ಅಂಕೋಲಾ: ಮಾಂಗಲ್ಯ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

By Kannadaprabha NewsFirst Published Sep 24, 2023, 2:30 AM IST
Highlights

ಸೀಟ್‌ ಅಂಚಿನೊಳಗೆ ಹೊಳೆಯುತ್ತಿದ್ದ ಚಿನ್ನದ ಸರವನ್ನು ನಿರ್ವಾಹಕ ಎ.ಎ. ಮುಜಾವರ ಗಮನಿಸಿದ್ದಾರೆ. ಮಾಂಗಲ್ಯ ಸರ ಮರಳಿ ಬಬೀತಾ ತಳೇಕರ ಅವರಿಗೆ ನೀಡಿ ಪ್ರಾಮಾಣಿಕತೆಯ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಅಂಕೋಲಾ(ಸೆ.24): ಸಾರಿಗೆ ಬಸ್‌ನಲ್ಲಿ ಕಳೆದುಕೊಂಡಿದ್ದ ಮಾಂಗಲ್ಯ ಸರವನ್ನು ಮರಳಿ ವಾರಸುದಾರರಿಗೆ ಹಿಂದಿರುಗಿಸಿ ಅಂಕೋಲಾ ಬಸ್ ಡಿಪೋದ ನಿರ್ವಾಹಕ ಎ.ಎ. ಮುಜಾವರ ಪ್ರಾಮಾಣಿಕತೆ ಮೆರೆದಿದ್ದಾರೆ.

ಅಂಕೋಲಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿರುವ ಬಬೀತಾ ತಳೇಕರ ಕರ್ತವ್ಯಕ್ಕೆ ಬರಲು ಕಾರವಾರ- ಅಥಣಿ ಬಸ್‌ನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಬಸ್‌ನಲ್ಲಿ ಮಾಂಗಲ್ಯ ಸರ್ ತುಂಡಾಗಿ ಬಿದ್ದು, ಸೀಟ್‌ನ ಅಂಚಿನೊಳಗೆ ಸೇರಿಕೊಂಡಿತ್ತು. ಇದನ್ನು ಬಬಿತಾ ತಳೇಕರ ಗಮನಿಸಿದೆ ಆಸ್ಪತ್ರೆಗೆ ಕರ್ತವ್ಯಕ್ಕೆ ಸಾಗಿದ್ದರು.

ಉತ್ತರ ಕನ್ನಡ: ಬಿಜೆಪಿ-ಕಾಂಗ್ರೆಸ್ ನಡುವೆ ಶುರುವಾಯ್ತು ಸುರಂಗ ಕಲಹ!

ಸೀಟ್‌ ಅಂಚಿನೊಳಗೆ ಹೊಳೆಯುತ್ತಿದ್ದ ಚಿನ್ನದ ಸರವನ್ನು ನಿರ್ವಾಹಕ ಎ.ಎ. ಮುಜಾವರ ಗಮನಿಸಿದ್ದಾರೆ. ಮಾಂಗಲ್ಯ ಸರ ಮರಳಿ ಬಬೀತಾ ತಳೇಕರ ಅವರಿಗೆ ನೀಡಿ ಪ್ರಾಮಾಣಿಕತೆಯ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

click me!