ಕುಶಾಲನಗರ: ಸ್ಮಶಾನಕ್ಕೂ ನುಗ್ಗಿದ ಪ್ರವಾಹ ನೀರು, ಅಂತ್ಯಸಂಸ್ಕಾರಕ್ಕೆ ಪರದಾಟ

Published : Jul 25, 2023, 01:40 PM IST
ಕುಶಾಲನಗರ: ಸ್ಮಶಾನಕ್ಕೂ ನುಗ್ಗಿದ ಪ್ರವಾಹ ನೀರು, ಅಂತ್ಯಸಂಸ್ಕಾರಕ್ಕೆ ಪರದಾಟ

ಸಾರಾಂಶ

ರುದ್ರಭೂಮಿ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡಿತ್ತು. ಇದರಿಂದ ಮಹಿಳೆಯ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ರುದ್ರಭೂಮಿ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.

ಕುಶಾಲನಗರ(ಜು.25):  ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಗ್ರಾಮದ ಮಹಿಳೆ ಮೃತಪಟ್ಟಿದ್ದು ಕಾವೇರಿ ಪ್ರವಾಹದ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆಗೆ ಪರದಾಡುವ ಪರಿಸ್ಥಿತಿ ಎದುರಾಯಿತು.

ಹಕ್ಕೆ ಗ್ರಾಮದ ಮಹಿಳೆ ಮಂಚಮ್ಮ (76 ) ಭಾನುವಾರ ರಾತ್ರಿ ಮೃತಪಟ್ಟಿದ್ದು ಗ್ರಾಮದ ರುದ್ರಭೂಮಿ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡಿತ್ತು. ಇದರಿಂದ ಮಹಿಳೆಯ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ರುದ್ರಭೂಮಿ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.

ಮಂಗಳೂರು: ಪ್ರವಾಹದಲ್ಲೇ ಸಾಗಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು!

ಈ ಬಗ್ಗೆ ತಹಸೀಲ್ದಾರ್‌ ಗಮನ ಸೆಳೆಯಲಾಯಿತು. ನಂತರ ಸ್ಥಳೀಯ ಗ್ರಾಮ ಲೆಕ್ಕಿಗರು ನೊಂದವರ ಮನೆಗೆ ತೆರಳಿ ಬದಲಿ ಜಾಗಕ್ಕೆ ಕ್ರಮ ಕೈಗೊಂಡಿದ್ದು ಕೂಡಿಗೆ ಗ್ರಾಮದ ವ್ಯಾಪ್ತಿಯ ನದಿ ತಟದಲ್ಲಿ ಅಂತ್ಯಕ್ರಿಯೆ ನಡೆಯಿತು.

PREV
Read more Articles on
click me!

Recommended Stories

ಜೈಲಿಗೆ ಹಾಕ್ಲಿ, ನೇಣಿಗೇ ಹಾಕ್ಲಿ..ವಂದೇ ಮಾತರಂ ಎರಡು ಚರಣ ಮಾತ್ರ ನಾವು ಹಾಡೋದು: KPCC ಅಧ್ಯಕ್ಷ ಬಿಕೆ ಹರಿಪ್ರಸಾದ್‌
ಯಶವಂತಪುರ, KSR ಬೆಂಗಳೂರು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳೇ ಇಲ್ಲ: ರೈಲ್ವೆ ಇಲಾಖೆಗೆ CAG ತರಾಟೆ