ಹುಬ್ಬಳ್ಳಿ: ಹಳಿಗೆ ಬಿದ್ದಿದ್ದ ಪ್ರಯಾಣಿಕನ ಪ್ರಾಣ ಕಾಪಾಡಿದ ಪೇದೆ..!

Kannadaprabha News   | Asianet News
Published : Mar 12, 2021, 12:30 PM IST
ಹುಬ್ಬಳ್ಳಿ: ಹಳಿಗೆ ಬಿದ್ದಿದ್ದ ಪ್ರಯಾಣಿಕನ ಪ್ರಾಣ ಕಾಪಾಡಿದ ಪೇದೆ..!

ಸಾರಾಂಶ

ಗೋವಾದ ವಾಸ್ಕೋಡಿಗಾಮಾ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ| ಸಿಸಿ ಕ್ಯಾಮೆರಾದಲ್ಲಿ ಪ್ರಯಾಣಿಕನ ರಕ್ಷಿಸುವ ದೃಶ್ಯಗಳು ಸೆರೆ| ಪ್ರಯಾಣಿಕನ ಪ್ರಾಣ ಕಾಪಾಡಿದ ಆರ್‌ಪಿಎಫ್‌ ಮುಖ್ಯಪೇದೆ ಕೆ.ಎಂ. ಪಾಟೀಲ| 

ಹುಬ್ಬಳ್ಳಿ(ಮಾ.12): ಚಲಿಸುವ ರೈಲನ್ನು ಹತ್ತುವ ವೇಳೆ ಕಾಲು ಜಾರಿ ಹಳಿಗೆ ಬಿದ್ದಿದ್ದ ಪ್ರಯಾಣಿಕನನ್ನು ಆರ್‌ಪಿಎಫ್‌ ಮುಖ್ಯಪೇದೆಯೊಬ್ಬರು ಜೀವದ ಹಂಗನ್ನು ತೊರೆದು ರಕ್ಷಿಸಿದ್ದಾರೆ.

ಗೋವಾದ ವಾಸ್ಕೋಡಿಗಾಮಾ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ಗುರುವಾರ ನಡೆದಿದ್ದು, ಸಿಸಿ ಕ್ಯಾಮೆರಾದಲ್ಲಿ ಪ್ರಯಾಣಿಕನನ್ನು ರಕ್ಷಿಸುವ ದೃಶ್ಯಗಳು ಸೆರೆಯಾಗಿವೆ.

ಹುಬ್ಬಳ್ಳಿ: ಮಾ. 12 ರಂದು ಸಿದ್ಧಾರೂಢರ ಸಾಂಕೇತಿಕ ರಥೋತ್ಸವ

ವಾಸ್ಕೋ ಡಿಗಾಮಾ - ಪಾಟ್ನಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಫ್ಲಾಟ್‌ ಫಾರಂ ನಂ. 1ರಲ್ಲಿ ನಿಂತಿತ್ತು. ಬಳಿಕ ಅದು ಚಲಿಸಲು ಪ್ರಾರಂಭವಾದ ಬಳಿಕ ಪ್ರಯಾಣಿಕರೊಬ್ಬರು ಅದನ್ನು ಹತ್ತಲು ಪ್ರಯತ್ನಿಸಿದರು. ಈ ವೇಳೆ ಕಾಲು ಜಾರಿ ಹಳಿಗೆ ಬಿದ್ದರು. ಸಮೀಪದಲ್ಲಿದ್ದ ಆರ್‌ಪಿಎಫ್‌ ಮುಖ್ಯಪೇದೆ ಕೆ.ಎಂ. ಪಾಟೀಲ ಓಡಿ ಹೋಗಿ ಪ್ರಯಾಣಿಕನ ಕೈಯನ್ನು ಹಿಡಿದು ಎಳೆದರು. ಇದರಿಂದ ಪ್ರಯಾಣಿಕನ ಜೀವ ಉಳಿದಿದೆ. ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡ ಮುಖ್ಯಪೇದೆ ಕೆ.ಎಂ.ಪಾಟೀಲರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

PREV
click me!

Recommended Stories

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ಗೆ ಜೀವಭಯ? ಗುಪ್ತಚರ ವರದಿಯಲ್ಲಿ ಶಾಕಿಂಗ್ ಮಾಹಿತಿ
Karnataka SIR: ಮುರಾ ಗ್ರಾಮ ಮರ, ಟ್ರೀ ಬರೆದು ಎಡವಟ್ಟು, ಎಸ್‌ಐಆರ್ ಕನ್ನಡಲ್ಲೇ ನಡೆಸಲು ಕರವೇ ಆಗ್ರಹ