ಮಾ.8ಕ್ಕೆ ಬೆಂಗಳೂರಲ್ಲಿ ಈ ಮಾರ್ಗದ ಮೆಟ್ರೋ ಸೇವೆ ಇರಲ್ಲ

Kannadaprabha News   | Asianet News
Published : Mar 06, 2020, 07:52 AM IST
ಮಾ.8ಕ್ಕೆ ಬೆಂಗಳೂರಲ್ಲಿ ಈ ಮಾರ್ಗದ ಮೆಟ್ರೋ ಸೇವೆ ಇರಲ್ಲ

ಸಾರಾಂಶ

ಮಾರ್ಚ್ 8 ರಂದು ಬೆಂಗಳೂರಿನ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಇರುವುದಿಲ್ಲ. ಸಿವಿಲ್ ನಿರ್ವಹಣೆ ಹಿನ್ನೆಲೆಯಲ್ಲಿ ಸೇವೆಯಲ್ಲಿ ವ್ಯತ್ಯಯವಾಗಲಿದೆ. 

ಬೆಂಗಳೂರು [ಮಾ.06]:  ನಾಗಸಂದ್ರ ಮತ್ತು ಮಂತ್ರಿ - ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾ.8ರಂದು 2 ಗಂಟೆ ಸಮಯ ಮೆಟ್ರೋ ರೈಲು ಸೇವೆ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 7ರಿಂದ 9ರವರೆಗೆ ಸಿವಿಲ್‌ ನಿರ್ವಹಣಾ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ.

ಹಸಿರು ಮಾರ್ಗ (ಯಲಚೇನಹಳ್ಳಿ- ನಾಗಸಂದ್ರ)ದಲ್ಲಿರುವ ಮಹಾಕವಿ ಕುವೆಂಪು ರಸ್ತೆ ಮತ್ತು ರಾಜಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸಿವಿಲ್‌ ಕಾರ್ಯವನ್ನು ಬಿಎಂಆರ್‌ಸಿಎಲ್‌ ಕೈಗೆತ್ತಿಕೊಂಡಿದೆ. ಹೀಗಾಗಿ ನಾಗಸಂದ್ರ ಮತ್ತು ಮಂತ್ರಿಸ್ಕೆ$್ವೕರ್‌- ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾ.8ರಂದು ಬೆಳಗ್ಗೆ 7ರಿಂದ 9ಗಂಟೆ ವರೆಗೆ ರೈಲು ಸೇವೆ ಸ್ಥಗಿತಗೊಳ್ಳಲಿದೆ.

ನಮ್ಮ ಮೆಟ್ರೋದಲ್ಲಿ ಬಿರುಕು; ಪಿಲ್ಲರ್ ಬೇಗ ಕಟ್ರೋ..!...

ಆದರೆ, ಅಂದು ಸಿವಿಲ್‌ ಕಾಮಗಾರಿ ವೇಳೆಯಲ್ಲಿ ಯಲಚೇನಹಳ್ಳಿ ಮತ್ತು ಮಂತ್ರಿ - ಸಂಪಿಗೆ ರಸ್ತೆ ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲು ಸೇವೆ ಕಾರ್ಯನಿರ್ವಹಿಸಲಿದೆ. ಸಿವಿಲ್‌ ಕಾರ್ಯ ಪೂರ್ಣಗೊಂಡ ಬಳಿಕ ನಾಗಸಂದ್ರ ಮತ್ತು ಯಲಚೇನಹಳ್ಳಿ ನಿಲ್ದಾಣಗಳ ನಡುವೆ ರೈಲು ಸೇವೆ ಪುನರಾರಂಭಗೊಳ್ಳಲಿದೆ. ಈ ಅವಧಿಯಲ್ಲಿ ಮೆಟ್ರೋ ರೈಲು ಪ್ರಯಾಣಿಕರು ಸಹಕರಿಸುವಂತೆ ಮನವಿ ಮಾಡಿರುವ ಮೆಟ್ರೋ ರೈಲು ನಿಗಮ, ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾಹಿತಿ ನೀಡಿದೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ