ಕರ್ನಾಟಕದ ರೈಲ್ವೆಗೆ ಮೋದಿ ಸರ್ಕಾರ 7,750 ಕೋಟಿ ಅನುದಾನ ನೀಡಿದೆ: ಕೇಂದ್ರ ಸಚಿವ ಸೋಮಣ್ಣ

Published : Nov 17, 2024, 11:42 AM IST
ಕರ್ನಾಟಕದ ರೈಲ್ವೆಗೆ ಮೋದಿ ಸರ್ಕಾರ 7,750 ಕೋಟಿ ಅನುದಾನ ನೀಡಿದೆ: ಕೇಂದ್ರ ಸಚಿವ ಸೋಮಣ್ಣ

ಸಾರಾಂಶ

ಈ ಹಿಂದಿನ ಯುಪಿಎ ಅವಧಿಯಲ್ಲಿ ಕರ್ನಾಟಕದ ರೈಲ್ವೆಗೆ ಕೇವಲ 830 ಕೋಟಿ ನೀಡುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ವಾರ್ಷಿಕ 7750 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ಭಾರತ ಸರ್ಕಾರದಲ್ಲಿ ಅನುದಾನಕ್ಕೆ ಕೊರತೆಯಿಲ್ಲ ಅನುದಾನವನ್ನು ಯಾವ ರೀತಿಯಲ್ಲಿ ಲೆಕ್ಕಾಚಾರ ಮಾಡಿ ಕಾರ್ಯಗತವಾಗಿ ತರಬೇಕು ಎಂಬ ನಂಬಿಕೆಯ ಮೇಲೆ ಸಚಿವ ಸ್ಥಾನ ಒಲಿದಿದೆ: ಕೇಂದ್ರ ಸಚಿವ ವಿ.ಸೋಮಣ್ಣ  

ತಿಪಟೂರು(ನ.17):  ಕೆ.ಎಸ್.ಆರ್‌ಬೆಂಗಳೂರು-ಶಿವಮೊಗ್ಗ ಟೌನ್‌ ಜನಶತಾಬ್ಬಿ ಎಕ್ಸ್‌ಪ್ರೆಸ್ ಹಾಗೂ ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ಜನಶತಾಬ್ದ ಎಕ್ಸ್‌ಪ್ರೆಸ್ ರೈಲುಗಳಿಗೆ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ನೀಡಿದರು. 

ಈ ವೇಳೆ ಮಾತನಾಡಿದ ಸಚಿವರು, ಈ ಹಿಂದಿನ ಯುಪಿಎ ಅವಧಿಯಲ್ಲಿ ಕರ್ನಾಟಕದ ರೈಲ್ವೆಗೆ ಕೇವಲ 830 ಕೋಟಿ ನೀಡುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ವಾರ್ಷಿಕ 7750 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ಭಾರತ ಸರ್ಕಾರದಲ್ಲಿ ಅನುದಾನಕ್ಕೆ ಕೊರತೆಯಿಲ್ಲ ಅನುದಾನವನ್ನು ಯಾವ ರೀತಿಯಲ್ಲಿ ಲೆಕ್ಕಾಚಾರ ಮಾಡಿ ಕಾರ್ಯಗತವಾಗಿ ತರಬೇಕು ಎಂಬ ನಂಬಿಕೆಯ ಮೇಲೆ ಸಚಿವ ಸ್ಥಾನ ಒಲಿದಿದೆ. ದೇಶದ್ಯಾಂತ ನೂತನವಾಗಿ 11 ಕಾಮಗಾರಿಗಳನ್ನು 39000 ಕೋಟಿ ರೂಪಾಯಿಗಳಲ್ಲಿ ಪ್ರಾರಂಭಿಸಿದ್ದು, ಆರು ತಿಂಗಳಲ್ಲಿ ಸಾವಿರ ಕೋಟಿಗೂ ಹೆಚ್ಚು ಅನುದಾನಗಳು ಬಿಡಗಡೆಯಾಗಿದ್ದು ರೈಲ್ವೆ ಕೆಳಸೇತುವೆ, ಮೇಲೇತುವೆ ಕಾಮಗಾರಿಗಳು ಕಾರ್ಯಗತವಾಗಿವೆ. ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳಲ್ಲಿ ಕಾರಣಾಂತರಗಳಿಂದ ವಿಳಂಬ, ಸ್ಥಗಿತಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು ಶ್ರೀಘ್ರದಲ್ಲಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಕ್ತಾಯ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗುವುದು ಎಂದರು. 

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಮಾದರಿಯಲ್ಲಿ ಮರುನಿರ್ಮಾಣ: ಸೋಮಣ್ಣ

ಹೊಸ ಕಾಮಗಾರಿಗಳಾದ ಹಾಸನ ಹಿರಿಯೂರು ತಿಪಟೂರು ಗ್ರೀನ್ ಫೀಲ್ಡ್ ಕಾರಿಡಾರ್‌ಯೋಜನೆಗೆ 3800 ಕೋಟಿ, ನೆಲಮಂಗಲ ತುಮಕೂರು ಆರು ಪಥದ ರಸ್ತೆಗೆ 2 ಸಾವಿರ ಕೋಟಿ, ತುರವೇಕೆರೆ-ಚಿಂಚೂರು ರಸ್ತೆ ಅಭಿವೃದ್ಧಿಗೆ 617 ಕೋಟಿಯ ಡಿಪಿಆರ್‌ ಸಿದ್ಧತೆಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ತಿಪಟೂರು ನಗರದಲ್ಲಿ ವಂದೇ ಭಾರತ್ ರೈಲು ನಿಲುಗಡೆ ಹಾಗೂ ಅರಳಗುಪ್ಪೆಯಲ್ಲಿ ಚಿಕ್ಕಮಗಳೂರು ರೈಲು ಗಾಡಿ ನಿಲುಗಡೆಗೆ ಅವಕಾಶ ಮಾಡಲಾಗುವುದು. ತುಮಕೂರು ರಾಯದುರ್ಗ, ತುಮಕೂರು ದಾವಣಗೆರೆ, ರೈಲ್ವೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು. 

ತಿಪಟೂರು ತಾಲೂಕಿನ ಹೊನ್ನವಳ್ಳಿ, ಹಾಸನವೃತ್ತದ ಕಾಮಗಾರಿಗಳನ್ನು ಕಾರ್ಯಗತ ಮಾಡಿ, ತಿಪಟೂರು ಯುಜಿಡಿ ನೀರು ಈಚನೂರು ಕೆರೆಗೆ ಮಿಶ್ರಣವಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಪ್ರತ್ಯೇಕ ಯೋಜನೆಯನ್ನು ರೂಪಿಸಲಾ ಗುವುದು. ನಗರದಲ್ಲಿ ಬಸವೇಶ್ವರ ಪುತ್ಥಳಿಯ ಬಗ್ಗೆ ಮಾತನಾಡುತ್ತಾ ಕಾನೂನು ತೊಡುಕುಗಳಿದ್ದರೆ ಉಪವಿಭಾಗಧಿಕಾರಿ ಹಾಗೂ ಸರ್ಕಾರದ ಹಂತದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ವಿಮಾನ ನಿಲ್ದಾಣದಲ್ಲಿ ಯಾವ ರೀತಿಯಲ್ಲಿ ಸ್ವಚ್ಚತೆ ಕಂಡು ಬರುತ್ತದೆಯೋ ಅದೇ ರೀತಿಯಲ್ಲಿ ಭಾರತೀಯ ರೈಲ್ವೆ ಹಾಗೂ ನಿಲ್ದಾಣಗಳಲ್ಲಿ ಸ್ವಚ್ಛತೆ ಅಧ್ಯತೆ ನೀಡಲಾಗುವುದು ಎಂದರು. 

ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಡಿಆ‌ರ್ ಎಂ ಶಿಲ್ಪಿ ಅಗರವಾಲ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಲೋಹಿತಾಶ್ವ,  ದಯಾನಂದ್, ತಾಂತ್ರಿಕ ವಿಭಾಗದ ರಾಘವೇಂದ್ರ, ಚಂದ್ರಶೇಖರ್, ವಿ?ಗೌಡ, ಭರತ್, ಗಿರೀಶ್ ಕಳಗೊಂಡ, ಹಿರಿಯ ಪೊಲೀಸ್ ಅಧಿಕಾರಿ ಶ್ಯಾಮ್ ಪ್ರಶಾಂತ್, ತೇಜಸ್, ಬೆಂಗಳೂರು ವಿಭಾಗೀಯ ಅಧಿಕಾರಿ ಯೋಗೀಶ್ ಮೋಹನ್, ಬಿಜೆಪಿ ಜಿಲ್ಲಾ ಧ್ಯಕ್ಷ ಹೆಬ್ಬಾಕ ರವಿ, ಪ್ರಧಾನ ಕಾರ್ಯದರ್ಶಿ ಗಂಗರಾಜು, ಉಪವಿಭಾಗಾಧಿಕಾರಿ ಸಪ್ತ, ತಹಶೀಲ್ದಾರ್ ಪವನ್ ಕುಮಾರ್, ಶಾಸಕ ಜ್ಯೋತಿ ಗಣೇಶ್, ಸುರೇಶ್ ಗೌಡ, ಮಾಜಿ ಶಾಸಕ ಮಸಾಲೆ ಜಯರಾಮ್, ನಿವೃತ್ತ ಎಸಿಪಿ ಲೋಕೇಶ್ವರ, ಜೆಡಿಎಸ್ ಮುಖಂಡ ಶಾಂತಕುಮಾರ್, ನಗರಸಭಾ ಸದಸ್ಯ ರಾಮಮೋಹನ್, ಸೊಪ್ಪುಗಣೇಶ್, ಶಶಿ ಕಿರಣ್, ಮೋಹನ್‌ರಾಜ್, ಮತ್ತಿತರರಿದ್ದರು.

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ