ನಿವೃತ್ತ ನೌಕರಗೆ 1 ರು. ಪರಿಹಾರ ಪಾವತಿಸಲು IAS ಅಧಿಕಾರಿಗೆ ಕೋರ್ಟ್ ಸೂಚನೆ

Suvarna News   | Asianet News
Published : Jan 11, 2020, 01:26 PM ISTUpdated : Jan 11, 2020, 03:31 PM IST
ನಿವೃತ್ತ ನೌಕರಗೆ 1 ರು. ಪರಿಹಾರ ಪಾವತಿಸಲು IAS ಅಧಿಕಾರಿಗೆ ಕೋರ್ಟ್ ಸೂಚನೆ

ಸಾರಾಂಶ

ನಿವೃತ್ತ ನೌಕರರೋರ್ವರಿಗೆ ನಷ್ಟದ ಪರಿಹಾರ ಪ್ರಕರಣ ಸಂಬಂಧ 60 ದಿನದ ಒಳಗೆ 1 ಪಾವತಿ ಮಾಡಬೇಕು ಎಂದು IAS ಅಧಿಕಾರಿಗೆ ಶೀವಮೊಗ್ಗ ಸಿವಿಲ್  ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ತೀರ್ಪು ನೀಡಿದೆ. 

ಶಿವಮೊಗ್ಗ [ಜ.11]: ಐಎಎಸ್ ಅಧಿಕಾರಿ ವಿ.ಪೊನ್ನುರಾಜ್  ಮೊಕದ್ದಮೆ ಪ್ರಕರಣವೊಂದರಲ್ಲಿ 1 ರು. ಪರಿಹಾರವನ್ನು ದೂರುದಾರರಿಗೆ  60 ದಿನದೊಳಗೆ ಪಾವತಿಸುವಂತೆ ಶಿವಮೊಗ್ಗದ 3 ನೇ ಹೆಚ್ಚುವರಿ ಸಿವಿಲ್  ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ತೀರ್ಪು ನೀಡಿದೆ. 

"

ಕೆಪಿಟಿಸಿಎಲ್ ಎಂಡಿಯಾಗಿರುವ ಹಾಗೂ ಈ  ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ವಿ.ಪೊನ್ನುರಾಜ್ ವಿರುದ್ಧ ಕಂದಾಯ ಇಲಾಖೆಯ ನಿವೃತ್ತ ನೌಕರ ಶಿವಪ್ಪ ಶಿವಮೊಗ್ಗದ ಒಂದನೇ ಸಿವಿಲ್ ನ್ಯಾಯಾಲಯ ಕಿರಿಯ ವಿಭಾಗದಲ್ಲಿ 1 ರೂ. ಮಾನನಷ್ಟ ಮೊಕದ್ದಮೆ  ದಾಖಲಿಸಿದ್ದರು.

ವಕೀಲ ಎ.ಎಂ.ಮಹದೇವಪ್ಪ ಎಂಬುವವರು ನಿವೃತ್ತ ನೌಕರ ಕೆ.ಶಿವಪ್ಪ ವಿರುದ್ಧ 2011 ರ ಎಪ್ರಿಲ್ 5 ರಂದು  ಅವರು ನಿವೃತ್ತರಾದರೂ ಕಂದಾಯ ಇಲಾಖೆಯ ಸಾರ್ವಜನಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುತ್ತಾರೆಂದು ಡಿಸಿ ಪೊನ್ನುರಾಜ್ ಗೆ  ಸಲ್ಲಿಸಿದ್ದರು. 

ಈ ಬಗ್ಗೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಯಾವುದೇ ನೋಟೀಸ್ ನೀಡದೆ, ವಿಚಾರಣೆ ನಡೆಸದೇ ಶಿವಪ್ಪ ಯಾವುದೇ ಇಲಾಖೆಗಳಿಗೆ ಹೋಗದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದಲ್ಲದೆ ಆಯಾ ಇಲಾಖೆಗಳ ನೋಟೀಸ್ ಬೋರ್ಡಿನಲ್ಲೂ ಪ್ರಕಟಿಸಲಾಗಿತ್ತು . 

ಅರಣ್ಯ ಕುಸಿತ: ರಾಜ್ಯದಲ್ಲಿ ಶಿವಮೊಗ್ಗ ನಂ.1!

ಇದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ ಶಿವಪ್ಪ ರಿಟ್ ಸಲ್ಲಿಸುತ್ತಿದ್ದಂತೆ ಪ್ರತಿವಾದ ಮಾಡುವ ಬದಲಾಗಿ ಪೊನ್ನುರಾಜ್ ಸುತ್ತೋಲೆ ಬೇಷರತ್ತಾಗಿ ಹಿಂಪಡೆದಿದ್ದರು. ಪೊನ್ನುರಾಜ್ ಸುತ್ತೋಲೆ ಹೊರಡಿಸಿದ ಪರಿಣಾಮ ತಮಗೆ ಸುಮಾರು 25 ಲಕ್ಷ ರೂ.ನಷ್ಟ ಸಂಭವಿಸಿದ್ದು ತಾವು ಮನನೊಂದಿರುವ ಹಿನ್ನಲೆಯಲ್ಲಿ 1 ರು. ನಷ್ಟದ ಮೊಕದ್ದಮೆ ದಾಖಲಿಸಿದ್ದರು.

ಓಮ್ನಿಯಲ್ಲಿ ಕೊಳೆತ ಮಹಿಳೆ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !..

ಈ ಸಂಬಂಧ ಇದೀಗ ವಿಚಾರಣೆ ನಡೆಸಿದ ಶಿವಮೊಗ್ಗದ 3 ನೇ  ಹೆಚ್ಚುವರಿ ಸಿವಿಲ್  ಮತ್ತು ಜೆಎಮ್ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಹೆಚ್ ಸತೀಶ್,  ಪೋನ್ನುರಾಜ್ ದೂರುದಾರ ಶಿವಪ್ಪಗೆ 60 ದಿನದೊಳಗೆ 1 ರು. ಪಾವತಿಸುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ. 

PREV
click me!

Recommended Stories

ಕರಾವಳಿಯಿಂದ ಬೆಂಗಳೂರಿಗೆ ಮಾ. 22 ರಂದು ವಿಶೇಷ ರೈಲು ಘೋಷಣೆ, ಮಡ್ಗಾಂವ್‌ನಿಂದ ಮಂಗಳೂರು ಆಗಿ ರಾಜಧಾನಿಗೆ ಪಯಣ
ಮಾರ್ಚ್‌ 22 ರಂದು ಬೆಂಗಳೂರಿಗೆ ವಿಶೇಷ ಮೆಮು ರೈಲು, ತುಮಕೂರಿನಿಂದ ಯಶವಂತಪುರ ಮಾರ್ಗವಾಗಿ ಬಾಣಸವಾಡಿಗೆ ಪ್ರಯಾಣ