ವಿಜಯಪುರ: ಹೃದಯಾಘಾತದಿಂದ ಪೈಲ್ವಾನ್ ಶ್ರೀಕಾಂತ್‌ ನಾಯಕ್ ಸಾವು

Published : Jul 25, 2024, 09:52 PM ISTUpdated : Jul 26, 2024, 10:39 AM IST
ವಿಜಯಪುರ: ಹೃದಯಾಘಾತದಿಂದ ಪೈಲ್ವಾನ್ ಶ್ರೀಕಾಂತ್‌ ನಾಯಕ್ ಸಾವು

ಸಾರಾಂಶ

ಏಕಾಏಕಿ ಬೆನ್ನು, ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದ್ರೆ, ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಶ್ರೀಕಾಂತ್ ಸಾವನ್ನಪ್ಪಿದ್ದಾರೆ. 

ವಿಜಯಪುರ(ಜು.25): ಹೃದಯಾಘಾತದಿಂದ ಪೈಲ್ವಾನ್ ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ಇಂದು(ಗುರುವಾರ) ನಡೆದಿದೆ. ಶ್ರೀಕಾಂತ್ ನಾಯಕ್(30) ಮೃತಪಟ್ಟ ದುರ್ದೈವಿ. 

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಪೈಲ್ವಾನ್ ಶ್ರೀಕಾಂತ್ ನಾಯಕ್‌ ಭಾರ ಎತ್ತುವ ಸ್ಪರ್ಧೆಗಳಿಗೆ ಹೆಸರುವಾಸಿಯಾಗಿದ್ದರು. ಶ್ರೀಕಾಂತ್ 240 ಕೆ.ಜಿ ವರೆಗೆ ಭಾರ ಎತ್ತಿ ಸಾಧನೆ ಮಾಡಿದ್ದರು. 
ಇಂದು ಏಕಾಏಕಿ ಬೆನ್ನು, ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದ್ರೆ, ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಶ್ರೀಕಾಂತ್ ಸಾವನ್ನಪ್ಪಿದ್ದಾರೆ. 

ಜುಂಬಾ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಪೈಲ್ವಾನ್ ಶ್ರೀಕಾಂತ್ ಅವರಿಗೆ ಮದುವೆಯಾಗಿ ಎರಡೂ ಮಕ್ಕಳನ್ನ ಹೊಂದಿದ್ದಾರೆ. ಕಳೆದ 18 ವರ್ಷಗಳಿಂದ ಭಾರ ಎತ್ತುವ ಸ್ಪರ್ಧೆಯಲ್ಲಿ ಶ್ರೀಕಾಂತ ಪಾಲ್ಗೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತ ಪೈಲ್ವಾನ್ ಶ್ರೀಕಾಂತ ಭಾರ ಎತ್ತುವ ಸ್ಪರ್ಧೆಗಳಲ್ಲಿ ಬೆಳ್ಳಿ ಗಧೆ, ಬೆಳ್ಳಿ ಕಡಗಗಳನ್ನ ಗೆದ್ದು ಸಾಧನೆ ಮಾಡಿದ್ದರು. 

PREV
Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!