ಸವದತ್ತಿ ರೇಣುಕಾದೇವಿ ದೇಗುಲ: ಮೂಢನಂಬಿಕೆ ವಿರೋಧಿಸುವ ಸಚಿವ ಜಾರಕಿಹೊಳಿಗೆ ನಿಂಬೆ ಹಣ್ಣು ನೀಡಿದ ಅರ್ಚಕ!

Published : Oct 13, 2024, 02:09 PM IST
ಸವದತ್ತಿ ರೇಣುಕಾದೇವಿ ದೇಗುಲ: ಮೂಢನಂಬಿಕೆ  ವಿರೋಧಿಸುವ ಸಚಿವ ಜಾರಕಿಹೊಳಿಗೆ ನಿಂಬೆ ಹಣ್ಣು ನೀಡಿದ ಅರ್ಚಕ!

ಸಾರಾಂಶ

ಅರ್ಚಕರು ಕೊಟ್ಟ ಲಿಂಬೆ ಹಣ್ಣು ಇದು, ಅದಕ್ಕೆ ಕೈಯಲ್ಲಿ ಇಟ್ಟುಕೊಂಡಿರುವೆ ಎಂದು ಆಪ್ತ ಶಾಸಕರ ಎದುರು ಈ ಮಾಹಿತಿಯನ್ನ ಹಂಚಿಕೊಂಡ ಸತೀಶ ಜಾರಕಿಹೊಳಿ 

ಬೆಳಗಾವಿ(ಅ.13):  ಸವದತ್ತಿ ರೇಣುಕಾದೇವಿ ದೇಗುಲಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು(ಭಾನುವಾರ) ಆಗಮಿಸಿದ್ದಾರೆ. ಸತೀಶ ಜಾರಕಿಹೊಳಿ ಅವರಿಗೆ ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಹೂಗುಚ್ಚ‌ ನೀಡಿ ಸ್ವಾಗತಿಸಿದ್ದಾರೆ. 

ಈ ವೇಳೆ ಸಚಿವ ಸತೀಶ ಜಾರಕಿಹೊಳಿಗೆ ದೇಗುಲದ ಅರ್ಚಕ ಲಿಂಬೆ ಹಣ್ಣು ನೀಡಿದ್ದಾರೆ. ಸವದತ್ತಿ ರೇಣುಕಾದೇವಿ ದೇಗುಲದ ಅರ್ಚಕರಿಂದ ಸತೀಶಗೆ ಲಿಂಬೆ ಹಣ್ಣು ವಿತರಣೆ ಮಾಡಿದ್ದಾರೆ.  ಕೈಯಲ್ಲೇ ಲಿಂಬೆ ಹಣ್ಣು ಹಿಡಿದುಕೊಂಡು ಸಿಎಂ ಸಿದ್ದರಾಮಯ್ಯ ಬರುವಿಕೆಗೆ ಸತೀಶ ಜಾರಕಿಹೊಳಿ ಅವರು ಕಾದು ಕುಳಿತಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಮೂಢನಂಬಿಕೆ  ವಿರೋಧಿಸುತ್ತಾರೆ. 

2028ಕ್ಕೆ ಸಿಎಂ ಆಗುವ ಇಚ್ಛೆ ನನಗೂ ಇದೆ: ಸಚಿವ ಸತೀಶ್‌ ಜಾರಕಿಹೊಳಿ

ಅರ್ಚಕರು ಕೊಟ್ಟ ಲಿಂಬೆ ಹಣ್ಣು ಇದು, ಅದಕ್ಕೆ ಕೈಯಲ್ಲಿ ಇಟ್ಟುಕೊಂಡಿರುವೆ ಎಂದು ಆಪ್ತ ಶಾಸಕರ ಎದುರು ಈ ಮಾಹಿತಿಯನ್ನ ಸತೀಶ ಜಾರಕಿಹೊಳಿ ಅವರು ಹಂಚಿಕೊಂಡಿದ್ದಾರೆ. 

PREV
Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!