ಕಾಳಿಕಾ ದೇವಿಗೆ ಅವಮಾನ: ಮುತಾಲಿಕ್‌ ಆಕ್ರೋಶ

Published : Jul 05, 2022, 07:27 AM IST
ಕಾಳಿಕಾ ದೇವಿಗೆ ಅವಮಾನ: ಮುತಾಲಿಕ್‌ ಆಕ್ರೋಶ

ಸಾರಾಂಶ

*   ಹಿಂದೂ ಧರ್ಮ ಅವಮಾನ ಮಾಡುವ ಮನಸ್ಥಿತಿಯುಳ್ಳ ಕಮ್ಯುನಿಸ್ಟರ ವರ್ಗ ಇಲ್ಲಿದೆ *  ತಮ್ಮ ಪಾಡಿಗೆ ಇರುವುದನ್ನು ಬಿಟ್ಟು ಬೇರೆಯವರ ನಂಬಿಕೆಗೆ ತೊಂದರೆ ಕೊಡಬಾರದು  *  ಹಿಂದೂ ದೇವರಿಗೆ ಅವಮಾನ ಮಾಡಿದವರ ಮೇಲೆ ಇನ್ನೂ ಕ್ರಮವಾಗಿಲ್ಲ  

ಧಾರವಾಡ(ಜು.05):  ತಮಿಳುನಾಡಿನಲ್ಲಿ ಕಾಳಿಕಾ ದೇವಿಗೆ ಅವಮಾನ ಮಾಡಿರುವ ಸಂಗತಿ ಅಸಭ್ಯವಾದುದು. ದೇವರಲ್ಲಿ ನಂಬಿಕೆ ಇಡುವುದು ಅವರವರ ನಂಬಿಕೆಗೆ ಬಿಟ್ಟಿದ್ದು. ಬೇರೆಯವರ ನಂಬಿಕೆಗಳಿಗೆ ತೊಂದರೆ ಕೊಡುವುದು ಸರಿಯಲ್ಲ. ಆದ್ದರಿಂದ ಈ ಘಟನೆಯನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಮೋದ್‌ ಮುತಾಲಿಕ್‌ಹೇಳಿದರು.
ಸೋಮವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಹಿಂದೂ ಧರ್ಮ ಅವಮಾನ ಮಾಡುವ ಮನಸ್ಥಿತಿಯುಳ್ಳ ಕಮ್ಯುನಿಸ್ಟರ ವರ್ಗ ಇಲ್ಲಿದೆ. ತಮ್ಮ ಪಾಡಿಗೆ ಇರುವುದನ್ನು ಬಿಟ್ಟು ಬೇರೆಯವರ ನಂಬಿಕೆಗೆ ತೊಂದರೆ ಕೊಡಬಾರದು ಎಂದು ಪ್ರಶ್ನಿಸಿದ್ದಾರೆ.  
ಹಿಂದೂ ದೇವರಿಗೆ ಅವಮಾನ ಮಾಡಿದವರ ಮೇಲೆ ಇನ್ನೂ ಕ್ರಮವಾಗಿಲ್ಲ. ನೂಪುರ್‌ ಶರ್ಮಾ ಮಾಡಿರುವ ಪೋಸ್ಟ್‌ಬಗ್ಗೆ ನ್ಯಾಯಾಲಯಗಳು ಸಹ ಟೀಕೆ ವ್ಯಕ್ತಪಡಿಸಿದವು. ಸ್ವಯಂ ಪ್ರೇರಣೆಯ ಪ್ರಕರಣ ಸಹ ದಾಖಲಾಯಿತು. ಇದೀಗ ತಮಿಳುನಾಡಿನಲ್ಲಾಗಿರುವ ಘಟನೆ ನೋಡಿ ಏತಕ್ಕೆ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲು ಮಾಡಿಕೊಳ್ಳೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ