ಲಾಕ್‌ಡೌನ್‌ ಎಫೆಕ್ಟ್‌: ವಿಶ್ವ ಮಧ್ವ ಪರಿಷತ್‌ನಿಂದ ಆನ್‌ಲೈನ್‌ ಧಾರ್ಮಿಕ ಶಿಬಿರ

Kannadaprabha News   | Asianet News
Published : Apr 25, 2020, 10:45 AM IST
ಲಾಕ್‌ಡೌನ್‌ ಎಫೆಕ್ಟ್‌: ವಿಶ್ವ ಮಧ್ವ ಪರಿಷತ್‌ನಿಂದ ಆನ್‌ಲೈನ್‌ ಧಾರ್ಮಿಕ ಶಿಬಿರ

ಸಾರಾಂಶ

ವಿಶ್ವ ಮಧ್ವ ಮಹಾಪರಿಷತ್‌ ಬಾಗಲಕೋಟೆ ಘಟಕ ಉಪನಿಷತ ಯುವಕರಿಗಾಗಿ ಆನ್‌ಲೈನ್‌ ಮೂಲಕ ಧಾರ್ಮಿಕ ಶಿಬಿರ| ಆಧ್ಯಾತ್ಮದ ಅರಿವು ಮೂಡಿಸಲು ಉತ್ತರಾ​ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶ|  ಏ. 25ರಿಂದ ಮೇ 3ರವರೆಗೆ ಬೆಳಗ್ಗೆ 10 ರಿಂದ 11 ಮಧ್ಯಾಹ್ನ 11ರಿಂದ 12 ಹಾಗೂ ಸಂಜೆ 4ರಿಂದ 5 ಮತ್ತು 5 ರಿಂದ 6ರವರೆಗೆ ಆನ್‌ಲೈನ್‌ ಧಾರ್ಮಿಕ ಶಿಬಿರ|

ಬಾಗಲಕೋಟೆ(ಏ.25): ಕೊರೋನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಅನಿವಾರ್ಯವಾಗಿರುವ ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯಲ್ಲಿ ಆಧ್ಯಾತ್ಮದ ಅರಿವು ಮೂಡಿಸಲು ಉತ್ತರಾ​ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ವಿಶ್ವ ಮಧ್ವ ಮಹಾಪರಿಷತ್‌ ಬಾಗಲಕೋಟೆ ಘಟಕ ಉಪನಿಷತ ಯುವಕರಿಗಾಗಿ ಆನ್‌ಲೈನ್‌ ಮೂಲಕ ಧಾರ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದ್ದು ವಿಪ್ರ ಸಮಾ​ಜ​ದ​ವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಚಾಲಕ ಡಾ.ರಘೋತ್ತಮಾಚಾರ್ಯ ನಾಗಸಂಪಗಿ ವಿನಂತಿಸಿಕೊಂಡಿದ್ದಾರೆ.

ಇಂದಿನಿಂದ (ಏ. 25) ಮೇ 3ರವರೆಗೆ ಬೆಳಗ್ಗೆ 10 ರಿಂದ 11 ಮಧ್ಯಾಹ್ನ 11ರಿಂದ 12 ಹಾಗೂ ಸಂಜೆ 4ರಿಂದ 5 ಮತ್ತು 5 ರಿಂದ 6ರವರೆಗೆ ಆನ್‌ಲೈನ್‌ ಧಾರ್ಮಿಕ ಶಿಬಿರ ನಡೆಯಲಿದೆ. 
ಪಂ.ರಘೋತ್ತಮಾಚಾರ್ಯ ನಾಗಸಂಪಿಗಿ, ಪಂ. ಭೀಮಸೇನಾಚಾರ್ಯ ಪಾಂಡುರಂಗಿ, ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗಿ, ಪಂವಿಜಯೀಂದ್ರಾಚಾರ್ಯ ಯತ್ನಟ್ಟಿ ಅವರುಗಳು ಮಾರ್ಗದರ್ಶನ ಮಾಡಲಿದ್ದಾರೆ. 

ಜನರ ನಿದ್ದೆ​ಗೆ​ಡಿ​ಸಿದ ಕೊರೋನಾ ಸೋಂಕು: ಎಲ್ಲೆಡೆ ತೀವ್ರ ಕಟ್ಟೆ​ಚ್ಚರ

ಇಚ್ಛಿತರು ರಘೋತ್ತಮಾಚಾರ್ಯ ನಾಗಸಂಪಗಿ(9480431318), ವಿನಾಯಕ ದೇಸಾಯಿ (9480588628) ಇವರಲ್ಲಿ ಹೆಸರು ನೋಂದಾಯಿಸಬೇಕು. ಅವರಿಗೆ ಆನ್‌ಲೈನ್‌ ಲಿಂಕ್‌ ಕಳುಹಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

PREV
click me!

Recommended Stories

ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ 'ಡ್ರಿಫ್ಟಿಂಗ್' ದರ್ಬಾರ್: ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಪುಂಡಾಟ; RC ಕ್ಯಾನ್ಸಲ್‌ಗೆ ಪೊಲೀಸರ ನಿರ್ಧಾರ!
ಚಿಕ್ಕಮಗಳೂರಿನಲ್ಲಿ ಆಟವಾಡ್ತಿದ್ದ ಮಕ್ಕಳನ್ನು ಕೂಡಿಹಾಕಿ ಉತ್ತರ ಭಾರತ ಪ್ರಿನ್ಸಿಪಾಲ್‌ನಿಂದ ಹಲ್ಲೆ!