಚಾರದಲ್ಲಿ ತೊಡಗಿದರೆ ಸೈಬರ್‌ ಕ್ರೈಂ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾಣೆಯಾಗಿದ್ದ ಯುವತಿ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆ

ರಾಮನಗರ ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಗಿರೀಶ್‌ ಅವರು ರಜೆಯಲ್ಲಿರುವ ಕಾರಣ ತನಿಖೆ ಜವಾ​ಬ್ದಾರಿ ನಮ್ಮ ಮೇಲಿದೆ. ಈ ಪ್ರಕ​ರಣ ಸಂಬಂಧ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳಲ್ಲಿ ಮಾಹಿತಿ ಸಂಗ್ರಹಿಸಿದ್ದೇನೆ. ಯಾವುದೇ ಕಾರಣಕ್ಕೂ ಅಪರಾಧಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ